ಶಿಕಾರಿಪುರದ ಜೀವನಾಡಿ ಅಂಜನಾಪುರ ಜಲಾಶಯದ ನೀರಿನ ಮಟ್ಟ ಹೆಚ್ಚಳ

180621 Anjanapura Dam Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 18 JUNE 2021 ಶಿಕಾರಿಪುರ ತಾಲೂಕಿನ ಜೀವನಾಡಿ ಅಂಜನಾಪುರ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗಿದೆ. ಈಗ ಜಲಾಶಯದ ನೀರಿನ ಮಟ್ಟ 11 ಅಡಿಗೆ ಏರಿಕೆಯಾಗಿದೆ. ಅಂಜನಾಪುರ ಜಲಾಶಯಕ್ಕೆ 650 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಬಾರಿ ಮಳೆ ಶುರುವಾದಾಗಿನಿಂದ ಎರಡೂವರೆ ಅಡಿಯಷ್ಟು ನೀರು ಬಂದಿದೆ. ಇದೆ ರೀತಿ ಮಳೆ ಮುಂದುವರೆದರೆ ಜಲಾಶಯದ ಒಳ ಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಕಳೆದ ವರ್ಷ ಇದೆ ಹೊತ್ತಿನ 9 ಅಡಿಯಷ್ಟು … Read more

ನಿರಂತರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ, ಇನ್ನೆರಡು ದಿನ ಮಳೆ ಸುರಿದರೆ ಬಿತ್ತಿದ ಬೀಜ ಕೊಳೆಯುವ ಭಯ

Talaguppa Graphics

ಶಿವಮೊಗ್ಗ ಲೈವ್.ಕಾಂ | TALAGUPPA NEWS | 18 JUNE 2021 ತಾಳಗುಪ್ಪ ಹೋಬಳಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭತ್ತದ ಗದ್ದೆಗಳು ಜಲಾವೃತವಾಗಿವೆ. ರಾಷ್ಟ್ರೀಯ ಹೆದ್ದಾರಿ 206 ಇಕ್ಕೆಲೆಗಳಲ್ಲಿ ಎಲ್ಲ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ. ಗುಂಡಿಬೈಲು ಗದ್ದೆ ಬಯಲು ನೀರಲ್ಲಿ ಮುಳುಗಿದ್ದು ಇನ್ನೆರಡು ದಿನ ಮಳೆ ಮುಂದುವರಿದರೆ ಬಿತ್ತಿದ ಬೀಜ ಕೊಳೆಯುವ ಸಾಧ್ಯತೆ ಇದೆ. ಮಳೆಗಾಲ ಪೂರ್ವದಲ್ಲಿ ಚರಂಡಿ ಹೂಳೆತ್ತಿಸುವ ಕಾಮಗಾರಿ ನಡೆಯದೆ, ಬೆಳ್ಳ, ರಸ್ತೆ, ಅಚಾರ್ಯ ಹೋಟೆಲ್ ಪಕ್ಕದ … Read more

ಮಾಜಿ ಶಾಸಕ ಅಪ್ಪಾಜಿ ಪ್ರತಿಮೆಯ ಫೋಟೊಗಳು ವೈರಲ್, ಎಲ್ಲಿ, ಯಾವಾಗ ಸ್ಥಾಪಿಸಲಾಗುತ್ತದೆ?

180621 Appaji Gowda Pratime At Bhadaravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 18 JUNE 2021 ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಅವರ ಪ್ರತಿಮೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪಾಜಿ ಅವರ ಮೊದಲ ಪುಣ್ಯ ಸ್ಮರಣೆಯಂದು ಈ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಅಪ್ಪಾಜಿ ಅವರ ನೈಜತೆಯು ಪ್ರತಿಮೆಯಲ್ಲಿ ಎದ್ದು ಕಾಣುತ್ತಿದೆ. ಗೋಣಿಬೀಡಿನಲ್ಲಿ ಇರುವ ಅವರ ತೋಟದಲ್ಲಿ ಸಮಾಧಿ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಲು ಕುಟುಂಬದವರು ನಿರ್ಧರಿಸಿದ್ದಾರೆ. ಇದನ್ನೂ ಓದಿ | ಮಾಜಿ ಶಾಸಕ ಅಪ್ಪಾಜಿಗೌಡರ ಕುರಿತು ಈ 15 ವಿಚಾರಗಳು ನಿಮಗೆ ಗೊತ್ತಿದೆಯಾ? … Read more

ಕರ್ತವ್ಯನಿರತ ಪೊಲೀಸ್ ಕಾನ್​​ಸ್ಟೇಬಲ್​ಗೆ ಅವಾಚ್ಯವಾಗಿ ನಿಂದನೆ, ಹಲ್ಲೆ

KUMSI-NEWS

ಶಿವಮೊಗ್ಗ ಲೈವ್.ಕಾಂ | KUMSI NEWS | 18 JUNE 2021 ಕರ್ತವ್ಯ ನಿರತ ಪೊಲೀಸ್ ಕಾನ್‍ಸ್ಟೇಬಲ್‍ಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾರನಹಳ್ಳಿ ಪೆಟ್ರೋಲ್ ಬಂಕ್ ಮುಂಭಾಗ ಘಟನೆ ನಡೆದಿದೆ. ಕುಂಸಿ ಪೊಲೀಸ್ ಠಾಣೆ ಕಾನ್‍ಸ್ಟೇಬಲ್ ಪ್ರವೀಣ್ ಮೇಲೆ ಹಲ್ಲೆ ಮಾಡಲಾಗಿದೆ. ಮಂಜುನಾಥ ಎಂಬಾತ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹೇಗಾಯ್ತು ಘಟನೆ? ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಹಾರನಹಳ್ಳಿ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರು … Read more

ಕಾಡು ಪ್ರಾಣಿಗಳ ಭಯ, ಮಳೆ, ಗಾಳಿಯ ರಭಸ, ಆನ್ ಲೈನ್ ಕ್ಲಾಸ್​​​ಗಾಗಿ ದಿನ ಪ್ರಾಣ ಪಣಕ್ಕಿಡಬೇಕು ಮಕ್ಕಳು

170621 Online Class Sagara Tumari 1

ಶಿವಮೊಗ್ಗ ಲೈವ್.ಕಾಂ | SAGARA / THIRTHAHALLI / HOSNAGARA NEWS | 17 JUNE 2021 ಆನ್‍ಲೈನ್‍ ಕ್ಲಾಸ್‍ನಲ್ಲಿ ಪಾಲ್ಗೊಳ್ಳಲು ಇಲ್ಲಿಯ ಮಕ್ಕಳು ಪ್ರತಿದಿನ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಕ್ಲಾಸ್‍ಗಾಗಿ ಈ ವಿದ್ಯಾರ್ಥಿಗಳು ನಿತ್ಯ ಟ್ರೆಕಿಂಗ್‍ ಮಾಡಬೇಕಿದೆ. ಕಾಡು ಪ್ರಾಣಿಗಳ ಭಯ, ಮಳೆ, ಗಾಳಿ ಜೊತೆಯು ಸೆಣೆಸಬೇಕಿದೆ. ಇದು ಶರಾವತಿ ಹಿನ್ನೀರಿನ ತುಮರಿ, ಬ್ಯಾಕೋಡು ಸೇರಿದಂತೆ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳ ನಿತ್ಯದ ಕಷ್ಟ.  ಆನ್‍ಲೈನ್ ಕ್ಲಾಸ್‍ಗಾಗಿ ದಿನ ಹರಸಾಹಸ ಮಾಡಬೇಕಿದೆ. ಇಷ್ಟೆಲ್ಲ ಕಷ್ಟಪಟ್ಟರು ಸಿಗುವುದು 2ಜಿ … Read more

ಮಧ್ಯಾಹ್ನ 1 ಗಂಟೆಯಿಂದ ತುಂಗಾ ಡ್ಯಾಂನ ಹೊರಹರಿವು ಮತ್ತಷ್ಟು ಏರಿಕೆ

140621 Tunga Dam Water Outflow 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 JUNE 2021 ಒಳ ಹರಿವು ಹೆಚ್ಚಳವಾದಂತೆ ತುಂಗಾ ಜಲಾಶಯದಿಂದ ಹೊಳೆಗೆ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಧ್ಯಾಹ್ನ 1 ಗಂಟೆಯಿಂದ 33,700 ಕ್ಯೂಸೆಕ್ ನೀರನ್ನು ತುಂಗಾ ಜಲಾಶಯದಿಂದ ಹೊರಗೆ ಬಡಲಾಗುತ್ತಿದೆ. ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಇನ್ನಷ್ಟು ನೀರನ್ನು ಹೊರಗೆ ಬಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಬೆಳಗ್ಗೆ 8 ಗಂಟೆಯಿಂದ 21,500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿತ್ತು. ಆದರೆ ಒಳ ಹರಿವು ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ ಹೊರ ಹರಿವು ಪ್ರಮಾಣ … Read more

ಸಾಗರದಲ್ಲಿ ಶ್ರೀಗಂಧ ಮರ ಕಟಾವು ಮಾಡಲು ಯತ್ನಿಸಿದ ಕಳ್ಳರು, ವಿಡಿಯೋ ವೈರಲ್

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 17 JUNE 2021 ಶ್ರೀಗಂಧ ಮರವನ್ನು ಕಡಿದು ಸಾಗಿಸಲು ಕಳ್ಳರು ಯತ್ನಿಸಿದ್ದಾರೆ. ಆದರೆ ಮನೆಯವರು ಮತ್ತು ಸ್ಥಳೀಯರು ಕೂಗಿ ಬೆದರಿಸಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಗರದ ವಿಜಯನಗರ ಬಡಾವಣೆಯ ಸಮೀಪ ಜಂಬಗಾರು ಹಿರಿಯಣ್ಣಯ್ಯ ಅವರ ಭೂಮಿಯಲ್ಲಿ ಶ್ರೀಗಂಧದ ಮರವಿದೆ. ಇದನ್ನು ಕಟಾವು ಮಾಡಿ ಕದ್ದೊಯ್ಯಲು ಕಳ್ಳರು ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಕಳ್ಳರ ಕೃತ್ಯ ಗಮನಿಸಿದ ಸ್ಥಳೀಯರು ಜೋರಾಗಿ ಕೂಗಿದ್ದಾರೆ. ಅಲ್ಲದೆ ಕಳ್ಳರನ್ನು ಬೆದರಿಸಿದ್ದಾರೆ. ಹಾಗಾಗಿ ಕೃತ್ಯವನ್ನು … Read more

