ಸಿಗಂದೂರು ಸೇತುವೆ ವೈಭವ ಕಣ್ತುಂಬಿಕೊಂಡ ಕನ್ನಡದ ನಟ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಕಟ

Kannada-Actor-Sharan-visits-sigandur-temple-and-bridge.

ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ಶರಣ್‌, ಲಾಂಚ್‌ನಲ್ಲಿ ತೆರಳುವಾಗ ತೂಗು ಸೇತುವೆ ಮುಂಭಾಗ ವಿಡಿಯೋ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ » ಸಿಗಂದೂರು ಸೇತುವೆ, ಮತ್ತೊಂದು ಮಹತ್ವದ ಬೆಳವಣಿಗೆ, ಫೋಟೊ ಹಂಚಿಕೊಂಡ ಸಂಸದ ರಾಘವೇಂದ್ರ ಅಂಬರಗೋಡ್ಲು – ಕಳಸವಳ್ಳಿ ಮಧ್ಯೆ ತೂಗು ಸೇತುವೆ ನಿರ್ಮಾಣವಾಗುತ್ತಿದೆ. ಸೇತುವೆ (Bridge) ಉದ್ಘಾಟನೆ ನಂತರ ಇಲ್ಲಿನ ಲಾಂಚ್‌ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ … Read more

ಸಾಗರದ ಪ್ರತಿಷ್ಠಿತ ಎಂ.ಡಿ.ಎಫ್‌ಗೆ ನೂತನ ಅಧ್ಯಕ್ಷರ ಆಯ್ಕೆ

B-R-Jayanth-is-the-new-president-of-MDF

ಸಾಗರ : ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ (ಎಂ.ಡಿ.ಎಫ್‌) ನೂತನ ಅಧ್ಯಕ್ಷರಾಗಿ (President) ಬಿ.ಆರ್.ಜಯಂತ್‌ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಎಂ.ಡಿ.ಎಫ್‌ನ 59ನೇ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಎಲ್‌.ಬಿ ಮತ್ತು ಎಸ್‌.ಬಿ.ಎಸ್‌ ಕಾಲೇಜು ಆವರಣದ ಕಂಚಿಕೈ ದೇವಪ್ಪ ಸಭಾಂಗಣದಲ್ಲಿ ಮಹಾಸಭೆ ನಡೆಯಿತು. ಎಂ.ಹರನಾಥರಾವ್‌ ಮತ್ತಿಕೊಪ್ಪ ಅವರು ಈವರೆಗೂ ಎಂ.ಡಿ.ಎಫ್‌ನ ಅಧ್ಯಕ್ಷರಾಗಿದ್ದರು. ಇದನ್ನೂ ಓದಿ » ‘ಸರಿಯಾಗಿ ಕರೆಂಟ್‌ ಕೊಡ್ತಿಲ್ಲʼ, ಮೆಸ್ಕಾಂ ಕಚೇರಿ ಮುಂದೆ ಕುಳಿತು ಬಳಕೆದಾರರ ಆಕ್ರೋಶ

‘ಸರಿಯಾಗಿ ಕರೆಂಟ್‌ ಕೊಡ್ತಿಲ್ಲʼ, ಮೆಸ್ಕಾಂ ಕಚೇರಿ ಮುಂದೆ ಕುಳಿತು ಬಳಕೆದಾರರ ಆಕ್ರೋಶ

Protest-for-electricity-in-Sagara.

