SHIVAMOGGA LIVE NEWS
SHIMOGA | ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ನ್ಯಾಯಾಲಯಕ್ಕೆ ಆರೋಪ ಪಟ್ಟಿ (CHARGE SHEET) ಸಲ್ಲಿಸಿದೆ. 750 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳ ದುಷ್ಕೃತ್ಯ ನಡೆಸಲು ಕಾರಣವೇನು, ಪ್ಲಾನ್ ಹೇಗಿತ್ತು ಎಂಬುದರ ವಿವರಣೆ ನೀಡಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (CHARGE SHEET) ಏನೇನಿದೆ? ಇಲ್ಲಿದೆ ಟಾಪ್ 5 ಸಂಗತಿ.
<strong>ಪ್ರಮುಖಾಂಶ 1</strong>
CAA – NRC, ಹಿಜಾಬ್ ವಿವಾದ ಮತ್ತು ಗೋ ಸಂರಕ್ಷಣೆ ಕುರಿತು ಬಜರಂಗದಳದ ಚಟುವಟಿಕೆಯಿಂದ 8 ಪ್ರಮುಖ ಆರೋಪಿಗಳು ಹಿಂದೂ ಸಮುದಾಯದ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದರು. ಹಿಂದೂಗಳಲ್ಲಿ ಭಯ ಹುಟ್ಟಿಸುವುದು, ಹಿಂದೂ – ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬಿತ್ತಲು ಯೋಜನೆ ರೂಪಿಸುತ್ತಿದ್ದರು. ಹಿಂದೂ ಮುಖಂಡರು, ಕಾರ್ಯಕರ್ತರ ಚಟುವಟಿಕೆಗಳ ಮೇಲ ನಿಗಾ ಇರಿಸಿದ್ದರು.
<strong>ಪ್ರಮುಖಾಂಶ 2</strong>
ಸೀಗೆಹಟ್ಟಿ ಮತ್ತು ಭಾರತಿ ಕಾಲೋನಿ ಭಾಗದಲ್ಲಿ ಹಿಂದೂ ಹರ್ಷ ಪ್ರಮುಖ ಹಿಂದೂ ಮುಖಂಡನಾಗಿದ್ದ. ಆದ್ದರಿಂದ ಆತನ ಚಲನವಲನದ ಮೇಲೆ ನಿಗಾ ವಹಿಸಿದ್ದರು. ಹರ್ಷನ ಕೊಲೆಗೆ ಮಾರಕಾಸ್ತ್ರಗಳನ್ನು ಹೊಂದಿಸಿಕೊಂಡಿದ್ದರು.
<strong>ಪ್ರಮುಖಾಂಶ 3</strong>
2022ರ ಫೆಬ್ರವರಿ 20ರಂದು ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಿಂದೂ ಹರ್ಷನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಹತ್ಯೆ ನಡೆಸಿದ ವೇಳೆ ‘ಕಾಫೀರ್ ಬಜರಂಗದಳ ವಾಲೆ ಕೋ ಮಾರೋ’ ಎಂದು ಘೋಷಣೆ ಕೂಗಿದ್ದರು.
ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ, ನಿರ್ಮಿಸಿದ್ದು ಯಾರು?
<strong>ಪ್ರಮುಖಾಂಶ 4</strong>
ಪ್ರಕರಣದ ಪ್ರಮುಖ 8 ಆರೋಪಿಗಳು ತಾವೆ ‘ಉಗ್ರ ಗುಂಪು’(TERRORIST GANG) ರಚಿಸಿಕೊಂಡು, ಹಿಂದೂ ಹರ್ಷನ ಹತ್ಯೆಗೆ ಸಂಚು ರೂಪಿಸಿದ್ದರು. ಈ ಮೂಲಕ ಶಿವಮೊಗ್ಗ ಜಿಲ್ಲೆ, ಅದರಲ್ಲೂ ಸೀಗೆಹಟ್ಟಿ ಮತ್ತು ಭಾರತಿ ಕಾಲೋನಿಯ ಹಿಂದೂಗಳಲ್ಲಿ ಭಯ ಹುಟ್ಟಿಸಲು ಸಂಚು ರೂಪಿಸಿದ್ದರು.
<strong>ಪ್ರಮುಖಾಂಶ 5</strong>
ಪ್ರಕರಣದ 4ನೆ ಆರೋಪಿ ಅಬ್ದುಲ್ ಅಫ್ವಾನ್, ಹರ್ಷನ ಹತ್ಯೆ ಬಳಿಕ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದ. ಹತ್ಯೆ ವೇಳೆ ಬಳಸಿದ್ದ ಸಿಮ್, ಆರೋಪಿಗಳು ಧರಿಸಿದ್ದ ಬಟ್ಟೆ ಮತ್ತು ಮಾರಕಾಸ್ತ್ರಗಳನ್ನು ನಾಶಗೊಳಿಸಲು ಯತ್ನಿಸಿದ್ದ.
ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ, ನಿರ್ಮಿಸಿದ್ದು ಯಾರು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.