ಶಿವಮೊಗ್ಗದ ಹೊಸಮನೆ ಮಹಿಳೆಯ ಡಿಫರೆಂಟ್ ಪ್ರಯೋಗ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್, ಏನದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 20 ಅಕ್ಟೋಬರ್ 2019

https://www.facebook.com/liveshivamogga/videos/519102102271345/?t=0

ಮನೆಯಲ್ಲಿ ಬಳೆಕೆಯಾಗದೆ ಉಳಿದುಕೊಂಡಿರುವ ಬಟ್ಟೆಗಳಿಗೆ ಜೀವ ತುಂಬಿದರು ಈ ಮಹಿಳೆ. ನೆಹರು ಸ್ಟೇಡಿಯಂನಲ್ಲಿ ವಾಕಿಂಗ್ ಬರುವವರಿಗೆ ಇವರೆ ಈಗ ಪ್ರೇರಣೆ. ಈ ಮಹಿಳೆಯ ಕೆಲಸಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಿಗುತ್ತಿದೆ ಭಾರೀ ಮೆಚ್ಚುಗೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದ್ಯದಲ್ಲೆ ತಲುಪಿಸಲಿದ್ದಾರೆ ಸ್ಪೆಷಲ್ ಉಡುಗೊರೆ.

ಇವರು ಗೀತಾ ನರಹರಿ ಪಂಡಿತ್. ಶಿವಮೊಗ್ಗದ ಹೊಸಮನೆ ಎರಡನೆ ಕ್ರಾಸ್ ನಿವಾಸಿ. ಪ್ರಧಾನಿ ನರೇಂದ್ರ ಮೋದಿ ಅಂದರೆ ಅಚ್ಚುಮೆಚ್ಚು. ಪ್ಲಾಸ್ಟಿಕ್ ನಿಷೇಧ ಕುರಿತು ಪ್ರಧಾನಿ ಮೋದಿ ಹೇಳಿಕೆ ಇವರಿಗೆ ಪ್ರೇರಣೆಯಾಯ್ತು. ಹಾಗಾಗಿ ತಾವೆ ಬಟ್ಟೆ ಬ್ಯಾಗ್’ಗಳನ್ನು ಹೊಲೆದು, ಸೈಲೆಂಟಾಗಿ ಸಾರ್ವಜನಿಕರಿಗೆ ಹಂಚುತ್ತಿದ್ದಾರೆ.

ಮನೆಯಲ್ಲಿ ಬಳಕೆಯಾಗದೆ ಉಳಿದಿರುವ ಬಟ್ಟೆಗಳನ್ನು ಕತ್ತರಿಸಿ, ತಾವೆ ಹೊಲೆದು ಬೆಟ್ಟೆ ಬ್ಯಾಗ್ ಸಿದ್ಧಪಡಿಸುತ್ತಿದ್ದಾರೆ. ನೂರು ಬ್ಯಾಗ್ ಹೊಲೆಯಬೇಕು ಅನ್ನುವುದು ಗೀತಾ ಪಂಡಿತ್ ಅವರ ಗುರಿಯಾಗಿತ್ತು. ಇವರು ಹಂಚುತ್ತಿರುವ ಬಟ್ಟೆ ಬ್ಯಾಗ್’ಗೆ ಈಗ ಸಿಕ್ಕಾಪಟ್ಟೆ ಡಿಮಾಂಡ್ ಇರುವುದರಿಂದ, ದಿನೆ ದಿನೆ ಟಾರ್ಗೆಟ್ ಬದಲಾಗುತ್ತಿದೆ.

‘ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲಿಕೆ ಉಪಮೇಯರ್ ಚನ್ನಬಸಪ್ಪ ಮತ್ತು ಅಧಿಕಾರಿಗಳು ಜನರಿಗೆ ಬಟ್ಟೆ ಬ್ಯಾಗ್ ಹಂಚಿದರು. ಆಗ ನನಗೆ ನಮ್ಮ ಮನೆಯಲ್ಲಿ ಬಳಕೆಯಾಗದೆ ಉಳಿದುಕೊಂಡಿರುವ ಬಟ್ಟೆಗಳಿಂದ ಬ್ಯಾಗ್ ತಯಾರಿಸಬೇಕು ಅನ್ನುವ ಯೋಚನೆ ಬಂತು’ ಅಂತಾರೆ ಗೀತಾ ಪಂಡಿತ್.

