ಜನ ಶತಾಬ್ದಿ, ಇಂಟರ್‌ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 10 DECEMBER 2023

SHIMOGA : ನಗರದಲ್ಲಿ ನೈಋತ್ಯ ರೈಲ್ವೆ ಬಳಕೆದಾರರ ಸಭೆ ನಡೆಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಶಾಂತಲಾ ಸ್ಪೆರೋಕಾಸ್ಟ್‌ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ರೈಲ್ವೆ ಕುರಿತು ಪ್ರಮುಖ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಹುಬ್ಬಳ್ಳಿ ವಲಯದ ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಕೆ.ವಿ.ವಸಂತ ಕುಮಾರ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್‌.ಗೋಪಿನಾಥ್‌ ರೈಲ್ವೆ ಬಳಕೆದಾರರ ಅಹವಾಲು ಆಲಿಸಿದರು.

ಏನೇನೆಲ್ಲ ಸಲಹೆಗಳು ಬಂದವು?

ಸಲಹೆ 1 : ಜನಶತಾಬ್ದಿ ರೈಲು

point-1ಶಿವಮೊಗ್ಗದ ಜನಶತಾಬ್ದಿ ರೈಲಿನಲ್ಲಿ ಶೌಚಾಲಯದ ಕೆಟ್ಟ ವಾಸನೆ ಬರುತ್ತದೆ. ಎಸಿ ಬೋಗಿಯಲ್ಲಿಯು ಇದೆ ಸ್ಥಿತಿ ಇದೆ. ರೈಲಿನಲ್ಲಿ ಕೆಲವು ಸೀಟುಗಳು ಹಾಳಾಗಿವೆ. ಅವುಗಳ ರಿಪೇರಿ ಕಾರ್ಯ ನಡೆಯುತ್ತಿಲ್ಲ.

ಮೆಜೆಸ್ಟಿಕ್‌ನಲ್ಲಿ ಪ್ಲಾಟ್‌ಫಾರಂ ಖಾಲಿ ಇಲ್ಲ ಎಂದು ಜನತಶಾಬ್ದಿ ರೈಲನ್ನು ಚಿಕ್ಕಬಾಣಾವರ ಅಥವಾ ಯಶವಂತಪುರ ಸಮೀಪ ಒಂದು ಗಂಟೆ ನಿಲ್ಲಿಸುತ್ತಾರೆ. ಅದರ ಬದಲು ಜನಶತಾಬ್ದಿ ರೈಲು ಶಿವಮೊಗ್ಗದಿಂದ 5.15ಕ್ಕೆ ಹೊರಡುವ ಬದಲು 6 ಗಂಟೆಗೆ ಹೊರಡುವಂತೆ ವ್ಯವಸ್ಥೆ ಮಾಡಲಿ. ಜನ ನೆಮ್ಮದಿಯಿಂದ ಬಂದು ರೈಲು ಹತ್ತಬಹುದು.ರವಿಪ್ರಕಾಶ್‌, ಕೈಗಾರಿಕೋದ್ಯಮಿ
ಶಿವಮೊಗ್ಗದಲ್ಲಿ ಜನ ಶತಾಬ್ದಿ ರೈಲು ಹತ್ತಲು ಎರಡನೇ ಪ್ಲಾಟ್‌ಫಾರಂಗೆ ಹೋಗಬೇಕು. ಹಿರಿಯರು ಸೇರಿದಂತೆ ಮೆಟ್ಟಲು ಹತ್ತಲಾಗದವರಿಗೆ ಲಿಫ್ಟ್‌ ಇದೆ. ಆದರೆ ಅದಕ್ಕೆ ಹೆಚ್ಚು ಜನರಿರುತ್ತಾರೆ. ಆದ್ದರಿಂದ ಬೆಂಗಳೂರು ಮಾದರಿ ಶಿವಮೊಗ್ಗ ನಿಲ್ದಾಣದಲ್ಲಿಯು ಎಸ್ಕಲೇಟರ್‌ ಅಗತ್ಯವಿದೆ.ಸೌಮ್ಯಾ ಗುರುರಾಜ್‌

