ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021
ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಹೆಚ್ಚಾಗುತ್ತಿದೆ. ಇನ್ನೂ ಹದಿನೈದು ದಿನ ಚಳಿಯ ತೀವ್ರತೆ ಇದೆ ರೀತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ನಡುವೆ ಬೆಳಗಿನ ಹೊತ್ತು ದಟ್ಟ ಮಂಜು ಆವರೀಸುತ್ತಿದ್ದು, ಚಳಿಯ ತೀವ್ರತೆ ಹೆಚ್ಚಿಸುತ್ತಿದೆ.
ಜಿಲ್ಲೆಯಾದ್ಯಂತ 13 ಡಿಗ್ರಯಿಂದ 18 ಡಿಗ್ರಿವರೆಗೂ ಚಳಿಯ ತೀವ್ರತೆ ಇದೆ. ಹಾಗಾಗಿ ಬೆಳಗಿನ ಹೊತ್ತು ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಗಢಗಢ ನಡುಗಿಸುವ ಚಳಿ
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮೈ ಕೊರೆಯುವ ಚಳಿ ಶುರುವಾಗಿದೆ. ಬೆಳಗಿನ ಜಾವದ ಚಳಿ ಪ್ರಮಾಣ ಹೆಚ್ಚಾಗುತ್ತದೆ. ಸೂರ್ಯ ನೆತ್ತಿ ಮೇಲೆ ಬರುವವರೆಗೂ ಚಳಿಯ ಅನುಭವವಾಗುತ್ತಿದೆ. ಸ್ವೆಟರ್, ಬೆಚ್ಚನೆಯ ವಸ್ತ್ರಗಳಿಲ್ಲದೆ ಜನರು ಮನೆಯಿಂದ ಹೊರಗೆ ಬಾರದಂತೆ ಆಗಿದೆ.
ಕಾಶ್ಮೀರದ ಫೀಲ್ ಕೊಡ್ತಿದೆ ಮಂಜು
ಚಳಿಯ ತೀವ್ರತೆ ಹೆಚ್ಚಳಕ್ಕೆ ದಟ್ಟ ಮಂಜು ಕೂಡ ಕಾರಣವಾಗಿದೆ. ಬೆಳಗಿನ ಹೊತ್ತಲ್ಲಿ ದಟ್ಟ ಮಂಜು ಆವರಿಸಿಕೊಳ್ಳುತ್ತಿದೆ. ಕೂಗಳತೆ ದೂರದಲ್ಲಿರುವವರ ಗುರುತು ಸಿಗದಷ್ಟು ಮಟ್ಟಕ್ಕೆ ಮಂಜು ಆವರಿಸುತ್ತಿದೆ. ಪಟ್ಟಣಗಳಲ್ಲಿ ಬೆಳಗ್ಗೆ ಸುಮಾರು 9 ಗಂಟೆವರೆಗೂ ಮಂಜು ಆವರಿಸಿರುತ್ತದೆ. ಗ್ರಾಮೀಣ ಭಾಗದಲ್ಲಿ ಸೂರ್ಯನ ಶಾಖ ಹೆಚ್ಚಳವಾದಂತೆ ಮಂಜು ಕರಗುತ್ತಿದೆ.
ವಾಹನ ಸವಾರರಿಗೆ ಚಾಲೆಂಜ್
ದಟ್ಟ ಮಂಜು ವಾಹನ ಸವಾರರಿಗೆ ದೊಡ್ಡ ಚಾಲೆಂಜ್ ಒಡ್ಡುತ್ತಿದೆ. ಬೆಳಗಿನ ಹೊತ್ತಿನಲ್ಲಿವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಹೆಡ್ ಲೈಟ್ ಹಾಕಬೇಕಿದೆ. ಇಲ್ಲವಾದಲ್ಲಿ ಎದುರಿಗಿರುವ ವಾಹನದವರಿಗೆ ತಮ್ಮ ಮುಂದಿರುವ ವಾಹನದ ಕುರಿತು ತಿಳಿಯುವುದು ಕಷ್ಟವಾಗಲಿದೆ. ಇನ್ನು, ದಟ್ಟ ಮಂಜಿನಿಂದಾಗಿ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ.
ಹದಿನೈದು ದಿನ ಚಳಿ ಚಳಿ
ಜಿಲ್ಲೆಯಾದ್ಯಂತ ಇದೆ ರೀತಿ ಚಳಿ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜನವರಿ ತಿಂಗಳಲ್ಲೂ ಕನಿಷ್ಠ ವಾತಾವರಣ 18 ಡಿಗ್ರಿಯಷ್ಟು ಇರಲಿದೆ. ಇದೆಲ್ಲದರ ಮಧ್ಯೆ ದಟ್ಟ ಮಂಜು, ಚುಮು ಚುಮು ಚಳಿ ಶಿವಮೊಗ್ಗ ಜಿಲ್ಲೆಗೆ ಪ್ರವಾಸಿಗರನ್ನು ಸೆಳೆಯುತ್ತಿದೆ.

–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















