SHIVAMOGGA LIVE NEWS | 25 NOVEMBER 2023
SHIMOGA : ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಗುಂಡಿಗೆ ಬಿದ್ದ ಕಾರ್ಮಿಕನ ಮೇಲೆ ಮಣ್ಣು ಕುಸಿದು ಸಾವನ್ನಪ್ಪಿದ್ದಾನೆ. ಮಂಡೇನಕೊಪ್ಪದ ಸತೀಶ್ ನಾಯ್ಕ್ (27) ಮೃತರು.
ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಪೈಪ್ಲೈನ್ ಜೋಡಣೆ ಕಾರ್ಯಕ್ಕೆ ಜೆಸಿಬಿಯಿಂದ ಗುಂಡಿ ತೆಗೆಯಲಾಗಿತ್ತು. ಕಾಲು ಜಾರಿ ಸತೀಶ್ ಗುಂಡಿಗೆ ಬಿದ್ದಿದ್ದು ಕೂಡಲೆ ಮಣ್ಣು ಕುಸಿದಿದೆ. ಉಸಿರುಗಟ್ಟಿ ಸತೀಶ್ ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೆಸಿಬಿ ಮೂಲಕ ಮಣ್ಣು ತೆಗೆದು ಸತೀಶ್ನ ರಕ್ಷಣೆ ಯತ್ನಿಸಲಾಗಿದೆ. ಆ ವೇಳೆಗಾಗಲೆ ಆತ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ದೀವರ ಸಾಂಸ್ಕೃತಿಕ ವೈಭವ, ಸಿಗಂದೂರು ಧರ್ಮದರ್ಶಿ ಸೇರಿ ಪ್ರಮುಖರಿಗೆ ಪ್ರಶಸ್ತಿ