ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 27 MAY 2024
SHIMOGA : ರೋಡ್ ರೋಮಿಯೋಗಳಿಗೆ (Road Romeos) ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಈ ಹಿಂದೆ ಓಬವ್ವ ಪಡೆದ ಆರಂಭಿಸಿತ್ತು. ಈಗ ಆ ಪಡೆಗೆ ಮರು ಜೀವ ನೀಡಲಾಗಿದೆ. ಚೆನ್ನಮ್ಮ ಪಡೆ ಎಂಬ ಹೊಸ ಹೆಸರಿನೊಂದಿಗೆ ಇವತ್ತಿನಿಂದ ಗಸ್ತು ಆರಂಭಿಸಲಿದೆ.
ಹೊಸ ಕಾರು, ವಿನೂತನ ಲೋಗೊ
ಓಬವ್ವ ಪಡೆ ಮಾದರಿಯಲ್ಲೇ ಚೆನ್ನಮ್ಮ ಪಡೆಗು ಪ್ರತ್ಯೇಕ ವಾಹನ ನಿಗದಿಪಡಿಸಲಾಗಿದೆ. ಏರ್ಟಿಗಾ ವಾಹನವನ್ನು ಪಡೆಗೆ ಮೀಸಲಿರಿಸಲಾಗಿದೆ. ಓಬವ್ವ ಪಡೆಗೆ ಪ್ರತ್ಯೇಕ ಲಾಂಛನ ಇರಲಿಲ್ಲ. ಆದರೆ ಚೆನ್ನಮ್ಮ ಪಡೆಗೆ ಲೋಗೊ ಸಿದ್ಧಪಡಿಸಲಾಗಿದೆ. ಏರ್ಟಿಗಾ ವಾಹನದ ಮೂರು ಕಡೆ ಚೆನ್ನಮ್ಮ ಪಡೆ ಎಂದು ಲೋಗೊ ಅಂಟಿಸಲಾಗಿದೆ.
ಎಷ್ಟು ಸಿಬ್ಬಂದಿ? ಏನೆಲ್ಲ ಕೆಲಸ ಮಾಡುತ್ತೆ?
ಚೆನ್ನಮ್ಮ ಪಡೆಯ ವಾಹನ ಶಾಲೆ, ಕಾಲೇಜುಗಳು, ಮಹಿಳೆಯರು ಹೆಚ್ಚು ಓಡಾಡುವ ಕಡೆ ನಿರಂತರ ಗಸ್ತು ತಿರುಗಲಿದೆ. ರೋಡ್ ರೋಮಿಯೋಗಳು, ವೀಲಿಂಗ್ ಮಾಡುವವರು, ಕಿಡಿಗೇಡಿಗಳು ಕಂಡರೆ ತಕ್ಷಣ ವಶಕ್ಕೆ ಪಡೆಯಲಾಗುತ್ತದೆ. ಈ ಪಡೆಯ ಸಿಬ್ಬಂದಿ ಬಸ್ ನಿಲ್ದಾಣಗಳು, ಮಾರುಕಟ್ಟೆಗಳ ಬಳಿಯು ಕಾರ್ಯಾಚರಣೆ ನಡೆಸಲಿದ್ದಾರೆ. ಕಿಡಿಗೇಡಿಗಳು ಕಂಡರೆ ತಕ್ಷಣಕ್ಕೆ ವಶಕ್ಕೆ ಪಡೆಯಲಿದ್ದಾರೆ.
ಇದನ್ನೂ ಓದಿ – ಪ್ರಚಾರ ಬಿರುಸುಗೊಳಿಸಿದ ಬಿಜೆಪಿ, ಡಾ. ಧನಂಜಯ ಸರ್ಜಿ ಪರ ಅಖಾಡಕ್ಕಿಳಿದ ಪತ್ನಿ, ಎಲ್ಲೆಲ್ಲಿ ಹೇಗಿದೆ ಕ್ಯಾಂಪೇನ್?
ಚೆನ್ನಮ್ಮ ಪಡೆಗೆ 12 ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ ಪಿಎಸ್ಐ, ಎಎಸ್ಐ, ಮಹಿಳಾ ಸಿಬ್ಬಂದಿ ಇರಲಿದ್ದಾರೆ. ಎರಡು ಪಾಳಿಯಲ್ಲಿ ಇವರು ಕೆಲಸ ನಿರ್ವಹಿಸಲಿದ್ದಾರೆ. ಶಾಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ತರಬೇತಿಯನ್ನು ಈ ಪಡೆಯ ಸಿಬ್ಬಂದಿ ನೀಡಲಿದೆ.

ಓಬವ್ವ ಬದಲು ಚೆನ್ನಮ್ಮ ಹೆಸರೇಕೆ?
ಓಬವ್ವ ಪಡೆಗೆ ಚೆನ್ನಮ್ಮ ಪಡೆ ಎಂದು ಮರು ನಾಮಕಾರಣ ಮಾಡಲಾಗಿದೆ. ‘ಕೆಳದಿ ಅರಸರ ನಾಡು. ಸ್ಥಳೀಯತೆ ಗಮನದಲ್ಲಿ ಇಟ್ಟುಕೊಂಡು ಚೆನ್ನಮ್ಮ ಪಡೆ ಎಂದು ಹೆಸರು ಇಡಲಾಗಿದೆ. ಕಮಲಾ ನೆಹರೂ ಕಾಲೇಜು ಮುಂಭಾಗ ಚೆನ್ನಮ್ಮ ಪಡೆಗೆ ಚಾಲನೆ ನೀಡಲಾಗುತ್ತದೆʼ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಸಂಪರ್ಕ ಮಾಡುವುದು ಹೇಗೆ?
ಯುವತಿಯರು, ಮಹಿಳೆಯರು ತಮಗೆ ಯಾರಾದರೂ ಕಿರುಕುಳ ನೀಡುತ್ತಿದ್ದರೆ ತುರ್ತಾಗಿ ಚೆನ್ನಮ್ಮ ಪಡೆಯನ್ನು ಸಂಪರ್ಕಿಸಬಹುದಾಗಿದೆ. ಸಹಾಯವಾಣಿ ನಂಬರ್ 112, ಮಹಿಳಾ ಪೊಲೀಸ್ ಠಾಣೆ 9480803349, ಕಂಟ್ರೋಲ್ ರೂಮ್ 08182 261413, ಕಂಟ್ರೋಲ್ ರೂಮ್ ಎಸ್ಐ 9480800947 ಈ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಬಹುದಾಗಿದೆ. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇರಿಸಲಾಗುತ್ತದೆ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















