ಶಿವಮೊಗ್ಗ ವಿದ್ಯಾನಗರದಲ್ಲಿ ATMಗೆ ವಂಚಿಸಿದ ದುಷ್ಕರ್ಮಿಗಳು, SBI ಬ್ಯಾಂಕ್‌ಗೆ ಲಕ್ಷ ಲಕ್ಷ ನಷ್ಟ, ಏನಿದು ಕೇಸ್?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 5 DECEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಎಟಿಎಂ ಮೆಷಿನ್‌ನಿಂದ ಹಣ ಹೊರ ಬರುವ ಹೊತ್ತಿಗೆ ಅಡ್ಡಿಪಡಿಸಿ ಫೇಲ್ಡ್‌ ಟ್ರಾನ್‌ಸಾಕ್ಷನ್‌ ಎಂದು ತೋರಿಸಿ ಬ್ಯಾಂಕಿಗೆ ವಂಚಿಸಲಾಗಿದೆ. ವಿದ್ಯಾನಗರದಲ್ಲಿರುವ ಎಟಿಎಂ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಏನಿದು ಪ್ರಕರಣ?

ಡೆಬಿಟ್‌ ಕಾರ್ಡ್‌ ಬಳಸಿ ಎಟಿಎಂನಲ್ಲಿ ಹಣ ಡ್ರಾ ಮಾಡಲಾಗಿದೆ. ಎಟಿಎಂ ಯಂತ್ರವು ಹಣ ನೀಡಲು ತೆರದುಕೊಳ್ಳುವ ಹೊತ್ತಿಗೆ ಅದು ಸರಾಗವಾಗಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಲಾಗಿದೆ. ಆದರೆ ಹಣ ಹೊರ ಬಂದಿದ್ದು ಅದನ್ನು ಪಡೆಯಲಾಗಿದೆ.

ಇದನ್ನೂ ಓದಿ –ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಅಪಘಾತ, ತಪ್ಪಿತು ದೊಡ್ಡ ಅನಾಹುತ, ಕಾರಿನ ಮುಂಭಾಗ ಜಖಂ

ಸರಾಗ ಕಲಸಕ್ಕೆ ಅಡ್ಡಿಪಡಿಸಿದ್ದರಿಂದ ಎಟಿಎಂನಲ್ಲಿ ಫೇಲ್ಡ್‌ ಟ್ರಾನ್‌ಸಾಕ್ಷನ್‌ ಎಂದು ತೋರಿಸಿದೆ. ಇದನ್ನು ಆಧಾರವಾಗಿ ಇಟ್ಟುಕೊಂಡು ಎಟಿಎಂನಿಂದ ಹಣ ಬಂದಿಲ್ಲ ಎಂದು ಬ್ಯಾಂಕ್‌ಗೆ ಆನ್‌ಲೈನ್‌ ಮೂಲಕ ದೂರು ನೀಡಲಾಗಿದೆ. ಈ ರೀತಿ ದುಷ್ಕೃತ್ಯ ಎಸಗಿ ಬ್ಯಾಂಕ್‌ನಿಂದ 2.70 ಲಕ್ಷ ರೂ. ಹಣವನ್ನು ಪುನಃ ದುಷ್ಕರ್ಮಿಗಳು ತಮ್ಮ ಬ್ಯಾಂಕ್‌ ಖಾತೆಗೆ ಹಾಕಿಸಿಕೊಂಡಿದ್ದಾರೆ. 2022ರ ಜುಲೈ 16 ರಿಂದ ಸೆಪ್ಟೆಂಬರ್‌ 18ರವರೆಗೆ ಇಂತಹ ಘಟನೆ ನಡೆದಿದೆ.

ಬ್ಯಾಂಕ್‌ಗೆ ವಂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (SBI Bank) ಮ್ಯಾನೇಜರ್‌ ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment