ರಿಪ್ಪನ್ಪೇಟೆ: ಹೊಂಬುಜ ಕ್ಷೇತ್ರದಲ್ಲಿ ವಿಶ್ವ ಶಾಂತಿ ಯುವ ಸೇವಾ ಸಮಿತಿಯಿಂದ ಜಿನ ಸಹಸ್ರ ನಾಮಾರ್ಚನೆಯ (Jina Namasmarane) ಪೂಜೆ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು. ಹೊಂಬುಜ ಜೈನ ಮಠಾಧೀಶರಾದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶಾಸ್ತ್ರದನ್ವಯ ಪೂಜೆಗಳನ್ನು ಸಲ್ಲಿಸಲಾಯಿತು.
ಇದನ್ನೂ ಓದಿ – ಕೋಟೆ ದೇಗುಲ, ವೈಭವದ ಬ್ರಹ್ಮರಥೋತ್ಸವ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?
ಬಳಿಕ ಆಶೀರ್ವಚನ ನೀಡಿದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿನನಾಮ ಸ್ತುತಿಸುವುದೆಂದರೆ ಕರ್ಮಕ್ಷಯ ಮಾಡಿದಂತಾಗುವುದು. ಆತೋನ್ನತಿಯ ನೈಜ ಸನ್ಮಾರ್ಗವು ಜಿನ ಸಹಸ್ರನಾಮ ಅರ್ಚನೆಯ ಮೂಲಕ ದೊರೆಯಲಿದೆ ಎಂದರು.
ಪದ್ಮಾವತಿ ಮಹಿಳಾ ಮಂಡಲ ಸದಸ್ಯರು, ಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಭಕ್ತರು ಹಾಜರಿದ್ದರು. ವಿಶ್ವ ಸೇವಾ ಯುವ ಸಮಿತಿ ಬೆಂಗಳೂರು ಹಾಗೂ ವಿವಿಧ ಜೈನ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಏಕಕಾಲದಲ್ಲಿ ನಡೆದ 1.11ಕೋಟಿ ಜಿನ ನಾಮಸ್ಮರಣೆ ದಾಖಲೆಗೆ ಸೇರ್ಪಡೆಯಾಯಿತು.






