ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಡಿಸೆಂಬರ್ 2021
ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಈ ಸಂಬಂಧ ಉಪ ವಿಭಾಗಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
ಯಾರನ್ನೆಲ್ಲ ಗಡಿಪಾರು ಮಾಡಲಾಗಿದೆ?
ಶಿವಮೊಗ್ಗದ ನವುಲೆಯ ಮಾರುತಿ ಬಡಾವಣೆ ಸಚಿನ್ ಅಲಿಯಾಸ್ ಶ್ಯಾಡೋ ಮತ್ತು ಅಣ್ಣಾನಗರ 5ನೇ ತಿರುವಿನ ವಾಸಿ ಹರೀಶ್ ಅಲಿಯಾಸ್ ತೇಗು ಎಂಬುವವರನ್ನು ಗಡಿಪಾರು ಮಾಡಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55ರ ಅನ್ವಯ ಇಬ್ಬರನ್ನೂ ಉಪ ವಿಭಾಗ ಸರಹದ್ದು ಮತ್ತು ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಒಬ್ಬನಿಗೆ ಆರು ತಿಂಗಳು, ಮತ್ತೊಬ್ಬನಿಗೆ ಮೂರು ತಿಂಗಳು
ಇಬ್ಬರೂ ಆರೋಪಿಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಮತ್ತು ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಚಿನ್ ಅಲಿಯಾಸ್ ಶ್ಯಾಡೋ ಎಂಬಾತನನ್ನು ಆರು ತಿಂಗಳು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಇನ್ನು, ಹರೀಶ್ ಅಲಿಯಾಸ್ ತೇಗು ಎಂಬಾತನನ್ನು ಮೂರು ತಿಂಗಳು ಗಡಿಪಾರು ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಅವರು ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 6ರಿಂದಲೇ ಗಡಿಪಾರು ಆದೇಶ ಜಾರಿಗೆ ಬಂದಿದೆ ಎಂದು ತಿಳಿಸಲಾಗಿದೆ.