ಶಿವಮೊಗ್ಗದಲ್ಲಿ ಆಕರ್ಷಕ ಪಥಸಂಚಲನ, ಹೇಗಿತ್ತು? ಯಾವೆಲ್ಲ ತುಕಡಿ ಪಾಲ್ಗೊಂಡಿದ್ದವು?

Republic-Day-parade-in-Shivamogga-Nehru-Stadium

ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ಇಂದು ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ವಿವಿಧ ಪೊಲೀಸ್, ಶಾಲಾ-ಕಾಲೇಜು ಹಾಗೂ ವಿವಿಧ ಸ್ಕ್ವಾಡ್‌ಗಳ ಒಟ್ಟು 26 ತುಕಡಿಗಳು ಪಾಲ್ಗೊಂಡಿದ್ದವು (Shivamogga parade). ಪ್ರೊಬೆಷನರಿ ಐಪಿಎಸ್‌ ಐಧಿಕಾರಿ ಮೇಘಾ ಅಗರ್‌ವಾಲ್‌ ಪಥಸಂಚಲನದ ಮುಖ್ಯ ದಂಡನಾಯಕರಾಗಿದ್ದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಪಥಸಂಚಲನ ಮುನ್ನಡೆಸಿದ ಮಹಿಳಾ ಐಪಿಎಸ್‌ ಅಧಿಕಾರಿ, ಗಮನ ಸೆಳೆದ ಕನ್ನಡದ ಕಮಾಂಡ್‌ ಯಾವೆಲ್ಲ ತುಕಡಿಗಳಿದ್ದವು? ಆರ್.ಎಸ್.ಐ. ಹನುಮರೆಡ್ಡಿ ನೇತೃತ್ವದಲ್ಲಿ ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ. 08 ನೇ ಪಡೆ, ಆರ್.ಎಸ್.ಐ. ರಾಘವೇಂದ್ರ ಎಸ್. ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ … Read more

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಅಪಘಾತ, ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

Crime-News-General-Image

ಶಿವಮೊಗ್ಗ: ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ (bike rider) ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಹೊಸ ಹೊನ್ನಾಪುರ ಗ್ರಾಮದ ರಸ್ತೆಯಲ್ಲಿ ಶಬೀರ್ ಅಹಮದ್ ಅವರು ತಮ್ಮ ಬೈಕ್‌ನಲ್ಲಿ ಸ್ನೇಹಿತ ಕೆ.ಎಂ. ಅಜೀಜುದ್ದೀನ್ ಅವರನ್ನು ಕೂರಿಸಿಕೊಂಡು ತೆರಳುತ್ತಿದ್ದರು. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಟಾಟಾ ಪಂಚ್ ಕಾರು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ … Read more

ಶಿವಮೊಗ್ಗದ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷ ಲಕ್ಷ ಜನ, ಮೈಸೂರು ಸಿಲ್ಕ್‌ ಸೀರೆ ದಾಖಲೆ ಮಾರಾಟ

Mysore-Silk-Saree-Sales-increased-in-Shivamogga.

ಶಿವಮೊಗ್ಗ: ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ 63ನೇ ಫಲಪುಷ್ಪ ಪ್ರದರ್ಶನ ಹಾಗೂ ಮಲೆನಾಡ ಕರಕುಶಲ ಉತ್ಸವವು ವ್ಯಾಪಾರ ವಹಿವಾಟಿನಲ್ಲಿ ದಾಖಲೆ ನಿರ್ಮಿಸಿದೆ. ಪ್ರದರ್ಶನದ ಮೊದಲ ಮೂರು ದಿನಗಳಲ್ಲಿ ಮೈಸೂರು ಸಿಲ್ಕ್ ಸೀರೆಗಳ (Mysore Silk saree) ಮಾರಾಟವು ಬರೋಬ್ಬರಿ ಒಂದು ಕೋಟಿ ರೂಪಾಯಿ ಗಡಿ ದಾಟಿದೆ. ಇದನ್ನೂ ಓದಿ – ಮಾಚೇನಹಳ್ಳಿಯಲ್ಲಿ ಒನ್‌ ವೇ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ, ಕಾರಣವೇನು? ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್‌, ಜನವರಿ 24 ರಿಂದ ಆರಂಭವಾಗಿರುವ ಉತ್ಸವಕ್ಕೆ ಜನರಿಂದ … Read more