73533152 951330538561700 5379528421791498240 n.jpg? nc cat=103& nc oc=AQmS85ZPROOqqmvh3yQU3wdHtfSG1mqG8h 1kncQcVy6FjnaE9sgbSAXrL3TlXQIubyjaSnMA1ZrvAT9zPTKDkEU& nc ht=scontent.fixe1 1

ಬೆನ್ನಿಗೆ ನಿಂತಿದ್ದಾರೆ ನೆಹರು ಸ್ಟೇಡಿಯಂ ವಾಕಿಂಗ್ ಫ್ರೆಂಡ್ಸ್

ಗೀತಾ ಪಂಡಿತ್ ಪ್ರತಿ ಬೆಳಗ್ಗೆ ನೆಹರು ಸ್ಟೇಡಿಯಂನಲ್ಲಿ ವಾಕಿಂಗ್ ಮಾಡುತ್ತಾರೆ. ತಾವು ಹೊಲೆದ ಬಟ್ಟೆ ಬ್ಯಾಗ್’ಗಳನ್ನು ಮೊದಲು ಹಂಚಿದ್ದೆ ನೆಹರು ಸ್ಟೇಡಿಯಂನಲ್ಲಿ. ‘ಆರಂಭದಲ್ಲಿ ಜನರು ದುಡ್ಡಿಗಾಗಿ ಮಾರಾಟ ಮಾಡುತ್ತಿದ್ದೇವೆ ಅಂದುಕೊಂಡರು. ಆದರೆ ಇದು ಉಚಿತ ಮತ್ತು ಪ್ಲಾಸ್ಟಿಕ್ ನಿಷೇಧ ಜಾಗೃತಿಗಾಗಿ ಮಾಡುತ್ತಿದ್ದೇವೆ ಅಂದಾಗ ಖುಷಿಯಾದರು. ಮನೆಯಲ್ಲಿ ಬಳಕೆಯಾಗದ ಬಟ್ಟೆಗಳನ್ನು ಬಿಸಾಡುವ ಬದಲು, ಬಟ್ಟೆ ಬ್ಯಾಗ್ ತಯಾರಿಸಬಹುದು ಎಂದು ಎಲ್ಲರಿಗು ಮನವರಿಕೆ ಮಾಡಿದ್ದೇವೆ’ ಅನ್ನುತ್ತಾರೆ ಗೀತಾ ಪಂಡಿತ್.

74994088 951330581895029 5031402317220413440 n.jpg? nc cat=108& nc oc=AQl0Lg3DwdZYcEnpRwg0g307qZ2r4zTzrBvLzMlGXNgDG8hv1SMnNUtFuG4MDK QEGd6q rZl9uGUel7C2GNmRj0& nc ht=scontent.fixe1 1

ಇನ್ನು, ಗೀತಾ ಪಂಡಿತ್ ಅವರಿಗೆ ನೆಹರು ಸ್ಟೇಡಿಯಂನಲ್ಲಿ ವಾಕಿಂಗ್ ಫ್ರೆಂಡ್ಸ್ ಇದ್ದಾರೆ. ಉಷಾ ಶಶಿಧರ್, ಸುಮಾ, ಚಂದ್ರಿಕಾ, ಪ್ರೇಮಾ, ಶೈಲಾ, ಗೀತಾ ಪುಟಾಣಿ, ಹೇಮಲತಾ, ಲಕ್ಷ್ಮಿ, ಸುಧಾ, ಲಲಿತಮ್ಮ, ಡಾ.ಹೇಮಾ ಮೋಹನ್, ಜಯಂತಿ ಅವರೆಲ್ಲ ಈ ವಾಕಿಂಗ್ ಗ್ರೂಪ್’ನ ಸದಸ್ಯರು. ಇವರೆಲ್ಲ ಈಗ ಗೀತಾ ಪಂಡಿತ್ ಅವರ ಕಾರ್ಯಕ್ಕೆ ಬೆನ್ನೆಲುಬಾಗಿದ್ದಾರೆ. ತಮ್ಮ ಮನೆಯಲ್ಲಿ ಬಳಕೆಯಾಗದ ಉಳಿದ ಬಟ್ಟೆಗಳನ್ನು ತಂದು ಬ್ಯಾಗ್ ಮಾಡಲು ಕೊಡಲು ಸಿದ್ಧವಾಗಿದ್ದಾರೆ. ಜೊತೆಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

