SHIVAMOGGA LIVE NEWS | 2 ಮಾರ್ಚ್ 2022
ರೈಲ್ವೆ ಗೇಟ್ ತೆಗೆಯುವಂತೆ ರೈಲ್ವೆ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಲಾಗಿದೆ. ಅಲ್ಲದೆ ಅವರ ಬೈಕಿಗೆ ಬೆಂಕಿ ಹಚ್ಚಲಾಗಿದೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಯಡೇಹಳ್ಳಿ ರೈಲ್ವೆ ಗೇಟ್ ಬಳಿ ಘಟನೆ ಸಂಭವಿಸಿದೆ. ರೈಲು ಬರುವ ಸಂದರ್ಭ ಗೇಟ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಗೇಟ್ ಹಾಕಿದ್ದಾರೆ. ಆಗ ಬಂದ ಗಿರೀಶ್, ಬಾಲಿ, ಇಲಿಯಾಸ್, ರಫಿ ಮತ್ತಿತರರು ಗೇಟ್ ತೆಗೆಯುವಂತೆ ತಿಳಿಸಿದ್ದಾರೆ. ಮಹಿಳಾ ಸಿಬ್ಬಂದಿ ಇದಕ್ಕೆ ಒಪ್ಪದಿದ್ದಾಗ, ಅವಾಚ್ಯವಾಗಿ ನಿಂದಿಸಿದ್ದಾರೆ. ರಾತ್ರಿ 9.17ರ ಹೊರತ್ತಿಗೆ ಘಟನೆ ಸಂಭವಿಸಿದೆ.
ಮರುದಿನ ಬೆಳಗಿನ ಜಾವ 5.40ರ ಹೊತ್ತಿಗೆ ಯಡೇಹಳ್ಳಿ ರೈಲ್ವೆ ಬಳಿ ಮಹಿಳಾ ಸಿಬ್ಬಂದಿಯ ಬೈಕ್’ಗೆ ಬೆಂಕಿ ಹಚ್ಚಲಾಗಿತ್ತು. ಬೆಂಕಿ ನಂದಿಸುವ ಹೊತ್ತಿಗೆ ಬೈಕ್ ಸಂಪೂರ್ಣ ಸುಟ್ಟು ಹೋಗಿತ್ತು.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.