SHIVAMOGGA LIVE NEWS | 11 NOVEMBER 2023
BHADARAVATHI : ಬೈಕ್ ಇನ್ಷುರೆನ್ಸ್ (Bike insurance) ದಾಖಲೆಯಲ್ಲಿ ದಿನಾಂಕ ತಿರುಚಿದ ಆರೋಪದ ಹಿನ್ನೆಲೆ ವ್ಯಕ್ತಿಯೊಬ್ಬನ ವಿರುದ್ಧ ಇನ್ಷುರೆನ್ಸ್ ಕಂಪನಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದೆ. ನ್ಯಾಯಾಲಯದ ಸೂಚನೆಯ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಭದ್ರಾವತಿಯ ವ್ಯಕ್ತಿಯೊಬ್ಬನ (ಹೆಸರು ಗೌಪ್ಯ) ಬೈಕ್ 2021 ಜುಲೈ 21ರಂದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ದತ್ತಾತ್ರೇಯ ಎಂಬುವವರು ಗಾಯಗೊಂಡಿದ್ದರು. ಅವರು ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬೈಕ್ ಮಾಲೀಕ ತನ್ನ ವಾಹದ ದಾಖಲೆಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದ. ಆತನ ಬೈಕ್ ಇನ್ಷುರೆನ್ಸ್ (Bike insurance) ವಾಯಿದೆ 2020ರ ಡಿಸೆಂಬರ್ 8 ರಿಂದ 2021ರ ಡಿಸೆಂಬರ್ 7ರವರೆಗೆ ಎಂದು ದಾಖಲಾಗಿತ್ತು.
ಇದನ್ನೂ ಓದಿ- ಸಾಗರದಲ್ಲಿ ಸರ್ಕಾರಿ ನೌಕರರ ಪ್ರತಿಭಟನೆ, 24 ಗಂಟೆ ಗಡುವು, ಕರ್ತವ್ಯಕ್ಕೆ ಗೈರಾಗಿ ಹೋರಾಟದ ಎಚ್ಚರಿಕೆ
ಪರಿಹಾರ ನೀಡುವಂತೆ ಇನ್ಷುರೆನ್ಸ್ ಕಂಪನಿಗೆ ನ್ಯಾಯಾಲಯ ಸೂಚಿಸಿತ್ತು. ಪಾಲಿಸಿ ನಂಬರ್ ಪರಿಶೀಲಿಸಿದ ಇನ್ಷುರೆನ್ಸ್ ಕಂಪನಿ ಬೈಕ್ ಮಾಲೀಕ ಒದಗಿಸಿರುವ ದಾಖಲೆಯಲ್ಲಿ ದಿನಾಂಕ ತಿದ್ದಿರುವುದನ್ನು ಪತ್ತೆ ಹಚ್ಚಿದೆ. ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಗೆ ತನ್ನ ಕೈಯಿಂದ ಪರಿಹಾರ ಕೊಡಬೇಕಾಗುತ್ತದೆ ಎಂದು ಬೈಕ್ ಮಾಲೀಕ ಪಾಲಿಸಿಯ ದಿನಾಂಕವನ್ನು ತಿದ್ದಿದ್ದಾನೆ ಎಂದು ಆರೋಪಿಸಲಾಗಿದೆ.
2018ರ ಏಪ್ರಿಲ್ 10 ರಿಂದ 2019ರ ಏಪ್ರಿಲ್ 9ರವರೆಗೆ ಇನ್ಷುರೆನ್ಸ್ ಮಾಡಿಸಲಾಗಿತ್ತು. ಆದರೆ ಆತ ಅದನ್ನು 2020ರ ಡಿಸೆಂಬರ್ 8 ರಿಂದ 2021ರ ಡಿಸೆಂಬರ್ 7ರವರೆಗೆ ಎಂದು ತಿದ್ದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ, ನ್ಯೂ ಇಂಡಿಯಾ ಅಷುರೆನ್ಸ್ ಕಂಪನಿ, ಪಾಲಿಸಿಯ ದಿನಾಂಕ ತಿದ್ದಿರುವ ಆರೋಪದ ಹಿನ್ನೆಲೆ ಬೈಕ್ ಮಾಲೀಕನ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200