SHIVAMOGGA LIVE NEWS | 7 SEPTEMBER 2023
HOLEHONNURU : ಮದ್ಯ ಸೇವಿಸಿ ತೋಟದಲ್ಲಿದ್ದ ಅಡಿಕೆ (Adike) ಗಿಡಗಳನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ. ಈ ಸಂಬಂಧ ತೋಟದ ಮಾಲೀಕ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
![]() |
ಇದನ್ನೂ ಓದಿ – ಅಡಿಕೆ ಧಾರಣೆ | 5 ಸೆಪ್ಟೆಂಬರ್ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?
ಬಿ.ಬೀರನಹಳ್ಳಿ ಗ್ರಾಮದ ಬಿ.ಎನ್.ತಮ್ಮಯ್ಯ ಅವರು ತೋಟದಲ್ಲಿ ಮಂಗಳವಾರ ರಾತ್ರಿ ಕೆಲವರು ಮದ್ಯ ಸೇವನೆ ಮಾಡಿ ಅಡಿಕೆ (Adike) ಗಿಡಗಳನ್ನು ಹಾನಿಗೊಳಿಸಿದ್ದಾರೆ. ನಾಲ್ಕು ವರ್ಷದ ಅಡಿಕೆ ಗಿಡಗಳು ಹಾನಿಯಾಗಿದೆ. ತೋಟದ ಸಮೀಪದಲ್ಲಿ ಬಾರ್ ಇದೆ. ಅಲ್ಲಿ ಮದ್ಯ ಖರೀದಿಸಿ ತಮ್ಮ ತೋಟಕ್ಕೆ ತಂದು ಕುಡಿಯುತ್ತಿದ್ದಾರೆ. ತೋಟದಲ್ಲಿಯೇ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಗಾಜಿನ ಚೂರುಗಳು ಕೂಡ ಇಲ್ಲಿ ಬಿದ್ದಿರುತ್ತವೆ ಎಂದು ಆಪಾದಿಸಿ ತಮ್ಮಯ್ಯ ಅವರು ದೂರು ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200