ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 NOVEMBER 2023
BHADARAVATHI : ಬೈಕ್ ಇನ್ಷುರೆನ್ಸ್ (Bike insurance) ದಾಖಲೆಯಲ್ಲಿ ದಿನಾಂಕ ತಿರುಚಿದ ಆರೋಪದ ಹಿನ್ನೆಲೆ ವ್ಯಕ್ತಿಯೊಬ್ಬನ ವಿರುದ್ಧ ಇನ್ಷುರೆನ್ಸ್ ಕಂಪನಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದೆ. ನ್ಯಾಯಾಲಯದ ಸೂಚನೆಯ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಭದ್ರಾವತಿಯ ವ್ಯಕ್ತಿಯೊಬ್ಬನ (ಹೆಸರು ಗೌಪ್ಯ) ಬೈಕ್ 2021 ಜುಲೈ 21ರಂದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ದತ್ತಾತ್ರೇಯ ಎಂಬುವವರು ಗಾಯಗೊಂಡಿದ್ದರು. ಅವರು ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬೈಕ್ ಮಾಲೀಕ ತನ್ನ ವಾಹದ ದಾಖಲೆಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದ. ಆತನ ಬೈಕ್ ಇನ್ಷುರೆನ್ಸ್ (Bike insurance) ವಾಯಿದೆ 2020ರ ಡಿಸೆಂಬರ್ 8 ರಿಂದ 2021ರ ಡಿಸೆಂಬರ್ 7ರವರೆಗೆ ಎಂದು ದಾಖಲಾಗಿತ್ತು.
ಇದನ್ನೂ ಓದಿ- ಸಾಗರದಲ್ಲಿ ಸರ್ಕಾರಿ ನೌಕರರ ಪ್ರತಿಭಟನೆ, 24 ಗಂಟೆ ಗಡುವು, ಕರ್ತವ್ಯಕ್ಕೆ ಗೈರಾಗಿ ಹೋರಾಟದ ಎಚ್ಚರಿಕೆ
ಪರಿಹಾರ ನೀಡುವಂತೆ ಇನ್ಷುರೆನ್ಸ್ ಕಂಪನಿಗೆ ನ್ಯಾಯಾಲಯ ಸೂಚಿಸಿತ್ತು. ಪಾಲಿಸಿ ನಂಬರ್ ಪರಿಶೀಲಿಸಿದ ಇನ್ಷುರೆನ್ಸ್ ಕಂಪನಿ ಬೈಕ್ ಮಾಲೀಕ ಒದಗಿಸಿರುವ ದಾಖಲೆಯಲ್ಲಿ ದಿನಾಂಕ ತಿದ್ದಿರುವುದನ್ನು ಪತ್ತೆ ಹಚ್ಚಿದೆ. ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಗೆ ತನ್ನ ಕೈಯಿಂದ ಪರಿಹಾರ ಕೊಡಬೇಕಾಗುತ್ತದೆ ಎಂದು ಬೈಕ್ ಮಾಲೀಕ ಪಾಲಿಸಿಯ ದಿನಾಂಕವನ್ನು ತಿದ್ದಿದ್ದಾನೆ ಎಂದು ಆರೋಪಿಸಲಾಗಿದೆ.
2018ರ ಏಪ್ರಿಲ್ 10 ರಿಂದ 2019ರ ಏಪ್ರಿಲ್ 9ರವರೆಗೆ ಇನ್ಷುರೆನ್ಸ್ ಮಾಡಿಸಲಾಗಿತ್ತು. ಆದರೆ ಆತ ಅದನ್ನು 2020ರ ಡಿಸೆಂಬರ್ 8 ರಿಂದ 2021ರ ಡಿಸೆಂಬರ್ 7ರವರೆಗೆ ಎಂದು ತಿದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ, ನ್ಯೂ ಇಂಡಿಯಾ ಅಷುರೆನ್ಸ್ ಕಂಪನಿ, ಪಾಲಿಸಿಯ ದಿನಾಂಕ ತಿದ್ದಿರುವ ಆರೋಪದ ಹಿನ್ನೆಲೆ ಬೈಕ್ ಮಾಲೀಕನ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

- ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

- ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

- ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

- ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಸಚಿನ್ ಅಂತ್ಯಕ್ರಿಯೆ

About The Editor
ನಿತಿನ್ ಆರ್.ಕೈದೊಟ್ಲು
















