BREAKING NEWS | ಕುವೆಂಪು ವಿವಿ ಘಟಿಕೋತ್ಸವಕ್ಕೂ ತಟ್ಟಿದ ಕರೋನ ಬಿಸಿ

Kuvempu-University

ಶಿವಮೊಗ್ಗ ಲೈವ್.ಕಾಂ | SHANKARAGHATTA | 13 ಮಾರ್ಚ್ 2020 ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲದಯದ ಘಟಿಕೋತ್ಸವಕ್ಕು ಕರೋನ ಎಫೆಕ್ಟ್ ತಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಘಟಿಕೋತ್ಸವವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ 28ರಂದು ಕುವೆಂಪು ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವ ನಿಗದಿಯಾಗಿತ್ತು. ಆದರೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಘಟಿಕೋತ್ಸವ ಮುಂದೂಡಲಾಗಿದೆ. ಕುವೆಂಪು ವಿವಿಯಲ್ಲಿ ನಡೆಯಬೇಕಿದ್ದ ವಿಚಾರ ಸಂಕಿರಣ, ಸಮಾವೇಶಗಳನ್ನು ಕೂಡ ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ ಎಂದು ಕುಲಪತಿ … Read more

ಶಿವಮೊಗ್ಗದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಎಥ್ನಿಕ್ ಡೇ, ಸಾಂಪ್ರದಾಯಿಕ ಉಡುಪು ತೊಟ್ಟು ವಿದ್ಯಾರ್ಥಿಗಳ ಸಂಭ್ರಮ

ಶಿವಮೊಗ್ಗ ಲೈವ್.ಕಾಂ | SHIMOGA | 18 ಫೆಬ್ರವರಿ 2020 ಶಿವಮೊಗ್ಗ ಬಾಪೂಜಿನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಥ್ನಿಕ್ ಡೇ ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಉಡುಪು ತೊಟ್ಟು ಬಂದು ವಿದ್ಯಾರ್ಥಿಗಳು ಸಂಭ್ರಮಿಸಿದರು. ಬಹುತೇಕ ವಿದ್ಯಾರ್ಥಿನಿಯರು ಸೀರೆ ತೊಟ್ಟು ಬಂದಿದ್ದರು. ಇತ್ತ ವಿದ್ಯಾರ್ಥಿಗಳು ಬಿಳಿ ಶರ್ಟು, ಪಂಚೆ ತೊಟ್ಟು ಸಂಭ್ರಮಿಸಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳ ಸೆಲ್ಫಿ ಸೆಷನ್ ನಡೆಯಿತು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | … Read more

ಕಾಪಿ ಹೊಡೆಯಲು ಅವಕಾಶ ಕೊಟ್ಟ ಪರೀಕ್ಷಾ ಕೇಂದ್ರಗಳ ಪ್ರವೇಶಾತಿ ರದ್ದು, ಯಾವ್ಯಾವ ಕೇಂದ್ರಗಳು ರದ್ದಾಗಲಿದೆ ಗೊತ್ತಾ?

Kuvempu-University

ಶಿವಮೊಗ್ಗ ಲೈವ್.ಕಾಂ | SHIMOGA | 11 ಫೆಬ್ರವರಿ 2020 ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ನಿಲ್ಲಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕುವೆಂಪು ವಿವಿ ಮಾನ್ಯತೆ ಪಡೆದ ಸ್ಟೂಡೆಂಟ್ ಡೆವಲಪ್‌ಮೆಂಟ್ ಟ್ರಸ್ಟ್ ಮತ್ತು ಕೆಸಿಇ ಫೌಂಡೇಷನ್ ಫೆಬ್ರವರಿ 6ರಂದು ಹುಬ್ಬಳ್ಳಿಯ ಮಹಾರಾಣಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸುತ್ತಿದ್ದ ಪರೀಕ್ಷೆಯಲ್ಲಿ ಮತ್ತು … Read more

