ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 10 ಜುಲೈ 2019
ಶರಾವತಿ ನದಿಗಾಗಿ ಜಿಲ್ಲೆಯಾದ್ಯಂತ ಬಂದ್’ಗೆ ಭದ್ರಾವತಿಯಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತಿವಾಗಿದೆ. ಈ ನಡುವೆ ವಿಐಎಸ್ಎಲ್ ಉಳಿವಿಗಾಗಿ, ಇಡೀ ಜಿಲ್ಲೆ ಭದ್ರಾವತಿಯನ್ನು ಬೆಂಬಲಿಬಸಬೇಕಿದೆ ಎಂಬ ಬೇಡಿಕೆ ಮೊಳಕೆಯೊಡೆದಿದೆ.
ಶಿವಮೊಗ್ಗ ಜಿಲ್ಲೆ ಬಂದ್’ಗೆ ಭದ್ರಾವತಿಯಲ್ಲಿ ಬೆಂಬಲ ವ್ಯಕ್ತವಾಯಿತು. ಅಂಗಡಿಗಳು ಬಂದ್ ಆಗಿದ್ದವು. ಶಾಲೆಗಳಿಗೆ ರಜೆ ಘೋಷಸಿಲಾಗಿತ್ತು. ಇನ್ನು, ಶರಾವತಿ ನದಿಗಾಗಿ ಹಲವು ಸಂಘಟನೆಗಳು ಭದ್ರಾವತಿಯ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದವು.
ಈ ನಡುವೆ, ಶರಾವತಿ ನದಿಗಾಗಿ ನಡೆಯುತ್ತಿರುವ ಹೋರಾಟದ ಮಾದರಿಯಲ್ಲೇ ವಿಐಎಸ್ಎಲ್ ಉಳಿವಾಗಿ ಹೋರಾಟದ ಅಗತ್ಯವಿದೆ ಎಂಬ ಅಭಿಪ್ರಾಯ ಮೂಡಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟ್’ಗಳು ಪ್ರಕಟಗೊಳ್ಳುತ್ತಿವೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]