75348925 951330735228347 2954623297020493824 n.jpg? nc cat=104& nc oc=AQnkUU 9 Tw5R67wPI DZluu6UKtAYQs0FxGOyqIEMnSeEa2jOHbMhr5 hZfdynJ znXeVFnaV4s8PwVoLUtlsYc& nc ht=scontent.fixe1 1

ಪ್ರಧಾನಿ ಮೋದಿಗೆ ಐದು ವಿಐಪಿ ಬ್ಯಾಗ್

ಗೀತಾ ಪಂಡಿತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ. ‘ಪ್ರಧಾನಿ ಮೋದಿ ಅವರಿಗೆ ಐದು ಸ್ಪೆಷಲ್ ಬ್ಯಾಗ್ ಹೊಲೆಯಲು ಯೋಚಿಸಿದ್ದೇನೆ. ಖಾದಿಯಲ್ಲಿ ವಿಐಪಿ ಬ್ಯಾಗ್ ಸಿದ್ಧಪಡಿಸಿ, ಮೋದಿ ಅವರಿಗೆ ಕಳುಹಿಸಿಕೊಡುತ್ತೇನೆ. ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೇನೆ’ ಎಂದು ಖುಷಿಯಿಂದ ತಿಳಿಸುತ್ತಾರೆ.

73352341 951330648561689 7278365297650696192 n.jpg? nc cat=100& nc oc=AQkYEdUifz6FNYOcyixLQnw Ii17oWHPfs Lhv3b1fAa2WxTG uwMtLRS9RU0FabJkM c1yAGNJ4D69RZfbCdwQS& nc ht=scontent.fixe1 1

ನೆಹರು ಸ್ಟೇಡಿಯಂನಲ್ಲಿ ಗೀತಾ ಪಂಡಿತ್ ಅವರು 40ಕ್ಕೂ ಹೆಚ್ಚು ಬ್ಯಾಗ್ ಉಚಿತವಾಗಿ ವಿತರಿಸಿದ್ದಾರೆ. ಇನ್ನಷ್ಟು ಬಟ್ಟೆ ಬ್ಯಾಗ್ ಹೊಲೆದು ಮತ್ತಷ್ಟು ಜನರಿಗೆ ಹಂಚಬೇಕು ಎಂದುಕೊಂಡಿದ್ದಾರೆ. ಈ ವಯಸ್ಸಲ್ಲಿ ಇಷ್ಟೊಂದು ರಿಸ್ಕ್ ಯಾಕೆ ಎಂದು ಪ್ರಶ್ನಿಸಿದರೆ, ‘ಪ್ರಧಾನಿ ಮೋದಿ ಅವರು ನನಗಿಂತಲು ಎರಡು ವರ್ಷ ದೊಡ್ಡವರು. ಅವರು 18 ಗಂಟೆ ಕೆಲಸ ಮಾಡುತ್ತಾರೆ. ನಾವು ಇಷ್ಟು ಮಾಡದಿದ್ದರೆ ಹೇಗೆ’ ಎಂದು ಮರುಪ್ರಶ್ನೆಯನ್ನು ಮುಂದಿಡುತ್ತಾರೆ.

20190817 WBP001 7

ಗೀತಾ ಪಂಡಿತ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೆ ಶಿವಮೊಗ್ಗ, ಬೆಂಗಳೂರು ಮತ್ತು ವಿದೇಶದಿಂದೆಲ್ಲ ಕರೆ ಮಾಡಿ ಅವರಿಗೆ ಮೆಚ್ಚುಗೆಯ ಮಾತು ಹೇಳುತ್ತಿದ್ದಾರೆ. ಇವರ ಕಾರ್ಯ ಉಳಿದವರಿಗೆ ಪ್ರೇರಣೆಯಾಗಿದೆ.

72418328 947023688992385 5894236130018066432 n.jpg? nc cat=109& nc oc=AQnkhXGrWCd6R5Iy jCoYDpAKPLoyWM8lNmtsY1kvRKuX8jGwM4 DAOjVD85QMEo2XM& nc ht=scontent.fblr1 3

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 20, 2019

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment