GOOD NEWS | ಬಸ್ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥೆ ಪ್ರತ್ಯಕ್ಷ, ಯುವಕರು, ಅಧಿಕಾರಿಗಳಿಂದ ಬದಲಾಯ್ತು ಆಕೆಯ ಬದುಕು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
➤ ಸುದ್ದಿಯ ಮುಂದಿನ 10 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಲೈವ್.ಕಾಂ | SAGARA NEWS | 03 JANUARY 2021

ಮಾನಸಿಕ ಅಸ್ವಸ್ಥೆಯೊಬ್ಬಳಿಗೆ ಊಟ, ಬಟ್ಟೆ, ಚಿಕಿತ್ಸೆ ಕೊಡಿಸಿ, ಆಕೆಯನ್ನು ಅನಾಥಶ್ರಮಕ್ಕೆ ಸೇರಿಸಿ ಸಾಗರದ ಯುವಕರ ತಂಡ ಮಾನವೀಯತೆ ಮೆರೆದಿದೆ. ಪೊಲೀಸರು, ಸಾಗರ ನಗರಸಭೆ ಅಧಿಕಾರಿಗಳು ಈ ಕಾರ್ಯದಲ್ಲಿ ಜೊತೆಯಾಗಿದ್ದರು.

ಎಲ್ಲಿ ಇದು? ಯಾರಿದು ಮಹಿಳೆ?

ಸಾಗರದ ಕೆಳದಿ ರಸ್ತೆಯ ರಾಣಿ ಚೆನ್ನಮ್ಮ ಸರ್ಕಲ್‍ನ ಬಸ್‍ ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ. ಅವರ ಹೆಸರು, ಊರು ಗೊತ್ತಾಗಿಲ್ಲ. ತೀವ್ರ ಚಳಿ ಮತ್ತು ರಾತ್ರಿ ವೇಳೆ ಮಹಿಳೆಯೊಬ್ಬಳು ಏಕಾಂಗಿಯಾಗಿ ಹೀಗೆ ಪಟ್ಟಣದಲ್ಲಿ ಇರುವುದು ಸುರಕ್ಷಿತವಲ್ಲ ಎಂದು ಮನಗಂಡ ಯುವಕರ ತಂಡ, ಆಕೆಯ ರಕ್ಷಣೆ ಮಾಡಿ, ಪೊಲೀಸರ ನೆರವಿನೊಂದಿಗೆ ಅನಾಥಾಶ್ರಮಕ್ಕೆ ಸೇರಿಸಿದ್ದಾರೆ.

ನೆರವಾದ ಸೋಷಿಯಲ್ ಟೀಂ

ದಲಿತ ಸಂಘರ್ಷ ಸಮಿತಿಯ ನಾಗರಾಜ್ ಅವರು ಮಹಿಳೆಯನ್ನು ಗಮನಿಸಿ, ಊಟ, ಬಟ್ಟೆ ವ್ಯವಸ್ಥೆ ಮಾಡಿದರು. ಸೋಷಿಯಲ್ ಟೀಂನ ಪತ್ರಕರ್ತ ಇಮ್ರಾನ್ ಸಾಗರ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸ್ಥಿತಿ ಕಂಡು ಕೂಡಲೆ ಕಾರ್ಯಪ್ರವೃತ್ತರಾದ ಇಮ್ರಾನ್ ಸಾಗರ್, ಪೊಲೀಸರು ಮತ್ತು ಸಾಗರ ನಗರಸಭೆಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ತಮ್ಮ ಪರಿಚಿತ ಸಿದ್ದಾಪುರದ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥ ನಾಗರಾಜ್ ನಾಯ್ಕ್ ಅವರನ್ನು ಸಂಪರ್ಕಿಸಿ, ಮಹಿಳೆಯನ್ನು ಅಲ್ಲಿಗೆ ಸೇರಿಸಿದ್ದಾರೆ.

ಇನ್ಸ್‍ಪೆಕ್ಟರ್ ಅಶೋಕ್ ಕುಮಾರ್, ನಗರಸಭೆ ಆಯುಕ್ತ ನಾಗಪ್ಪ, ಪೋಲೀಸ್ ಸಿಬ್ಬಂದಿಗಳಾದ ಪ್ರತಿಭಾ, ಮಲ್ಲೇಶ್, ಸಂತೋಷ್ ಹಾಗೂ ಸೋಶಿಯಲ್ ಟೀಂನ ಅಣಲೇಕೊಪ್ಪದ ಅಬ್ಬಾಸ್, ಆಂಬುಲೆನ್ಸ್ ಫಯಾಜ್, ಬೆಂಗಳೂರಿನ ಜಾಕಿರ್ ಈ ಕಾರ್ಯದಲ್ಲಿ ಜೊತೆಯಾಗಿದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment