SHIVAMOGGA LIVE NEWS | 28 NOVEMBER 2023
SHIMOGA : ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್ನಿಂದ ಪರ್ಸ್ಗಳ (purse) ಕಳವು ಪ್ರಕರಣ ಮುಂದುವರೆದಿದೆ. ಈವರೆಗೆ ಪ್ಲಾಟ್ ಫಾರಂನಲ್ಲಿ ಕೃತ್ಯ ಎಸಗುತ್ತಿದ್ದ ಖದೀಮರು, ಈಗ ಭದ್ರಾವತಿ ಬಸ್ಗಳು ನಿಲ್ಲುವೆಡೆ ಮಹಿಳೆಯೊಬ್ಬರ ಬ್ಯಾಗ್ನಿಂದ ಪರ್ಸ್ ಲಪಟಾಯಿಸಿದ್ದಾರೆ.
ಭದ್ರಾವತಿಯಲ್ಲಿ ಇಳಿದಾಗ ಶಾಕ್
ಶಿವಮೊಗ್ಗದಲ್ಲಿ ಸಂಬಂಧಿಯೊಬ್ಬರ ಮನೆಯಲ್ಲಿ ನಾಮಕರಣ ಕಾರ್ಯಕ್ರಮ ಮುಗಿಸಿ ವಿಜಯಾ ಎಂಬುವವರು ತಮ್ಮ ಪತಿಯೊಂದಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಭದ್ರಾವತಿಗೆ ತೆರಳಿದ್ದರು. ಆಟೋದಲ್ಲಿ ಮನೆವರೆಗೆ ತಲುಪಿ ಹಣ ಕೊಡಲು ವ್ಯಾನಿಟಿ ಬ್ಯಾಗ್ನಲ್ಲಿ ಪರ್ಸ್ (purse) ಹುಡುಕಿದಾಗ ನಾಪತ್ತೆಯಾಗಿತ್ತು. ಪರ್ಸ್ನಲ್ಲಿ ಎರಡು ಜೊತೆ ಕಿವಿಯೋಲೆಗಳು, ಚಿನ್ನದ ಸರ, ಬಂಗಾರದ ಬಳೆಗಳು ಇದ್ದವು. ಇವುಗಳ ಮೌಲ್ಯ 1.80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ- ಕುವೆಂಪು ವಿವಿಯಲ್ಲಿ ಕೌನ್ಸೆಲಿಂಗ್, ಮೊದಲ ದಿನ ಶೇ.85ರಷ್ಟು ಮೆರಿಟ್ ಸೀಟ್ ಭರ್ತಿ, ಹೇಗಿತ್ತು ವ್ಯವಸ್ಥೆ?
ಬಸ್ ಹತ್ತುವಾಗಲೆ ನಡೆಯಿತಾ ಕೃತ್ಯ?
ವಿಜಯಾ ಅವರು ಪತಿಯೊಂದಿಗೆ ನ.22ರಂದು ಸಂಜೆ 5.45ಕ್ಕೆ ಶಿವಮೊಗ್ಗದ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಭದ್ರಾವತಿ ಬಸ್ ಹತ್ತಿದ್ದರು. ಬಸ್ನಲ್ಲಿ ರಶ್ ಇದ್ದಿದ್ದರಿಂದ ಸೀಟ್ ಸಿಕ್ಕಿರಲಿಲ್ಲ. ಹಾಗಾಗಿ ಭದ್ರಾವತಿವರೆಗೆ ನಿಂತು ಪ್ರಯಾಣಿಸಿದ್ದರು. ಭದ್ರಾವತಿ ನಿಲ್ದಾಣದಲ್ಲಿ ಇಳಿದು ಆಟೋ ಹತ್ತಿದ್ದರು. ಶಿವಮೊಗ್ಗದಲ್ಲಿ ಬಸ್ ಹತ್ತುವ ಸಂದರ್ಭ ರಶ್ ಇತ್ತು. ಈ ವೇಳೆ ಕಳ್ಳರು ಬ್ಯಾಗ್ನಲ್ಲಿದ್ದ ಪರ್ಸ್ ಕಳ್ಳತನ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200