ಶಿವಮೊಗ್ಗ ಲೈವ್.ಕಾಂ |BHADRAVATHI NEWS | 4 ಸೆಪ್ಟೆಂಬರ್ 2021
ಭದ್ರಾವತಿಯ ಗೋಂದಿ ಅಣೆಕಟ್ಟೆಯಲ್ಲಿ ಈಜಲು ಹೋಗಿದ್ದ ಶಿವಮೊಗ್ಗದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಮಂಜುನಾಥ ಬಡಾವಣೆಯ ಕಿರಣ್ ಮತ್ತು ಕೊಮ್ಮನಾಳ್’ನ ಶಶಾಂಕ್ ಮೃತ ದುರ್ದೈವಿಗಳು. ಬೆಳಗ್ಗೆ ಗೋಂದಿ ಅಣೆಕಟ್ಟೆಯಲ್ಲಿ ಈಜುತ್ತಿದ್ದಾಗ ಘಟನೆ ಸಂಭವಿಸಿದೆ.
ಸ್ನೇಹಿತರ ಜೊತೆಗೆ ಬಂದಿದ್ದರು
ಎಜುಕೇರ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳಾದ ಕಿರಣ್, ಶಶಾಂಕ್ ಸೇರಿ ಐವರು ಯುವಕರು ಗೊಂದಿ ಚೆಕ್ ಡ್ಯಾಂ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಕಿರಣ್ ಮತ್ತು ಶಶಾಂಕ್ ಈಜಲು ಭದ್ರಾ ನದಿಗೆ ಇಳಿದಿದ್ದರು. ಉಳಿದ ಮೂವರಿಗೆ ಈಜು ಬಾರದ ಕಾರಣ ದಂಡೆ ಮೇಲೆ ನಿಂತಿದ್ದರು.
ನೀರಿನ ಸೆಳೆತಕ್ಕೆ ಮುಳುಗಿದರು
ಈಜುತ್ತಿದ್ದ ಶಶಾಂಕ್ ಮತ್ತು ಕಿರಣ್ ಕೆಲವೆ ಕ್ಷಣದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ದಂಡೆ ಮೇಲಿದ್ದ ಉಳಿದ ಮೂವರು ನೆರವಿಗಾಗಿ ಕೂಗಿಕೊಂಡಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವ ವೇಳೆಗಾಗೇ ಇಬ್ಬರು ಮುಳುಗಿದ್ದರು. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200