ವಿಮಾನ ನಿಲ್ದಾಣದಿಂದ ಕುವೆಂಪು ವಿವಿವರೆಗಿನ ರಸ್ತೆ ಉನ್ನತೀಕರಣ, ಶಿವಮೊಗ್ಗ ಸಿಟಿ – ತರೀಕೆರೆ ಮಧ್ಯೆ ಚತುಷ್ಪಥ ರೋಡ್ | ಸಂಸದ ರಾಘವೇಂದ್ರ

Kuvempu-University

ಶಿವಮೊಗ್ಗ ಲೈವ್.ಕಾಂ | SHANKARAGHATTA | 28 ಡಿಸೆಂಬರ್ 2019 ಶಿವಮೊಗ್ಗ ಸಿಟಿ ಮತ್ತು ತರೀಕೆರೆ ನಡುವೆ ಚತುಷ್ಪತ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್’ನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಿದ ಸಂಸದ ರಾಘವೇಂದ್ರ, ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ತ್ವರಿತಗೊಳಿಸಲಾಗುತ್ತಿದೆ. ಇದಕ್ಕಾಗಿ 150 ಕೋಟಿ ರೂ. ಮಂಜೂರು ಮಾಡಲಾಗಿದೆ. ಏರ್’ಪೋರ್ಟ್ ಮತ್ತು ಕುವೆಂಪು ವಿಶ್ವವಿದ್ಯಾಲಯಕ್ಕೆ ಸಂಪರ್ಕ … Read more

13 ವರ್ಷದ ಬಳಿಕ ಕುವೆಂಪು ವಿವಿಯಲ್ಲಿ ಖೋ ಖೋ ಕದನ, 74 ಟೀಂಗಳ ನಡುವೆ ಸೆಣೆಸಾಟ, ಎಲ್ಲೆಲ್ಲಿಂದ ಬರ್ತಿವೆ ಗೊತ್ತಾ ತಂಡಗಳು?

Kuvempu-University

ಶಿವಮೊಗ್ಗ ಲೈವ್.ಕಾಂ | SHIMOGA | 21 ಡಿಸೆಂಬರ್ 2019 ವಿಶ್ವವಿದ್ಯಾನಿಲಯಗಳ ಮಟ್ಟದ ಖೋ ಖೋ ಕದನಕ್ಕೆ ಸಾಕ್ಷಿಯಾಗಲು ಕುವೆಂಪು ವಿಶ್ವವಿದ್ಯಾನಿಲಯ ಸಜ್ಜಾಗುತ್ತಿದೆ. ಡಿಸೆಂಬರ್ 23ರಿಂದ ದಕ್ಷಿಣ ವಲಯ ವಿಶ್ವವಿದ್ಯಾಲಯಗಳ ಮಟ್ಟದ ಪಂದ್ಯಾವಳಿ ನಡೆಯಲಿದೆ. 74 ವಿವಿಗಳ ಖೋ ಖೋ ಟೀಂಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ದಕ್ಷಿಣ ವಲಯ ವಿಶ್ವವಿದ್ಯಾಲಯಗಳ ಖೋ ಖೋ ಪಂದ್ಯಾವಳಲ್ಲಿ ಕರ್ನಾಟಕದ 23, ಆಂಧ್ರಪ್ರದೇಶದ 17, ತೆಲಂಗಾಣದ 9, ಕೇರಳದ 4, ತಮಿಳುನಾಡಿನ … Read more

‘ವಿದ್ಯಾರ್ಥಿಗಳೇ ಆತಂಕ ಬೇಡ, ಇನ್ನೈದು ವರ್ಷಕ್ಕೆ ಕುವೆಂಪು ವಿವಿ ದೂರ ಶಿಕ್ಷಣಕ್ಕಿದೆ ಸರ್ಕಾರದ ಮಾನ್ಯತೆ’

