ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020
ಜಿಂಕೆ ಬೇಟೆಯಾಡಿ ಅಡುಗೆ ಮಾಡಿ ಊಟ ಮಾಡುತ್ತಿರುವಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿರುವ ಘಟನೆ ತ್ಯಾವರೆಕೊಪ್ಪದಲ್ಲಿ ನಡೆದಿದೆ.
ತ್ಯಾವರೆಕೊಪ್ಪದ ಉಮೇಶ್(೫೨) ಹಾಗೂ ವಿರೂಪಿನಕೊಪ್ಪದ ಈಶ್ವರ್(೩೦) ಬಂಧಿತ ಆರೋಪಿಗಳು. ವಿರೂಪಿನಕೊಪ್ಪದ ಏಳುಮಲೈ ಹಾಗೂ ಗೋವಿಂದ ಸ್ವಾಮಿ ಎಂಬ ಇಬ್ಬರು ಪರಾರಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶಂಕರ ವಲಯ ಅರಣ್ಯಾಧಿಕಾರಿಳ ತಂಡ ವಿರೂಪಿನಕೊಪ್ಪದ ಮನೆ ಮೇಲೆ ದಾಳಿ ನಡೆಸಿದಾಗ ಜಿಂಕೆಯ ಹಸಿ ಮಾಂಸ ಹಾಗೂ ಬೇಯಿಸಿದ ಮಾಂಸ ಪತ್ತೆಯಾಗಿದ್ದು, ಜಿಂಕೆ ಚರ್ಮವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಜಯೇಶ್, ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಮಜೀಬ್ ಸೇರಿದಂತೆ ಇತರೆ ಅರಣ್ಯಾಧಿಕಾರಿಗಳು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]