SHIVAMOGGA LIVE NEWS | 16 APRIL 2024
SHIMOGA : ಆಟೋ ಬಾಡಿಗೆ ವಿಚಾರವಾಗಿ ಗಲಾಟೆಯಾಗಿ ಚಾಲಕನೊಬ್ಬ ದೊಣ್ಣೆಯಿಂದ ಮತ್ತೊಬ್ಬ ಚಾಲಕನಿಗೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗದ ನೆಹರೂ ರಸ್ತೆಯ ಬಸ್ ಸ್ಟಾಪ್ ಬಳಿ ಘಟನೆ ಸಂಭವಿಸಿದೆ.
ಬೊಮ್ಮನಕಟ್ಟೆ ನಿವಾಸಿ ಮಹೇಶ ನಾಯ್ಕ್ ಬಸ್ ಸ್ಟಾಪ್ ಬಳಿ ಆಟೋ ನಿಲ್ಲಿಸಿಕೊಂಡಿದ್ದರು. ಈ ಸಂದರ್ಭ ಹಿಂಬದಿಗೆ ಬಂದ ಮತ್ತೊಂದು ಆಟೋದ ಚಾಲಕ, ಬಾಡಿಗೆ ವಿಚಾರವಾಗಿ ಜಗಳವಾಡಿದ್ದಾನೆ. ಅಲ್ಲದೆ ಆಟೋದಲ್ಲಿದ್ದ ದೊಣ್ಣೆಯನ್ನು ತಂದು ಮಹೇಶ್ ನಾಯ್ಕ್ ತಲೆಗೆ ಹೊಡೆದಿದ್ದು, ಪ್ರಜ್ಞೆ ತಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಕೂಡಲೆ ಅಲ್ಲಿದ್ದವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಮಾಂಸ ಮಾರಾಟ ನಿಷೇಧ, ಯಾವ್ಯಾವ ದಿನ?