ಹಣಗೆರೆಯಿಂದ ಆಯನೂರಿಗೆ ಬಸ್ಸಿನಲ್ಲಿ ಪ್ರಯಾಣ, ಆಭರಣದ ಅಂಗಡಿಗೆ ತೆರಳಿದಾಗ ಮಹಿಳೆಗೆ ಕಾದಿತ್ತು ಆಘಾತ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಹಣಗೆರೆಯಿಂದ ಆಯನೂರಿಗೆ ಖಾಸಗಿ ಬಸ್ಸಿನಲ್ಲಿ ತೆರಳುವಾಗ ಮಹಿಳೆಯ ಮಾಂಗಲ್ಯ (Mangalya) ಸರ ಕಳ್ಳತನವಾಗಿದೆ. ಚಿನ್ನದ ಅಂಗಡಿಗೆ ತೆರಳಿದಾಗಲೆ ಮಹಿಳೆಗೆ ತನ್ನ ಮಾಂಗಲ್ಯ ಸರ ಕಳುವಾಗಿರುವುದು ಗೊತ್ತಾಗಿದ್ದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಗಿರಿಜಾ ಎಂಬುವವರು ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಆಯನೂರಿನಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದು, ಇಲ್ಲಿನ ಗಣೇಶ ಜ್ಯೂವೆಲರಿ ಅಭರಣ ಮಳಿಗೆಗೆ ತೆರಳಿದ್ದರು. ಅಂಗಡಿಯವರು ಕೊರಳು ನೋಡಿ ಸರ ಇಲ್ಲವ ಎಂದು ಪ್ರಶ್ನಿಸಿದಾಗ ಗಿರಿಜಾ ಅವರಿಗೆ ತಮ್ಮ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ.

ಬಸ್ಸಿನಲ್ಲಿ ಗಿರಿಜಾ ಅವರ ಪಕ್ಕದಲ್ಲಿ ಹೆಣ್ಣು ಮಗುವನ್ನನು ಹಿಡಿದುಕೊಂಡು ಕುಳಿತಿದ್ದ ಇಬ್ಬರು ಮಹಿಳೆಯರು ಅನುಮಾನಾಸ್ಪದವಾಗಿ ವರ್ತಿಸುತಿದ್ದರು. ಅವರ ಬಗ್ಗೆಯೆ ಅನುಮಾನವಿದೆ ಎಂದು ಗಿರಿಜಾ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ರಾತ್ರೋರಾತ್ರಿ ಶ್ರೀಗಂಧದ ಮರ ನಾಪತ್ತೆ, ಬೈಕುಗಳಲ್ಲಿದ್ದ ಪೆಟ್ರೋಲ್‌ ಕಳವು

Mangalya

Leave a Comment