SHIVAMOGGA LIVE NEWS | 16 FEBRUARY 2024
HOLEHONNURU : ಅರಹತೊಳಲು ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ದಿಢೀರ್ ಭೇಟಿ ನೀಡಿದರು. ವಿವಿಧ ಕಾಮಗಾರಿಗಳು, ಗ್ರಾಮದ ಸ್ವಚ್ಛತೆ ಕುರಿತು ಪರಿಶೀಲಿಸಿದರು.
ಏನೇನೆಲ್ಲ ಪರಿಶೀಲಿಸಿದರು? ಎನೆಲ್ಲ ಸೂಚಿಸಿದರು?
ಅರಹತೊಳಲು ಗ್ರಾಮದ ವಿವಿಧ ಕೇರಿಗಳಿಗೆ ಸ್ನೇಹಲ್ ಸುಧಾಕರ್ ಲೋಖಂಡೆ ಭೇಟಿ ನೀಡಿದರು. ನರೇಗಾ ಯೋಜನೆಯ ಕಾಮಗಾರಿಗಳು ಮತ್ತು ಚರಂಡಿಗಳನ್ನು ಪರಿಶೀಲಿಸಿದರು. ಕೆಲವೆಡೆ ಚರಂಡಿಯಲ್ಲಿ ಕೊಳಚೆ ನೀರು ನಿಂತಿರುವುದನ್ನು ಗಮನಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಶೀಘ್ರ ಎಲ್ಲ ಚರಂಡಿಗಳನ್ನು ಸ್ವಚ್ಛ ಮಾಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೆ ಸೂಚಿಸಿದರು.
ಭದ್ರಾವತಿ ತಾಲ್ಲೂಕು ಪಂಚಾಯಿತಿ ಎಡಿ ಚೇತನ್, ಪಿಡಿ ರಂಗಸ್ವಾಮಿ, ಇಒ ಗಂಗಣ್ಣ, ಪಿಡಿಒ ಜಿ.ಅನಿತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಮತ್ತು ಸದಸ್ಯರು ಇದ್ದರು.
ಇದನ್ನೂ ಓದಿ – 15 ದಿನ, 10 ರಾಜ್ಯಗಳು, ಶಿವಮೊಗ್ಗದಿಂದ ಬೈಕ್ ಯಾತ್ರೆ ಶುರು, ಪೊಲೀಸ್ ಸಿಬ್ಬಂದಿಯ ಸಾಹಸ, ಉದ್ದೇಶವೇನು?