railway meeting

ಸಲಹೆ 2 : ಇಂಟರ್‌ ಸಿಟಿ ರೈಲು

point-2ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು ತಡವಾಗಿ ಸಂಚರಿಸುತ್ತಿದೆ. ಭದ್ರಾವತಿಗೆ ತಡವಾಗಿ ಬರುತ್ತಿದೆ. ಈ ರೈಲಿನಲ್ಲಿ ಮೂರು ಹಳೆಯ ಬೋಗಿಗಳನ್ನು ಹಾಕಲಾಗಿದೆ. ಇದರಲ್ಲಿ ಸೀಟಿಂಗ್‌ ವ್ಯವಸ್ಥೆ ಕೂಡ ಸರಿ ಇಲ್ಲ.

ಸಲಹೆ 3 : ಹೆಚ್ಚುವರಿ ರೈಲು ಬೇಕು

point-3ಶಿವಮೊಗ್ಗ – ಬೆಂಗಳೂರು ಮಧ್ಯೆ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಆದ್ದರಿಂದ ಹೆಚ್ಚುವರಿ ರೈಲಿನ ಅಗತ್ಯವಿದೆ. ಯಶವಂತಪುರ – ಶಿವಮೊಗ್ಗ ರಾತ್ರಿ ರೈಲು ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುತ್ತಿದೆ. ಇದನ್ನು ವಾರ ಪೂರ್ತಿ ಓಡಿಸಬೇಕು.

ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ರಿಜರ್ವೆಷನ್‌ಗೆ ಸೀಟು ಸಿಗುತ್ತಿಲ್ಲ. ತತ್ಕಾಲ್‌ನಲ್ಲಿಯು ಸೀಟು ದೊರೆಯುತ್ತಿಲ್ಲ. ಆದ್ದರಿಂದ ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು ಓಡಿಸುವುದು ತುಂಬಾ ಅಗತ್ಯವಿದೆ.ವಿಜಯ ಕುಮಾರ್‌ ದಿನಕರ್‌, ಗಾಂಧಿ ಬಜಾರ್‌ ವರ್ತಕರ ಸಂಘದ ಅಧ್ಯಕ್ಷ

r1 1

ಸಲಹೆ 4 : ಶಿವಮೊಗ್ಗ ರೈಲ್ವೆ ನಿಲ್ದಾಣ

point-4ಶಿವಮೊಗ್ಗ ರೈಲ್ವೆ ನಿಲ್ದಾಣದ ಶೌಚಾಲಯ ಸ್ವಚ್ಛವಾಗಿಲ್ಲ. ಕಳೆದ ಕೆಲ ದಿನದಿಂದ ಕ್ಯಾಂಟೀನ್‌ ಬಂದ್‌ ಆಗಿದೆ.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಎಂಟ್ರಿ ಮತ್ತು ಎಗ್ಸಿಟ್‌ ಒಂದೇ ಕಡೆ ಇದೆ. ಇದರಿಂದ ಪ್ರಯಾಣಿಕರಿಗೆ ಅನಾನೂಕೂಲವಾಗುತ್ತಿದೆ. ಎಂಟ್ರಿ ಮತ್ತು ಎಗ್ಸಿಟ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಲಾಕ್‌ ಡೌನ್‌ ಮೊದಲು ನಿಲ್ದಾಣದಲ್ಲಿ ಎಲೆಕ್ಟ್ರಿಕ್‌ ವಾಹನದ ವ್ಯವಸ್ಥೆ ಇತ್ತು. ಈಗ ಅದು ಇಲ್ಲ. ಮೊದಲು ಮೂರು ಕಡೆ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಈಗ ಎರಡು ಕಡೆ ಮಾತ್ರ ಇದೆ.ಪ್ರಕಾಶ್‌, ಶಿವಮೊಗ್ಗ ನಿವಾಸಿ

r2 1

ಸಲಹೆ 5 : ಆಟೋ ನಿಲ್ದಾಣ ಮತ್ತು ಬಸ್‌ ವ್ಯವಸ್ಥೆ

point-5ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಆಟೋಗಳನ್ನು ನಿಲ್ಲಿಸಲಾಗುತ್ತದೆ. ಪ್ರತಿ ರೈಲು ಬಂದಾಗಲು ಪ್ರಯಾಣಿಕರು ಹೊರ ಬರಲು ಕಷ್ಟವಾಗುತ್ತದೆ. ಆಟೋಗಳ ನಿಲುಗಡೆಗೆ ವ್ಯವಸ್ಥೆ ಇದೆ. ಅಲ್ಲಿಯೇ ಅವು ನಿಲ್ಲುವಂತೆ ಮಾಡಬೇಕು. ಪ್ರೀಪೇಡ್‌ ಆಟೋ ವ್ಯವಸ್ಥೆ ಜಾರಿಗೊಳಿಸಬೇಕು. ಇನ್ನು, ರೈಲ್ವೆ ನಿಲ್ದಾಣಕ್ಕೆ ಬಸ್‌ ವ್ಯವಸ್ಥೆ ಬೇಕು.

ಸಲಹೆ 6 : ಭದ್ರಾವತಿ ರೈಲ್ವೆ ನಿಲ್ದಾಣ

point-6ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಕೆಲವು ರೈಲು ತಡವಾಗಿ ಬಂದಾಗ ಅವುಗಳ ಕುರಿತು ವಿಚಾರಿಸಿದಾಗ ಸೂಕ್ತ ವಿವರಣೆ ನೀಡುವುದಿಲ್ಲ. ರೈಲು ಟಿಕೆಟ್‌ ಬುಕ್‌ ಮಾಡಲು ತೆರಳಿದರೆ ಪ್ರಯಾಣಿಕರಿಂದಲೇ ರೈಲಿನ ನಂಬರ್‌ ಕೇಳಿ ಕಿರಿಕಿರಿ ಮಾಡುತ್ತಾರೆ. ಶೌಚಾಲಯದ ಸಮಸ್ಯೆ ಇದೆ. ಮಳೆ ಬಂದರೆ ನಿಲ್ದಾಣ ಸೋರುತ್ತದೆ.

ಇದನ್ನೂ ಓದಿ – ಬೆಂಗಳೂರು – ಶಿವಮೊಗ್ಗ ಎಷ್ಟು ಎಕ್ಸ್‌ಪ್ರೆಸ್‌ ರೈಲುಗಳಿವೆ? ಯಾವ್ಯಾವ ರೈಲಿನ ಟೈಮಿಂಗ್‌ ಏನು?

shimoga railway station

ಸಲಹೆ 7 : ಲೈನ್‌ ಡಬ್ಲಿಂಗ್‌, ಹೊಸ ಮಾರ್ಗ

point-7ಬೀರೂರು – ಶಿವಮೊಗ್ಗ ಮಧ್ಯೆ ರೈಲ್ವೆ ಲೇನ್‌ ಡಬ್ಲಿಂಗ್‌ ಆಗಬೇಕು. ತಾಳಗುಪ್ಪ – ಹೊನ್ನಾವರ ರೈಲ್ವೆ ಮಾರ್ಗ ನಿರ್ಮಿಸಿದರೆ ಗೋವಾ, ಮುಂಬೈ ಸಂಪರ್ಕಕ್ಕೆ ಅನುಕೂಲ. ಶಿವಮೊಗ್ಗ – ಚಿಕ್ಕಜಾಜೂರು ರೈಲ್ವೆ ಮಾರ್ಗ ನಿರ್ಮಿಸಿದರೆ ಬಳ್ಳಾರಿ, ಚಿತ್ರದುರ್ಗ ಪ್ರಯಾಣಕ್ಕೆ ಅನುಕೂಲ. ಶಿವಮೊಗ್ಗದಿಂದ – ಹಾಸನ ಸಕಲೇಶಪುರ ಮಾರ್ಗದಲ್ಲಿ ರೈಲು ವ್ಯವಸ್ಥೆ ಮಾಡಿದರೆ ಕೇರಳ ಸಂಪರ್ಕ ಅನುಕೂಲ. ಶಿವಮೊಗ್ಗ – ಚಿಕ್ಕಮಗಳೂರು ರೈಲು ಸರಿಯಾದ ಟೈಮ್‌ಗೆ ಸಂಚರಿಸುತ್ತಿಲ್ಲ.

ಯಶವಂತಪುರದಲ್ಲಿ ಬೆಂಗಳೂರು – ಶಿವಮೊಗ್ಗ ರೈಲು ಎಲ್ಲಿ ಬರುತ್ತೆ, ಯಾವ ಪ್ಲಾಟ್‌ಫಾರಂನಿಂದ ಹೊರಡಲಿದೆ ಅನ್ನುವುದೇ ಗೊತ್ತಾಗುವುದಿಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಮೆಜೆಸ್ಟಿಕ್‌ನಲ್ಲಿ ಒಮ್ಮೆ ಎಂಟನೇ ಪ್ಲಾಟ್‌ಫಾರಂ ಒಮ್ಮೆ ಹತ್ತನೆ ಪ್ಲಾಟ್‌ಫಾರಂ ಎಂದು ಪ್ರಯಾಣಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.ವಿನೋದ್‌ ಪೈ
ಕೆ.ವಿ.ವಸಂತ ಕುಮಾರ್‌ ಅವರು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿರುವುದು ಖುಷಿಯ ವಿಚಾರ. ಹೊಸ ರೈಲು ಬಿಡಿಸಲು ಈ ಸಮಿತಿಗೆ ಶಕ್ತಿ ಇದೆ. ನಮ್ಮೂರ ರೈಲ್ವೆ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನ ಮಾಡೋಣ.ಎನ್‌.ಗೋಪಿನಾಥ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷ

ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಕೆ.ವಿ.ವಸಂತ ಕುಮಾರ್‌ ಮಾತನಾಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ರೈಲ್ವೆ ಸಮಸ್ಯೆಗಳ ಕುರಿತ ಹೋರಾಟಕ್ಕೆ ಹಿಂದಿನಿಂದ ಸ್ಪಂದಿಸಿದೆ. ರೈಲ್ವೆ ನಿಲ್ದಾಣದಲ್ಲಿ ಆಟೋಗಳ ನಿಲುಗಡೆ ಸಮಸ್ಯೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಭೇಟಿಯಾಗಿ ಚರ್ಚೆ ನಡೆಸುತ್ತೇವೆ. ಭದ್ರಾವತಿ ರೈಲ್ವೆ ನಿಲ್ದಾಣಕ್ಕೂ ಭೇಟಿ ನೀಡಲಿದ್ದೇವೆ. ಇನ್ನು, ಸಭೆಯಲ್ಲಿನ ಸಲಹೆಗಳ ಕುರಿತು ರೈಲ್ವೆ ಇಲಾಖೆಯ ವಿಭಾಗೀಯ ಮತ್ತು ವಲಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಬಜೆಟ್‌ನಲ್ಲಿ ತರಲು ಸೂಕ್ತವೆನಿಸುವ ಸಂಗತಿಗಳಿದ್ದರೆ ಸಂಸದರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದರು.

ಇದನ್ನೂ ಓದಿ – ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲುಗಳು, ಯಾವ್ಯಾವ ರೈಲಿನ ಟೈಮಿಂಗ್‌ ಏನು? ಇಲ್ಲಿದೆ ಲಿಸ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment