SHIVAMOGGA LIVE NEWS | 1 NOVEMBER 2023
HOSANAGARA : ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು (ADIKE THEFT) ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾವಿನಕೊಪ್ಪ ನಿವಾಸಿಗಳಾದ ಎನ್. ರವಿರಾಜ್, ಪಿ. ನಾಗರಾಜ್, ರಾಜೇಶ್ ಬಂಧಿತರು. ಹೊಸನಗರ ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಡಲಾಗಿದ್ದ 2 ಕ್ವಿಂಟಲ್ 78 ಕೆ.ಜಿ ಅಡಿಕೆಯನ್ನು ಕಳೆದ ತಿಂಗಳು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ- ಶಿವಮೊಗ್ಗದ ಎಲೆಕ್ಟ್ರಿಕ್ ಅಂಗಡಿಗೆ ದಂಡ ವಿಧಿಸಿದ ಕೋರ್ಟ್, ಕಾರಣವೇನು?
ಪಿಎಸ್ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಎಎಸ್ಐ ಸುರೇಶ್ ರಾಜ್, ಸಿಬ್ಬಂದಿ ಸುನೀಲ್, ರಂಜಿತ್, ಗಂಗಪ್ಪ ಬಟೋಲಿ, ಸಂದೀಪ್, ನಾಗೇಶ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