SHIVAMOGGA LIVE NEWS | 28 ಫೆಬ್ರವರಿ 2022
ಕೃಷ್ಣ ಮೃಗದ ಚರ್ಮಗಳನ್ನು ಮಾರಾಟ ಮಾಡಲು ಬಂದಿದ್ದವರ ಮೇಲೆ ಅರಣ್ಯ ಸಂಚಾರಿ ದಳ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ಕೃಷ್ಣ ಮೃಗಗಳ ಎರಡು ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿಕಾರಿಪುರ ತಾಲೂಕು ಚಿಕ್ಕಮರಡಿ ತಾಂಡಾದ ಡಿಕ್ಯಾನಾಯ್ಕ (35) ಬಂಧಿತ. ಆನಂದಪುರ ಸಮೀಪದ ದಾಸಕೊಪ್ಪ ಬಸ್ ನಿಲ್ದಾಣದ ಬಳಿ ದಾಳಿ ನಡೆಸಲಾಗಿದೆ.
ಹೇಗಾಯ್ತು ಘಟನೆ?
ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಾಳ ಪೊಲೀಸರು ದಾಸಕೊಪ್ಪ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿದ್ದಾರೆ. ಎರಡು ಚೀಲಗಳನ್ನು ಹಿಡಿದು ನಿಂತುಕೊಂಡಿದ್ದ ಇಬ್ಬರು, ಪೊಲೀಸರನ್ನು ಕಂಡ ಕೂಡಲೆ ಪರಾರಿಯಾಗಲು ಯತ್ನಿಸಿದ್ದಾರೆ.
ಬೆನ್ನಟ್ಟಿದ ಪೊಲೀಸರು ಡಿಕ್ಯಾನಾಯ್ಕನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಚೀಲಗಳನ್ನು ಪರಿಶೀಲನೆ ನಡೆಸಿದಾಗ ಕೃಷ್ಣಮೃಗದ ಎರಡು ಚರ್ಮಗಳನ್ನು ಸಿಕ್ಕಿವೆ. ಡಿಕ್ಯಾನಾಯ್ಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಬ್ಬನಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
ಜಿ.ಮಲ್ಲಿಕಾರ್ಜುನ್, ಗಣೇಶ್, ಗಿರೀಶ್, ವಿಶ್ವನಾಥ್, ಕೃಷ್ಣ, ದಿನೇಶ್, ಚೈತ್ರಾ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.