SHIVAMOGGA LIVE NEWS | DEGREE | 5 ಜೂನ್ 2022
ತೀರ್ಥಹಳ್ಳಿಯ ಆಟೋ ಚಾಲಕರೊಬ್ಬರ ಮಗಳು ಎಂಬಿಬಿಎಸ್ ವೈದ್ಯಕೀಯ ಪದವಿ (DEGREE) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದಿದ್ದಾರೆ.
ರಾಯಚೂರಿನ ರಾಜೀವ್ಗಾಂಧಿ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಡಾ. ಎಸ್.ಆರ್.ತೇಜಸ್ವಿನಿ ಅವರು ಎಂಬಿಬಿಎಸ್ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದಿದ್ದಾರೆ.
ಡಾ. ತೇಜಸ್ವಿನಿ ಅವರು ತೀರ್ಥಹಳ್ಳಿಯ ಕುರುವಳ್ಳಿ ಎಸ್.ಸುರೇಶ್, ನಾಗರತ್ನ ದಂಪತಿ ಪುತ್ರಿ. ತಂದೆ ಆಟೊ ಚಾಲಕರಾಗಿದ್ದು, ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಬಡತನದ ನಡುವೆ ಬೆಳೆದ ಡಾ.ತೇಜಸ್ವಿನಿ ಅವರು ಪ್ರಥಮ ರಾಂಕ್ ಪಡೆದು ಪೋಷಕರು ಹೆಮ್ಮ ಪಡುವಂತೆ ಮಾಡಿದ್ದಾರೆ.
ಡಾ. ತೇಜಸ್ವಿನಿ ಅವರು ಪಿಯುಸಿಯಲ್ಲಿಯು ಪ್ರಥಮ ರಾಂಕ್ ಪಡೆದಿದ್ದರು. ಇವರ ಸಾಧನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ – ಭದ್ರಾವತಿ ಸರ್ ಎಂ.ವಿ ಕಾಲೇಜು ಉಪನ್ಯಾಸಕರಿಗೆ ಚಿನ್ನದ ಪದಕ, ರಾಷ್ಟ್ರಮಟ್ಟಕ್ಕೆ ಆಯ್ಕೆ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.