ಗನ್‌ ಹಿಡಿದು ಓಡಾಡಿ ಕ್ಯಾಮರಾ ಕದ್ದ ವ್ಯಕ್ತಿ, ಮತ್ತೊಂದು ಕ್ಯಾಮರಾದಲ್ಲಿ ಸೆರೆಯಾಯ್ತು ಫೋಟೊ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸಾಗರ: ಹುಲಿ ಗಣತಿಗಾಗಿ ಅರಣ್ಯದ ವಿವಿಧೆಡ ಅರಣ್ಯ ಇಲಾಖೆ ಇರಿಸಿರುವ ಕ್ಯಾಮರಾಗಳು (cameras) ಕಳ್ಳತನವಾಗುತ್ತಿವೆ. ಈ ಮಧ್ಯೆ ಸಾಗರ ತಾಲೂಕಿನ ಅರಣ್ಯದೊಳಗೆ ಗನ್‌ ಹಿಡಿದು ಓಡಾಡಿದ್ದ ವ್ಯಕ್ತಿಯೊಬ್ಬ ಕ್ಯಾಮರಾ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು, ಕ್ಯಾಮರಾ ಕಳವು ಕುರಿತು ಅರಣ್ಯ ಇಲಾಖೆ ಎರಡು ಪ್ರತ್ಯೇಕ ದೂರು ನೀಡಿದೆ.

ಕೇಸ್‌ 1 : 4 ಕ್ಯಾಮರಾಗಳು ಕಳವು

ಕಾರ್ಗಲ್ ಅರಣ್ಯ ವಲಯದ ಬ್ರಾಹ್ಮಣ ಕೊಪ್ಪರಿಗೆ ಹಾಗೂ ತಲಕಳಲೆ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ನಾಲ್ಕು ದುಬಾರಿ ಕ್ಯಾಮೆರಾಗಳು ಕಳ್ಳತನವಾಗಿವೆ. ಹುಲಿ ಗಣತಿ ಕಾರ್ಯಕ್ಕಾಗಿ ಅರಣ್ಯ ಇಲಾಖೆಯು ಈ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Kargal-Police-Station-Sagara-Taluk

Kargal-Police-Station-Sagara-Taluk

ಏಪ್ರಿಲ್ 1ರಂದು ಈ ಕ್ಯಾಮೆರಾಗಳನ್ನು ಅರಣ್ಯದ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿತ್ತು. ಏಪ್ರಿಲ್ 7ರಂದು ಉಪವಲಯ ಅರಣ್ಯಾಧಿಕಾರಿ ಮೈಲಾರಪ್ಪ ಬಿ. ಕಾಶಂಬಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಕಳುವಾದ 4 ಕ್ಯಾಮೆರಾಗಳ ಒಟ್ಟು ಮೌಲ್ಯ ಸುಮಾರು 1.60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕೇಸ್‌ 2 : ಗನ್‌ ಹಿಡಿದು ಓಡಾಡಿದ್ದ ವ್ಯಕ್ತಿ

ಕಣಪಗಾರು ಗಸ್ತಿನ ಕಲ್ಲುರಾಶಿ ಎಂಬಲ್ಲಿ ಹುಲಿ ಗಣತಿಗಾಗಿ ಅಳವಡಿಸಿದ್ದ ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿದೆ. ಏಪ್ರಿಲ್ 7ರಂದು ಅರಣ್ಯ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಈ ಕ್ಯಾಮೆರಾವನ್ನು ಕಳ್ಳತನ ಮಾಡುತ್ತಿದ್ದ ದೃಶ್ಯವು ಸಮೀಪದ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಏಪ್ರಿಲ್ 3ರಂದು ವ್ಯಕ್ತಿಯೊಬ್ಬ ಗನ್ ಹಿಡಿದು ಓಡಾಡುತ್ತಿರುವುದು ಹಾಗೂ ಏಪ್ರಿಲ್ 5ರಂದು ಕ್ಯಾಮೆರಾ ಕಳ್ಳತನ ಮಾಡುತ್ತಿರುವುದು ದಾಖಲಾಗಿದೆ.

ಇದನ್ನೂ ಓದಿ : ಹಂಸಿಣಿ ನೀರಾನೆಯ ಕೊನೆಕ್ಷಣದ CCTV ದೃಶ್ಯಾವಳಿ ರಿಲೀಸ್‌, ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗ

ಕಾರ್ಗಲ್‌ ವನ್ಯಜೀವಿ ವಿಭಾಗದ ಆರ್‌ಎಫ್‌ಒ ನವೀನ್‌ ಕುಮಾರ್‌ ದೂರಿನ ಮೇರೆಗೆ ಕಾರ್ಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Comment