ಶಿವಮೊಗ್ಗ ಲೈವ್.ಕಾಂ | SASVEHALLI NEWS | 1 MAY 2021
ಭದ್ರಾ ನಾಲೆಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಚನ್ನಮುಂಬಾಪುರ ಸಮೀಪ ಭದ್ರಾ ನಾಲೆಯಲ್ಲಿ ಘಟನೆ ಸಂಭವಿಸಿದೆ.
ಸಂಜಯ್ (16) ಮೃತ ಬಾಲಕ. ಈತ ಹೊಸಹಳ್ಳಿಯ 2ನೇ ಕ್ಯಾಂಪ್ನ ಮುರುಗೇಶ್ ಅವರ ಮಗ. ಸಂಜಯ್ ಮೂಗನಾಗಿದ್ದು, ಭದ್ರಾವತಿಯ ತರಂಗ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ.
ಕರ್ಫ್ಯೂ ಮತ್ತು ಕರೋನ ಹರಡುವ ಭೀತಿ ಹಿನ್ನೆಲೆ ಶಾಲೆಗೆ ರಜೆ ನೀಡಲಾಗಿತ್ತು. ಹಾಗಾಗಿ ಸಂಜಯ್ ಮನೆಗೆ ಬಂದಿದ್ದ.
ಶುಕ್ರವಾರ ಗೆಳೆಯರೊಡನೆ ಭದ್ರಾ ನಾಲೆಯಲ್ಲಿ ಈಜಲು ತೆರಳಿದ್ದ. ಈ ವೇಳೆ ದುರ್ಘಟನೆ ಸಂಭವಿಸಿದೆ. ಹುಣಸಘಟ್ಟದ ಸಮೀಪ ಸಂಜಯ್ನ ಮೃತದೇಹ ಪತ್ತೆಯಾಗಿದೆ. ಸಾಸ್ವೆಹಳ್ಳಿ ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]