‘ಲಿಂಗನಮಕ್ಕಿ ಡ್ಯಾಮ್‌ಗೆ ಮುತ್ತಿಗೆ ಹಾಕ್ತೀವಿ, ವಿದ್ಯುತ್‌ ಉತ್ಪಾದನೆ ತಡೆಯುತ್ತೇವೆʼ

SHIMOGA NEWS, 20 OCTOBER 2024 : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಮಸ್ಯೆ ಪರಿಹರಿಸದೆ ಇದ್ದರೆ ಜೋಗದಲ್ಲಿ ವಿದ್ಯುತ್‌ ಉತ್ಪಾದನಾ ಘಟಕದಲ್ಲಿ (Dam) ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾ ಶರಾವತಿ ಹಿನ್ನೀರು ಮುಳುಗಡೆ ರೈತರ ಸಂಘದ ಅಧ್ಯಕ್ಷ ಕೆ.ಎಂ.ಹೂವಪ್ಪ ಎಚ್ಚರಿಸಿದರು.➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರದಲ್ಲಿ ಅ.21ರಂದು ಸಾಗರದಲ್ಲಿ ಬೃಹತ್‌ ಮೆರವಣಿಗೆ, ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಇದಕ್ಕೆ ಶರಾವತಿ ಹಿನ್ನೀರು ಮುಳುಗಡೆ ರೈತರ ಸಂಘದ ಬೆಂಬಲವಿದೆ ಎಂದು ತಿಳಿಸಿದರು.

Farmers-press-meet-against-ottuvari-teravu

ಮೊದಲ ಹಂತದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ನಮ್ಮ ಬೇಡಿಕೆ ಈಡೇರದೆ ಇದ್ದರೆ ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕುತ್ತೇವೆ. ಆ ಬಳಿಕ ಜೋಗದಲ್ಲಿ ವಿದ್ಯುತ್‌ ಉತ್ಪಾದನಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ವಿದ್ಯುತ್‌ ಸ್ಥಗಿತಗೊಳಿಸುತ್ತೇವೆ.

ಕೆ.ಎಂ.ಹೂವಪ್ಪ , ಜಿಲ್ಲಾ ಶರಾವತಿ ಹಿನ್ನೀರು ಮುಳುಗಡೆ ರೈತರ ಸಂಘದ ಅಧ್ಯಕ್ಷ

Farmers-press-meet-against-ottuvari-teravu

ರೈತರಿಗೆ ಹಕ್ಕು ಪತ್ರ ನೀಡಲು ಸಾಧ್ಯವಾಗದೆ ಇದ್ದರೆ ಲಿಂಗನಮಕ್ಕಿ ಜಲಾಶಯವನ್ನು ಸರ್ಕಾರವೆ ಒಡೆದು ಹಾಕಲಿ. ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ನಿಮ್ಮ ಸರ್ಕರವೆ ನಮಗೆ ಬೇಡ. ಮಲೆನಾಡು ಭಾಗವನ್ನು ಪ್ರತ್ಯೇಕ ರಾಜ್ಯ ಮಾಡಲಿ.

ತೀ.ನಾ.ಶ್ರೀನಿವಾಸ್‌, ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ

ಸುದ್ದಿಗೋ‍ಷ್ಠಿಯಲ್ಲಿ ಎಂ.ಡಿ.ನಾಗರಾಜ್‌, ಪ್ರಮೋದ್‌, ರಾಘವೇಂದ್ರ ಇದ್ದರು.

ಇದನ್ನೂ ಓದಿ » ಲಕ್ಕಿನಕೊಪ್ಪದಲ್ಲಿ ಕೋಡಿ ಬಿದ್ದ ಕೆರೆ, ಕೊಚ್ಚಿ ಹೋದ ರಸ್ತೆ ಪಕ್ಕದ ಮಣ್ಣು, ಜಮೀನಿಗೆ ನೀರು

Leave a Comment