SHIVAMOGGA LIVE NEWS | 25 ಮಾರ್ಚ್ 2022
ಇಪ್ಪತ್ತು ನಿಮಿಷದ ಅಂತರದಲ್ಲಿ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗ ಬಾಲರಾಜ ಅರಸ್ ರಸ್ತೆಯ ಉಪ್ಪಾರರ ಹಾಸ್ಟೆಲ್ ಬಳಿ ಘಟನೆ ಸಂಭವಿಸಿದೆ.
ಅಡುಗೆ ಕೆಲಸ ಮಾಡುತ್ತಿರುವ ಆರ್.ರಂಗನಾಥ್ ಅವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಹಾಡೋನಹಳ್ಳಿಯಲ್ಲಿ ಅಡುಗೆ ಕೆಲಸ ಇದ್ದಿದ್ದರಿಂದ ರಂಗನಾಥ್ ಅವರು ಉಪ್ಪಾರರ ಹಾಸ್ಟೆಲ್’ನಲ್ಲಿ ಕೆಲಸ ಮಾಡುವ ರಮೇಶ್ ಎಂಬುವವರ ಜೊತೆಗೆ ತೆರಳಿದ್ದರು.
ಮಾರ್ಚ್ 23ರ ಸಂಜೆ ಉಪ್ಪಾರರ ಹಾಸ್ಟೆಲ್ ಬಳಿ ಬಂದು ರಂಗನಾಥ್ ಅವರು ಬೈಕ್ ನಿಲ್ಲಿಸಿದ್ದಾರೆ. ಹಾಸ್ಟೆಲ್ ಒಳಗೆ ಕೊಠಡಿಗೆ ತೆರಳಿದ್ದಾರೆ. ಮುಖ, ಕೈ ಕಾಲು ತೊಳೆದು ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. 20 ನಿಮಿಷದಲ್ಲಿ ಬೈಕ್ ಕಳ್ಳತನವಾಗಿದೆ.
ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200