
ಶಿವಮೊಗ್ಗ: ಮಹಿಳೆಯರ ಚಿತ್ರಕಲೆಯಲ್ಲಿ (painting) ಪ್ರಕೃತಿಯ ಸೊಬಗು ಅನಾವರಣಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸ್ಪರ್ಧೆಗಳು ಮಹಿಳೆಯರಲ್ಲಿ ಸುಪ್ತವಾಗಿ ಅಡಗಿರುವ ಕಲೆ ಮತ್ತು ಕೌಶಲ್ಯಕ್ಕೆ ಉತ್ತಮ ವೇದಿಕೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಅವರು ತಿಳಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ‘ಪ್ರಕೃತಿ’ ವಿಷಯದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರಕಲೆ ಕೇವಲ ಕಲೆಯಾಗಿ ಉಳಿಯದೆ ಮನಸ್ಸಿಗೆ ಆನಂದ ನೀಡುವ ಮಾರ್ಗವಾಗಿದೆ. ಆಸಕ್ತರು ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದರು.
ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

ಚಿತ್ರಕಲಾ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯ ಒಟ್ಟು 74 ಮಹಿಳಾ ಸ್ಪರ್ಧಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಪ್ರತಿ ಸ್ಪರ್ಧಿಗೆ 2×2.5 ಅಳತೆಯ ಕ್ಯಾನ್ವಾಸ್ ಒದಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ನ ವಿವಿಧ ಅಧಿಕಾರಿಗಳು ಮತ್ತು ಕಲಾ ಆಸಕ್ತರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಅತ್ಯುತ್ತಮ ಕಲೆ ಪ್ರದರ್ಶಿಸಿದವರಿಗೆ ನಗದು ಬಹುಮಾನ ವಿತರಿಸಲಾಯಿತು.
- ಪ್ರಥಮ ಬಹುಮಾನ (₹8,000): ಪ್ರಕೃತಿ ಶೆಣೈ, ತೀರ್ಥಹಳ್ಳಿ.
- ದ್ವಿತೀಯ ಬಹುಮಾನ (₹6,000): ಭಾವನಾ ಹೊಳ್ಳ, ತೀರ್ಥಹಳ್ಳಿ.
- ತೃತೀಯ ಬಹುಮಾನ (₹4,000): ಆಶಾ ಉಮೇಶ್, ತೀರ್ಥಹಳ್ಳಿ.
- ಸಮಾಧಾನಕರ ಬಹುಮಾನ (ತಲಾ ₹2,000): ಹೇಮಲತಮ್ಮ (ಶಿಕಾರಿಪುರ), ಮನ್ವಿತಾ ಆರ್. (ಶಿವಮೊಗ್ಗ), ಶಾಲಿನಿ ನಾಯಕ್ (ಆನವಟ್ಟಿ).
- ವಿಶೇಷ ಬಹುಮಾನ: ಸೌಜನ್ಯ ಆರ್. ಕೆ., ಶಿವಮೊಗ್ಗ.

ವಿಜೇತರಿಗೆ ಮಾರ್ಚ್ 26ರಂದು ನಡೆಯಲಿರುವ ಸಮಾರಂಭದಲ್ಲಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್ ಡಿಕ್ಕಿ, ಆಗಿದ್ದೇನು?








