ಶಿವಮೊಗ್ಗ ಲೈವ್.ಕಾಂ | 12 ಜೂನ್ 2019
ಸಾಗರ ತಾಲೂಕು ಆನಂದಪುರ ಮುರುಘಾಮಠದ ಆವರಣದಲ್ಲಿ, ಸೈನಿಕ ತರಬೇತಿ ಪಡೆದ ಮಲೆನಾಡಿನ 26 ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಮಾಜಿ ಯೋಧರ ಕಠಿಣ ಪರಿಶ್ರಮ, ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರಕ್ಕೆ ಫಲ ಸಿಕ್ಕಂತಾಗಿದೆ.
ಮಾಜಿ ಯೋಧರು ಸ್ಥಾಪಿಸಿದ ಮಲ್ನಾಡ್ ಸೋಲ್ಜರ್ ಅಕಾಡೆಮಿಯಲ್ಲಿ 65 ಯುವಕರು 15 ದಿನ ಕಠಿಣ ತರಬೇತಿ ಪಡೆದಿದ್ದರು. ಈ ಪೈಕಿ 26 ಯುವಕರು, ಗದಗದಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ.
ಮೂವರ ಅವಕಾಶ ಕಿತ್ತುಕೊಂಡ ಹಚ್ಚೆ
ಇಲ್ಲಿ ತರಬೇತಿ ಪಡೆದ 29 ಯುವಕರು ಸೇನೆಗೆ ಆಯ್ಕೆಯಾಗಿದ್ದರು. ಅದರೆ ಅಂತಿಮ ಹಂತದ ಪರಿಶೀಲನೆಯಲ್ಲಿ ಮೂವರನ್ನು ಕೈ ಬಿಡಲಾಗಿದೆ. ಈ ಮೂವರ ತೋಳುಗಳಲ್ಲಿ ಹಚ್ಚೆ ಇತ್ತು. ಇದನ್ನು ಗಮನಿಸಿದ ಆಯ್ಕೆದಾರರು ಮೂವರನ್ನು ಕೈಬಿಟ್ಟಿದ್ದಾರೆ. ಹಾಗಾಗಿ ಅಂತಿಮವಾಗಿ 26 ಯುವಕರು ಸೇನೆಗೆ ನೇಮಕವಾಗಿದ್ದಾರೆ.
ಮಾಜಿ ಯೋಧ ಕಿಶೋರ್ ಭೈರಾಪುರ ಅವರ ನೇತೃತ್ವದಲ್ಲಿ ಮಾಜಿ ಮತ್ತು ಹಾಲಿ ಯೋಧರು, ಆನಂದಪುರದಲ್ಲಿ ಉಚಿತವಾಗಿ ತರಬೇತಿ ನೀಡಿದ್ದರು. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಇನ್ನು, ಇಲ್ಲಿ ತರಬೇತಿ ಹೇಗಿತ್ತು, ಎಷ್ಟೆಲ್ಲ ಕಠಿಣವಾಗಿತ್ತು ಅನ್ನೋ ವಿಡಿಯೋ ರಿಪೋರ್ಟ್ ಇಲ್ಲಿದೆ ನೋಡಿ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]