ಶಿವಮೊಗ್ಗ ಲೈವ್.ಕಾಂ | 30 ನವೆಂಬರ್ 2018
ಯಡಿಯೂರಪ್ಪ ಮತ್ತು ಅವರ ಮಗ, ಈ ಯೋಜನೆ ಮಾಡಲು ಬಿಡೋದಿಲ್ಲ. ಒಂದು ವೇಳೆ ಯೋಜನೆಗೆ ಕೈ ಹಾಕಿದ್ರೆ ರಕ್ತಪಾತವಾಗುತ್ತೆ. ಹೀಗಂತ ಖಡಕ್ ಎಚ್ಚರಿಕೆ ನೀಡಿದ್ದಾರೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ.
![]() |
ಶಿಕಾರಿಪುರದಲ್ಲಿ ಇವತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಕಲ್ಲೋಡ್ಡು ನೀರಾವರಿ ಯೋಜನೆಗೆ ಮಾಡೋಕೆ ಬಿಡೋದಿಲ್ಲ. ಯೋಜನೆ ಮಾಡೋಕೆ ಮುಂದಾದರೆ ರಕ್ತಪಾತವಾಗುತ್ತೆ ಅನ್ನೋದನ್ನ ಯಡಿಯೂರಪ್ಪ ಮತ್ತವರ ಮಗ ನೆನಪಿಟ್ಟುಕೊಳ್ಳಬೇಕು ಅಂತಲೂ ಎಚ್ಚರಿಕೆ ನೀಡಿದ್ದಾರೆ.
‘ಯೋಜನೆ ಮಾಡೋಕೆ ರೆಡಿ’
ಮತ್ತೊಂದೆಡೆ ಶಿವಮೊಗ್ಗದಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕಲ್ಲೋಡ್ಡು ಯೋಜನೆ ಕುರಿತು ಪ್ರಸ್ತಾಪಿಸಿದರು. 2006ರಲ್ಲೇ ಕಲ್ಲೋಡ್ಡು ನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಈ ಯೋಜನೆಯಿಂದ 14 ಗ್ರಾಮಗಳ 1950 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ಕಲ್ಪಿಸಬಹುದಾಗಿದೆ ಎಂದರು.
ಕಲ್ಲೋಡ್ಡು ನೀರಾವರಿ ಯೋಜನೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರತಿಷ್ಠೆಯಾಗಿ ರೂಪ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಯೋಜನೆ ಕುರಿತು ಎರಡೂ ಪಕ್ಷದವರು ಹೇಳಿಕೆ ನೀಡುತ್ತಿರುವುದು, ಮಹತ್ವ ಪಡೆದುಕೊಂಡಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200