ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 9 ನವೆಂಬರ್ 2019
ನಗರದ ಹೆಚ್ಪಿಸಿ ಚಿತ್ರಮಂದಿರದಲ್ಲಿ ಭರಾಟೆ’ ಚಿತ್ರದ ಪ್ರಮೋಷನ್ಗೆ ಭೇಟಿ ನೀಡಿದ್ದ ನಟ ಶ್ರೀಮುರುಳಿ ಭರ್ಜರಿ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸಿದರು.
ಭರಾಟೆ ಚಿತ್ರ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ ಶ್ರೀಮುರುಳಿಗೆ ಅಭಿಮಾನಿಗಳು ಡೊಳ್ಳು ಕುಣಿತ, ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಿದರು. ಕಾರಿನ ಮೇಲೆ ನಿಂತು ತಮಟೆ ಮತ್ತು ಡೊಳ್ಳು ಕುಣಿತದ ವಾದ್ಯಕ್ಕೆ ಶ್ರೀಮುರುಳಿ ಸ್ಟೆಪ್ಸ್ ಹಾಕಿದರು. ಈ ದೃಶ್ಯ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು. ನಂತರ ಅಭಿಮಾನಿಗಳ ಮೊಬೈಲ್ ಪಡೆದು ಸೆಲ್ಪಿ ಕ್ಲಿಕ್ಕಿಕೊಂಡರು.
ಹೀರೋ ಬರುವ ಮೊದಲೇ ಪಟಾಕಿ
ಪಟಾಕಿ ಹೊಡೆದು ನಟ ಶ್ರೀಮುರುಳಿ ಅವರನ್ನು ಸ್ವಾಗತಿಸಲು ಯೋಜಿಸಲಾಗಿತ್ತು. ಚಿತ್ರಮಂದಿರದ ಮುಂದೆ ರಸ್ತೆಯಲ್ಲಿ ಪಟಾಕಿ ಇರಿಸಲಾಗಿತ್ತು. ಆದರೆ ದೊಡ್ಡ ಗುಂಪಿನ ನಡುವೆ ದಿಢೀರ್ ಪಟಾಕಿ ಹೊತ್ತಿಕೊಂಡು, ಸಿಡಿಯಲು ಆರಂಭಿಸಿತು. ಕೂಡಲೇ ಆಯೋಜಕರು ಓಡಿ ಬಂದು ಪಟಾಕಿ ಆರಿಸಿದರು. ಶ್ರೀಮುರುಳಿ ಅವರು ಬಂದಾಗ ಪುನಃ ಹಚ್ಚಲಾಯಿತು. ಗುಂಪಿನ ನಡುವೆ ಪಟಾಕಿ ಹಚ್ಚಿದ್ಯಾರು ಅನ್ನವುದು ಯಾರಿಗು ಗೊತ್ತಾಗಲಿಲ್ಲ..!
ಶಿವಮೊಗ್ಗ ಜತೆ ಅವಿನಾಭಾವ ಸಂಬಂಧ
ಶಿವಮೊಗ್ಗಕ್ಕೂ ನನಗೂ ಅವಿನಾಭಾವ ಸಂಬಂಧವಿದ್ದು, ಬಾಲ್ಯದ ಜೀವನವನ್ನು ಬಹಳಷ್ಟು ಕಾಲ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೇ ಕಳೆದಿದ್ದೇನೆ ಎಂದು ನಟ ಶ್ರೀಮುರುಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ಹುಡುಗನಿದ್ದಾಗಿನಿಂದ ಶಿವಮೊಗ್ಗ ನನ್ನ ನೆಚ್ಚಿನ ತಾಣ. ಅತ್ತೆ ಮನೆಯೂ ಶಿವಮೊಗ್ಗದಲ್ಲೇ ಇದೆ. ಹಾಗಾಗಿ ಹಲವಾರು ಬಾರಿ ಬಂದಿದ್ದೇನೆ.
ಚಿತ್ರಮಂದಿರದ ಪಾಲುದಾರರಾದ ಪಂಚಾಕ್ಷರಿ,ಶಿವಪ್ರಕಾಶ್, ಷಣ್ಮುಖಪ್ಪ, ಮದಗಜ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಮತ್ತಿತರರಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು















