ಭದ್ರಾವತಿ ಉಪ ವಿಭಾಗಕ್ಕೆ ನೂತನ ಎಎಸ್ಪಿ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 19 ನವೆಂಬರ್ 2021 ಭದ್ರಾವತಿ ಉಪ ವಿಭಾಗಕ್ಕೆ ನೂತನ ಎಎಸ್ಪಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿತೇಂದ್ರಕುಮಾರ್ ಅವರು ಭದ್ರಾವತಿ ಉಪ ವಿಭಾಗದ ನೂತನ ಎಎಸ್’ಪಿಯಾಗಿದ್ದಾರೆ. ಎಎಸ್’ಪಿಯಾಗಿದ್ದ ಸಾಹಿಲ್ ಬಾಗ್ಲಾ ಅವರನ್ನು ಹುಬ್ಬಳ್ಳಿ – ಧಾರವಾಡದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಜಿತೇಂದ್ರ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ಜಿತೇಂದ್ರ ಕುಮಾರ್ ಅವರು 2019ರ ಬ್ಯಾಚ್’ನ ಐಪಿಎಸ್ ಅಧಿಕಾರಿಯಾಗಿದ್ದಾರೆ.