Kuvempu University General Image 1

ಶಿವಮೊಗ್ಗ ಲೈವ್.ಕಾಂ | SHANKARAGHATTA | 18 ಡಿಸೆಂಬರ್ 2019 ಕುವೆಂಪು ವಿಶ್ವವಿದ್ಯಾಲಯ ನಡೆಸುತ್ತಿರುವ ದೂರಶಿಕ್ಷಣ ಕೋರ್ಸ್’ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಗೆ ವರ್ಗಾಯಿಸುವ ಕುರಿತು, ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಆತಂಕಗೊಳ್ಳುವ ಅವಶ್ಯಕತೆಯಿಲ್ಲ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಸ್ಪಷ್ಟಪಡಿಸಿದ್ದಾರೆ.   ಮಂಗಳವಾರ ನಡೆದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ರಾಜ್ಯದ ವಿವಿಧ ವಿವಿಗಳಲ್ಲಿ ನಡೆಯುತ್ತಿರುವ ದೂರಶಿಕ್ಷಣ ಕೋರ್ಸ್’ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ … Read more

SHANKARAGHATTA | ಕುವೆಂಪು ವಿವಿಗೆ ಆರು ಹೊಸ ಸಿಂಡಿಕೇಟ್ ಸದಸ್ಯರು, ಯಾರನೆಲ್ಲ ನಾಮನಿರ್ದೇಶನ ಮಾಡಲಾಗಿದೆ ಗೊತ್ತಾ?

Kuvempu-University

ಶಿವಮೊಗ್ಗ ಲೈವ್.ಕಾಂ | SHIMOGA | 11 ಡಿಸೆಂಬರ್ 2019 ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಆರು ಮಂದಿ ನೂತನ ಸಿಂಡಿಕೇಟ್ ಸದಸ್ಯರನ್ನು ರಾಜ್ಯ ಸರ್ಕಾರ ನಾನಿರ್ದೆಶನ ಮಾಡಿದೆ. ಈ ಸಂಬಂಧ ಆದೇಶವನ್ನು ಹೊರಡಿಸಲಾಗಿದೆ. ಯಾರೆಲ್ಲ ನಾಮನಿರ್ದೇಶನವಾಗಿದ್ದಾರೆ? ಹೆಚ್.ಬಿ.ರಮೇಶ್ ಬಾಬು | ವಿವಿಧ ಸಾಮಾಜಿಕ ಚಟುವಟಿಕೆವಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್’ನ ಜಿಲ್ಲಾಧ್ಯಕ್ಷರಾಗಿದ್ದಾರೆ. ವಿದ್ಯಾರ್ಹತೆ : ಎಂ.ಎ ಬಳ್ಳೆಕರೆ ಸಂತೋಷ್ | ಶಿವಮೊಗ್ಗದಲ್ಲಿ ವಿವಿಧ ಸಾಮಾಜಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಮೊಗ್ಗ ಬಿಜೆಪಿ ನಗರ ಕಾರ್ಯದರ್ಶಿ, ಯಡಿಯೂರಪ್ಪ ಅಭಿಮಾನಿ ಬಳಗ ರಾಜ್ಯಾಧ್ಯಕ್ಷ. … Read more

SHANKARAGHATTA | ‘ಗಾಂಧಿ, ಅಂಬೇಡ್ಕರ್ ಇಬ್ಬರಲ್ಲಿ ಯಾರು ಬೇಕು ಅನ್ನುವ ಚರ್ಚೆಗಳೇ ಬಾಲಿಶ’

ಶಿವಮೊಗ್ಗ ಲೈವ್.ಕಾಂ | SHANKARAGHATTA | 27 ನವೆಂಬರ್ 2019 ಗಾಂಧೀ ಮತ್ತು ಅಂಬೇಡರ್ ನಡುವೆ ಭಾರತಕ್ಕೆ ಆಯ್ಕೆಗಳಿಲ್ಲ. ಅವರಿಬ್ಬರೂ ದೇಶಕ್ಕೆ ಅತ್ಯಗತ್ಯ ಎಂದು ಖ್ಯಾತ ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾ ಅಭಿಪ್ರಾಯಟ್ಟರು. ಕುವೆಂಪು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯ ಪ್ರೊ. ಎಸ್.ಪಿ.ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ದಿವಂಗತ ಡಾ. ಶಾಂತಿನಾಥ ದೇಸಾಯಿ ದತ್ತಿ ಉಪನ್ಯಾಸದಲ್ಲಿ ಡಾ. ಗುಹಾ ಅವರು ‘ಸಂವಹನಕಾರರಾಗಿ ಗಾಂಧಿ’ ವಿಷಯ ಕುರಿತು ಮಾತನಾಡಿದರು. ಮಹಾತ್ಮ ಗಾಂಧೀಜಿ ಮತ್ತು ಡಾ. ಬಾಬಾಸಾಹೇಬ್ … Read more

ಟಗರು ಹೀರೋಯಿನ್ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು, ಭರ್ಜರಿ ಸ್ಟೆಪ್ಸ್ ಹಾಕಿದ ಮಾನ್ವಿತಾ

ಶಿವಮೊಗ್ಗ ಲೈವ್.ಕಾಂ | SHANKARAGHATTA | 4 ಅಕ್ಟೋಬರ್ 2019 ಟಗರು ಹೀರೋಯಿನ್ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು. ಗೌರವ ಧನವನ್ನು ನೆರೆ ಸಂತ್ರಸ್ತರಿಗೆ ನೀಡಿದ ನಟಿ. ಭರ್ಜರಿ ಸ್ಟೆಪ್ಸ್ ಹಾಕಿ ವಿದ್ಯಾರ್ಥಿಗಳನ್ನು ರಂಜಿಸಿದ ಮಾನ್ಯತಾ. ಕುವೆಂಪು ವಿಶ್ವವಿದ್ಯಾಲದಯ ಮೂರು ದಿನದ ಸಹ್ಯಾದ್ರಿ ಉತ್ಸವಕ್ಕೆ ನಟಿ ಮಾನ್ವಿತಾ ಹರೀಶ್ ಚಾಲನೆ ನೀಡಿದ್ದಾರೆ. ಜ್ಞಾನ ಸಹ್ಯಾದ್ರಿ ಕ್ಯಾಂಪಸ್’ನಲ್ಲಿರುವ ಕುವೆಂಪು ಪ್ರತಿಮೆಗೆ ಹಾರ ಹಾಕಿ ಗೌರವ ಸಲ್ಲಿಸಿದರು. ಬಳಿಕ ಮರವಣಿಗೆಗೆ ಚಾಲನೆ ನೀಡಿದರು. ಸೆಲ್ಫಿ.. ಸೆಲ್ಫಿ.. ಸೆಲ್ಫಿ.. ಉದ್ಘಾಟನೆಗೆ ನಟಿ … Read more

ಮೂರು ದಿನದ ಅದ್ಧೂರಿ ಸಹ್ಯಾದ್ರಿ ಉತ್ಸವಕ್ಕೆ ಟಗರು ಹೀರೋಯಿನ್ ಚಾಲನೆ, ಹೇಗಿತ್ತು ಗೊತ್ತಾ ಮೆರವಣಿಗೆಯ ವೈಭವ?

ಶಿವಮೊಗ್ಗ ಲೈವ್.ಕಾಂ | SHIMOGA | 4 ಅಕ್ಟೋಬರ್ 2019 ಕುವೆಂಪು ವಿಶ್ವವಿದ್ಯಾಲಯದ ಮೂರು ದಿನದ ಸಹ್ಯಾದ್ರಿ ಉತ್ಸವಕ್ಕೆ ಟಗರು ಸಿನಿಮಾ ಹೀರೋಯಿನ್ ಮಾನ್ವಿತಾ ಹರೀಶ್ ಉದ್ಘಾಟನೆ ಮಾಡಿದರು. ಬಳಿಕ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಶಂಕರಘಟ್ಟ ಮುಖ್ಯರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಕಲಾತಂಡಗಳು ಮೆರವಣಿಗೆ ನಡೆಸಿದವು. ಮೆರವಣಿಗೆ ಹೇಗಿತ್ತು? ವಿದ್ಯಾರ್ಥಿಗಳು ಏನೆಲ್ಲ ಕಲೆ ಪ್ರದರ್ಶಿಸಿದರು? ಫೋಟೊ ಆಲ್ಬಂ ಇಲ್ಲಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 ಈ … Read more