ಚಿನ್ನ, ಷೇರಿನ ಮೇಲೆ ಹೂಡಿಕೆ ಮಾಡುವವರೆ ಎಚ್ಚರ, ಶಿವಮೊಗ್ಗದಲ್ಲಿ ದಾಖಲಾಯ್ತು ಪ್ರಕರಣ, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ಷೇರು ಮಾರುಕಟ್ಟೆ ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ಸೈಬರ್ ವಂಚಕರು (cyber fraudsters), ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹61 ಲಕ್ಷ ವಂಚಿಸಿದ್ದಾರೆ. ಖಾಸಗಿ ಕಂಪನಿಯ ಹೆಸರಿನಲ್ಲಿ ನಕಲಿ ಜಾಲ ಸೃಷ್ಟಿಸಿ ಬೃಹತ್ ಮೊತ್ತದ ಹಣ ಲೂಟಿ ಮಾಡಲಾಗಿದೆ. ಇದನ್ನೂ ಓದಿ – ಗೋಬಿ ತಿಂದು ವಾಪಸ್‌ ತೆರಳುವಾಗ ಗೊಂದಿಚಟ್ನಹಳ್ಳಿ ಬಳಿ ದುರ್ಘಟನೆ, ಯುವಕ ಸಾವು, ಆಗಿದ್ದೇನು? ಅಪರಿಚಿತ ವ್ಯಕ್ತಿಗಳು ಒಂದು ಕಂಪನಿಯ ಪ್ರತಿನಿಧಿಗಳಂತೆ ನಟಿಸಿ ಶಿವಮೊಗ್ಗದ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ತಮ್ಮ ಕಂಪನಿಯಲ್ಲಿ … Read more

ಅಡಿಕೆ ಬೆಳೆಗಾರರೆ ಹುಷಾರ್‌, ಶಿವಮೊಗ್ಗದಲ್ಲಿ ಮತ್ತೆ ಶುರು ಅಡಿಕೆ ಖದೀಮರ ಹಾವಳಿ, ಕೇಸ್‌ ದಾಖಲು

Areca-in-gunny-bag-APMC-Shimoga

ಶಿವಮೊಗ್ಗ: ಮನೆ ಮುಂಭಾಗ ಚೀಲದಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಒಣ ಅಡಿಕೆಯನ್ನು (areca nut) ಕಳ್ಳರು ಹೊತ್ತೊಯ್ದಿದ್ದಾರೆ. ಕುಟುಂಬದವರೆಲ್ಲ ಮನೆಯ ಒಳಗೆ ಮಲಗಿದ್ದ ಸಮಯದಲ್ಲೆ ಕೃತ್ಯ ನಡೆದಿದೆ. ಪುರದಾಳು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಪ್ರಶಾಂತ್‌ ಎಂಬುವವರು 3 ಎಕರೆ ತೋಟದಲ್ಲಿ ಬೆಳೆದ ಅಡಿಕೆಯನ್ನು ಕಟಾವು ಮಾಡಿ, ಒಣಗಿಸಿ ಮಾರಾಟ ಮಾಡಲು ಸಿದ್ಧಪಡಿಸಿದ್ದರು. ಒಟ್ಟು 25 ಗೋಣಿ ಚೀಲಗಳಲ್ಲಿ ಒಣ ಅಡಿಕೆಯನ್ನು ತುಂಬಿ ಹನುಮಂತಾಪುರದ ತಮ್ಮ ಮನೆಯ ಮುಂಭಾಗ ಇಟ್ಟಿದ್ದರು. ಜನವರಿ 17ರ ರಾತ್ರಿ ಅಡಿಕೆ … Read more

ಶಿವಮೊಗ್ಗ ಕೆಲವೆಡೆ ಮಳೆ, ಕಡಿಮೆಯಾದ ಚಳಿ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಪ್ರಮಾಣ ಕಡಿಮೆಯಾಗಿದೆ. ಸೋಮವಾರ ರಾತ್ರಿ ವೇಳೆಗೆ ಶಿವಮೊಗ್ಗ ನಗರದ ವಿವಿಧೆಡೆ ಮತ್ತು ತಾಲೂಕಿನ ಕೆಲವೆಡೆ ತುಂತುರು ಮಳೆಯಾದ ವರದಿಯಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ಅಬ್ಬರ ಹೆಚ್ಚಾಗಿದೆ. ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? (Weather) 🌤️ ಶಿವಮೊಗ್ಗ ಜಿಲ್ಲಾ ಹವಾಮಾನ ವರದಿ ದಿನಾಂಕ: 19 ಜನವರಿ 2026 ಶಿವಮೊಗ್ಗ ಗರಿಷ್ಠ31°C ಕನಿಷ್ಠ20°C ಭದ್ರಾವತಿ ಗರಿಷ್ಠ31°C ಕನಿಷ್ಠ20°C ತೀರ್ಥಹಳ್ಳಿ ಗರಿಷ್ಠ29°C ಕನಿಷ್ಠ19°C ಸಾಗರ ಗರಿಷ್ಠ30°C ಕನಿಷ್ಠ19°C ಶಿಕಾರಿಪುರ ಗರಿಷ್ಠ30°C ಕನಿಷ್ಠ19°C ಸೊರಬ ಗರಿಷ್ಠ30°C ಕನಿಷ್ಠ19°C … Read more

ಮಾಚೇನಹಳ್ಳಿಯಲ್ಲಿ ಒನ್‌ ವೇ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ, ಕಾರಣವೇನು?

Dc-Visit-machenahalli-in-Shimoga

ಶಿವಮೊಗ್ಗ: ಮಾಚೇನಹಳ್ಳಿಯ ಶಿಮುಲ್ ಡೇರಿ ಎದುರು ಬಿ.ಹೆಚ್.ರಸ್ತೆಯ ಚತುಷ್ಪಥ ಕಾಮಗಾರಿಯ ವೇಳೆ ಭೂಕುಸಿತದಿಂದ ಸರ್ವಿಸ್ ರಸ್ತೆಗೆ ಹಾನಿಯಾಗಿದೆ. ಅಲ್ಲಿ ವಾಹನ ಸಂಚಾರದ ಒತ್ತಡ ತಡೆಯಲು ಅಲ್ಲಿ ಏಕಮುಖ ಸಂಚಾರಕ್ಕೆ ಜಿಲ್ಲಾಡಳಿತ ಆದೇಶಿಸಿದೆ. (heavy vehicle) ಇದನ್ನು ಓದಿ – ಗೋಬಿ ತಿಂದು ವಾಪಸ್‌ ತೆರಳುವಾಗ ಗೊಂದಿಚಟ್ನಹಳ್ಳಿ ಬಳಿ ದುರ್ಘಟನೆ, ಯುವಕ ಸಾವು, ಆಗಿದ್ದೇನು? ಶಿಮುಲ್ ಡೇರಿ ಎದುರು ಚತುಷ್ಪಥ ರಸ್ತೆ ಕಾಮಗಾರಿ ವೇಳೆ ಆಗಿರುವ ಭೂ ಕುಸಿತವಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ಅವರೊಂದಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ಥಳಕ್ಕೆ … Read more

ಗೋಬಿ ತಿಂದು ವಾಪಸ್‌ ತೆರಳುವಾಗ ಗೊಂದಿಚಟ್ನಹಳ್ಳಿ ಬಳಿ ದುರ್ಘಟನೆ, ಯುವಕ ಸಾವು, ಆಗಿದ್ದೇನು?

ACCIDENT-NEWS-GENERAL-IMAGE.

ಶಿವಮೊಗ್ಗ: ಗೋಬಿ ತಿಂದು ವಾಪಾಸಾಗುವಾಗ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ (bike accident) ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ. ತಾಲೂಕಿನ ಗೊಂದಿಚಟ್ನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ದರ್ಶನ್.ಕೆ (18) ತನ್ನ ಬೈಕ್‌ನಲ್ಲಿ ಸ್ನೇಹಿತ ಪುವರಸ ಎಂಬಾತನನ್ನು ಕೂರಿಸಿಕೊಂಡು ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ ತೆರಳುತ್ತಿದ್ದನು. ಗೊಂದಿಚಟ್ನಹಳ್ಳಿ ಗ್ರಾಮದ ಬಳಿ ಬರುತ್ತಿದ್ದಂತೆ ದರ್ಶನ್ ಚಾಲನೆ ಮಾಡುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ … Read more

ಇವತ್ತು ನವಮಿ, ಭರಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ದಿನ ಭವಿಷ್ಯ, ಪಂಚಾಂಗ: ಇವತ್ತು 2026ರ ಜನವರಿ 27. ಶಿವಮೊಗ್ಗದಲ್ಲಿ ಇವತ್ತು 6.56ಕ್ಕೆ ಸೂರ್ಯೋದಯ. 6.25ಕ್ಕೆ ಸೂರ್ಯಾಸ್ತವಾಗಲಿದೆ. ನವಮಿ. ಭರಣಿ ನಕ್ಷತ್ರದ ದಿನ. ಇವತ್ತು ಮಧ್ವನವಮಿ. (Panchanga) ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 5.16 ರಿಂದ 6.06ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.41 ರಿಂದ 6.56ರವರೆಗೆ ಅಭಿಜಿತ್‌ ಮಧ್ಯಾಹ್ನ 12.18 ರಿಂದ 1.04ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.35 ರಿಂದ 3.21ರವರಗೆ ಗೋಧೂಳಿ ಮುಹೂರ್ತ ಸಂಜೆ 6.23 ರಿಂದ 6.48ರವರೆಗೆ ರಾಹು, ಯಮಗಂಡ, ಗುಳಿಕ ಕಾಲ ರಾಹು … Read more

ಶಿವಮೊಗ್ಗದಲ್ಲಿ ಪಥಸಂಚಲನ ಮುನ್ನಡೆಸಿದ ಮಹಿಳಾ ಐಪಿಎಸ್‌ ಅಧಿಕಾರಿ, ಗಮನ ಸೆಳೆದ ಕನ್ನಡದ ಕಮಾಂಡ್‌

IPS-Officer-Megha-Agarwal-leads-the-Republic-Day-parade-in-Shimoga

ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವದ ಆಕರ್ಷಕ ಪಥಸಂಚಲನದಲ್ಲಿ ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮೇಘ ಅಗರ್ವಾಲ್ ಅವರು ಕವಾಯತು ಮುಖ್ಯ ದಂಡನಾಯಕರಾಗಿ (Parade Commander) ಪಾಲ್ಗೊಂಡಿದ್ದರು. ಶಿಸ್ತುಬದ್ಧವಾಗಿ ಪರೇಡ್ ಮುನ್ನಡೆಸುವ ಮೂಲಕ ಗಮನ ಸೆಳೆದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಅದ್ಧೂರಿ ಗಣರಾಜ್ಯೋತ್ಸವ, ಮಿನಿಸ್ಟರ್‌ ಸಂದೇಶದಲ್ಲಿ ಏನೆಲ್ಲ ಇತ್ತು? ಉತ್ತರ ಪ್ರದೇಶ ಮೂಲದ ಮೇಘ ಅಗರ್ವಾಲ್‌ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 206ನೇ ರ‍್ಯಾಂಕ್‌ ಪಡೆದಿದ್ದಾರೆ. ಕೆಲವು ತಿಂಗಳಿಂದ ಶಿವಮೊಗ್ಗದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನವನ್ನು … Read more