ಶಿವಮೊಗ್ಗ ಲೈವ್.ಕಾಂ | MANDAGADDE NEWS | 15 ಸೆಪ್ಟೆಂಬರ್ 2021
ಕೆರೆಯೊಂದರ ಸಮೀಪ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಆಗಷ್ಟೆ ಜನಿಸಿದ ಮಗುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಇದೆ.
ಮಂಡಗದ್ದೆ ಸಮೀಪದ ಗುತ್ಯಮ್ಮ ದೇವಸ್ಥಾನದ ಕೆರೆ ಸಮೀಪ ಮಗುವಿನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಮೀನು ಹಿಡಿಯಲು ತೆರಳಿದ್ದಾಗ ಮೃತದೇಹ ಇರುವುದು ಬೆಳಕಿಗೆ ಬಂದಿದೆ.
ಮಗುವನ್ನು ಇಲ್ಲಿ ಬಿಟ್ಟು ಹೋದ ಮೇಲೆ ಮೃತಪಟ್ಟಿದೆಯೋ ಅಥವಾ ಮೃತಪಟ್ಟ ಬಳಿಕ ಇಲ್ಲಿ ಇರಿಸಲಾಯಿತೋ ಎಂಬುದು ತಿಳಿದು ಬಂದಿಲ್ಲ. ಜೆಸಿ ಆಸ್ಪತ್ರೆಯ ಶವಾಗಾರದಲ್ಲಿ ಮಗುವಿನ ಮೃತದೇಹವನ್ನು ಇರಿಸಲಾಗಿದೆ. ಪೋಷಕರ ಪತ್ತೆಗಾಗಿ ಮಾಳೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200