ಹೊಸನಗರದಲ್ಲಿ ವಾಡಿಕೆಗಿಂತಲೂ ಭಾರಿ ಮಳೆ, ಕಳೆದ 24 ಗಂಟೆಯಲ್ಲಿ ಎಷ್ಟು ಮಳೆ ಸುರಿದಿದೆ?

rain in shimoga

ಶಿವಮೊಗ್ಗ ಲೈವ್.ಕಾಂ | HOSANAGARA NEWS | 16 JUNE 2021 ಹೊಸನಗರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಕ್ಷಣಹೊತ್ತು ಬಿಡುವು ಕೊಡದೆ ಮುಂಗಾರು ಆರ್ಭಟಿಸುತ್ತಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕಿನಾದ್ಯಂತ 320.8 ಮಿ.ಮೀ ಮಳೆಯಾಗಿದೆ. ಜೂನ್ ತಿಂಗಳ ವಾಡಿಕೆ ಮಳೆ 680.10 ಮಿ.ಮೀ. ಆದರೆ ತಿಂಗಳ ಮೊದಲರ್ಧದಲ್ಲೇ ತಾಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ಈವರೆಗೂ 1036.7 ಮಿ.ಮೀ ಮಳೆಯಾಗಿದೆ. ಮಾಣಿ ವ್ಯಾಪ್ತಿಯಲ್ಲಿ 106 ಮಿ.ಮೀ, ಯಡೂರಿನಲ್ಲಿ 125 … Read more

ಆಗುಂಬೆ ಸುತ್ತಮುತ್ತ ಮುಂಗಾರು ಅಬ್ಬರ, ಮನೆ ಕುಸಿತ

170621 Rain At Agumbe Thirthahalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 17 JUNE 2021 ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಆಗುಂಬೆ ಸುತ್ತಮುತ್ತು ಮಳೆ ಬಿರುಸಾಗಿದೆ. ಇದರಿಂದಾಗಿ ಮನೆ ಕುಸಿದಿದೆ. ಜಮೀನುಗಳು ಜಲಾವೃತವಾಗಿದೆ. ಮೇಗರವಳ್ಳಿಯ ಮಾನಪ್ಪ ಗೌಡ  ಎಂಬುವವರ ಮನೆ ಕುಸಿದಿದೆ ಎಂದು ತಿಳಿದು ಬಂದಿದೆ. ತಾಲೂಕಿನ ವಿವಿಧೆಡೆ ಜಮೀನನಲ್ಲಿ ನೀರು ನಿಂತಿದೆ. ಆಗುಂಬೆಯಲ್ಲಿ 200 ಮಿ.ಮೀ ಮಳೆಯಾಗಿದೆ, ಹೊನ್ನೆತಾಳುವಿನಲ್ಲಿ 140.50 ಮಿ.ಮೀ ಮಳೆಯಾಗಿದೆ. ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ … Read more

ಜಮೀನಿನಲ್ಲಿ ವಿದ್ಯುತ್ ಶಾಕ್, ಸಹೋದರರಿಬ್ಬರು ಸ್ಥಳದಲ್ಲೆ ಸಾವು

SHIKARIPURA-TALUK-NEWS-1.jpg

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 17 JUNE 2021 ವಿದ್ಯುತ್ ಶಾಕ್‍ಗೆ ಸಹೋದರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಜಮೀನಿಗೆ ಹೋದಾಗ ಘಟನೆ ಸಂಭವಿಸಿದೆ. ಶಿಕಾರಿಪುರ ತಾಲೂಕು ಹಾರೋಗೊಪ್ಪದ ಬಿ.ಕ್ಯಾಂಪ್‍ನಲ್ಲಿ ಘಟನೆ ಸಂಭವಿಸಿದೆ. ಇಲ್ಲಿಯ ನಿವಾಸಿಗಳಾದ ಕುಮಾರ್ ನಾಯ್ಕ್ (35) ಮತ್ತು ಶಂಕರ ನಾಯ್ಕ್ (35) ಮೃತ ದುರ್ದೈವಿಗಳು. ಸಹೋದರರು ಜಮೀನಿಗೆ ಹೋದಾಗ ಬೋರ್‍ವೆಲ್‍ಗೆ ಅಳವಡಿಸಿದ್ದ ವೈರ್‍ ಕೆಳಗೆ ಬಿದ್ದಿತ್ತು. ಇದನ್ನು ಸರಿಪಡಿಸಲು ಮುಂದಾದಾಗ ವಿದ್ಯುತ್ ಶಾಕ್ ತಗುಲಿದೆ. ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ … Read more