ಕುಟುಂಬದವರೆಲ್ಲ ಕೊಳ್ಳೆಗಾಲದಲ್ಲಿದ್ದಾಗ ಗಾಜನೂರಿನ ಮನೆಯಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಮಾಯ

Published On : ಏಪ್ರಿಲ್ 16, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಕುಟುಂಬದವರು ಕೊಳ್ಳೆಗಾಲಕ್ಕೆ ಹೋಗಿದ್ದ ಸಂದರ್ಭ ಗಾಜನೂರು ಅಗ್ರಹಾರದ ಮನೆಯೊಂದರಲ್ಲಿ ಕಳ್ಳತನ (burglary) ನಡೆದಿದೆ. ಅಂದಾಜು ₹31.30 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳುವಾಗಿದೆ. ಏಪ್ರಿಲ್ 13ರ ರಾತ್ರಿ ಈ ಘಟನೆ ನಡೆದಿರುವ ಶಂಕೆ ಇದೆ.

ಇಲ್ಲಿನ ಹನುಮಂತು ಎಂಬುವವರ ಮನೆಯ ಬಾಗಿಲನ್ನು ಆಯುಧದಿಂದ ಮೀಟಿ ಒಳನುಗ್ಗಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಘಟನೆ ವೇಳೆ ಮನೆಯವರು ಕಾರ್ಯಕ್ರಮಕ್ಕೆ ಕೊಳ್ಳೆಗಾಲಕ್ಕೆ ತೆರಳಿದ್ದರು.

Police-Jeep-at-Shimoga-General-Image

ಮನೆಯೊಳಗಿನ ಬೀರುವನ್ನು ಮೀಟಿ ತೆಗೆದಿರುವ ಕಳ್ಳರು, ಒಟ್ಟು 204 ಗ್ರಾಂ ಚಿನ್ನದ ಆಭರಣಗಳು ಮತ್ತು 250 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕದ್ದಿದ್ದಾರೆ. ಇದರಲ್ಲಿ ಚಿನ್ನದ ನೆಕ್ಲೇಸ್, ಚೈನ್, ಉಂಗುರಗಳು ಹಾಗೂ ಮಕ್ಕಳ ಆಭರಣಗಳು ಸೇರಿವೆ. ಇವುಗಳ ಒಟ್ಟು ಮೌಲ್ಯ ₹31,30,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮುಖ, ತಲೆ, ಕುತ್ತಿಗೆಗೆ ಚಾಕುವಿನಿಂದ ಹಲ್ಲೆ, ಗಾಯಾಳು ಮೆಗ್ಗಾನ್‌ ಆಸ್ಪತ್ರೆಗೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 16, 2026

Leave a Comment