ಸಾಗರ : ಅಸಮರ್ಪಕ ವಿದ್ಯುತ್ (Power) ಪೂರೈಕೆ ಖಂಡಿಸಿ ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿಯ ವತಿಯಿಂದ ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ನಗರದ 13 ಸಾವಿರ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮೆಸ್ಕಾಂ, ಆವಿನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಾಂತರ ವಿದ್ಯುತ್ ಮಾರ್ಗದ ಮೂಲಕ ಅನುಷ್ಠಾನ ಗೊಳಿಸಲು ಮುಂದಾಗಿದೆ. ಇದರಿಂದ ಅನಿಯಮಿತ ಲೋಡ್ ಶೆಡ್ಡಿಂಗ್‌ ಉಂಟಾಗುತ್ತಿದೆ. ಆವಿನಹಳ್ಳಿ ಹೋಬಳಿಯ ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು. ಆವಿನಹಳ್ಳಿ ಹೋಬಳಿಯ ಗ್ರಾಮಾಂತರ ಪ್ರದೇಶದ … Read more

ಸಾಗರದ ಮಹಾಗಣಪತಿ ಜಾತ್ರೆಗೆ ಸಿದ್ಧತೆ ಜೋರು, ಮಹತ್ವದ ಮೀಟಿಂಗ್‌, ಏನೆಲ್ಲ ಚರ್ಚೆಯಾಯ್ತು?

Meeting-about-Ganapathi-Jathre-in-Sagara.

ಸಾಗರ : ಮಾ.30 ರಿಂದ ಏ.5ರವರೆಗೆ ಸಾಗರದ ಇತಿಹಾಸ ಪ್ರಸಿದ್ಧ ಮಹಾಗಣಪತಿ ದೇವರ ಜಾತ್ರಾ (Jathre) ಮಹೋತ್ಸವ ನಡೆಯಲಿದೆ. ಇದರ ಸಿದ್ಧತೆಗಾಗಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು, ದೇವಸ್ಥಾನ ಸಮಿತಿಯವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಭಾರ ಉಪ ವಿಭಾಗಾಧಿಕಾರಿ ರಶ್ಮಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಪೂರ್ವ ಸಿದ್ಧತೆ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಏನೆಲ್ಲ ಚರ್ಚೆಯಾಯ್ತು? ಈ ಬಾರಿಯು ಅದ್ಧೂರಿಯಾಗಿ ಮಹಾಗಣಪತಿ ದೇವರ ಜಾತ್ರೆ ನಡೆಯಲಿದೆ. ಏ.1ರಂದು ದೇವರ ಮಹಾಸ್ಯಂದನ ರಥೋತ್ಸವ ನಡೆಯಲಿದೆ. ಜಾತ್ರೆ ಅಂಗವಾಗಿ ದೇವಸ್ಥಾನದ … Read more

ಸಿಗಂದೂರು ಸೇತುವೆ, ಮತ್ತೊಂದು ಮಹತ್ವದ ಬೆಳವಣಿಗೆ, ಫೋಟೊ ಹಂಚಿಕೊಂಡ ಸಂಸದ ರಾಘವೇಂದ್ರ

dambar-works-on-Siganduru-bridge

ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಸೇತುವೆಯ ಮೇಲ್ಭಾಗದಲ್ಲಿ ಡಾಂಬರೀಕರಣ ಕಾರ್ಯ ಆರಂಭವಾಗಿದೆ. ಡಾಂಬರೀಕರಣ ಪ್ರಕ್ರಿಯೆ ಆರಂಭವಾಗಿದ್ದು, ಸಂಸದ ಬಿ.ವೈ.ರಾಘವೇಂದ್ರ ಅವರ ಮಾಧ್ಯಮ ವಿಭಾಗ ಫೋಟೊಗಳನ್ನು ಬಿಡುಗಡೆ ಮಾಡಿದೆ. ಈವರೆಗು ಡ್ರೋಣ್‌ ವಿಡಿಯೋಗಳ ಮೂಲಕ ಸಿಗಂದೂರು ಸೇತುವೆ (Bridge) ಬೆರಗು ಮೂಡಿಸುತ್ತಿತ್ತು. ಈಗ ಡಾಂಬರೀಕರಣ ಆರಂಭವಾಗಿರುವ ಸಂಗತಿ ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಖುಷಿ ಉಂಟು ಮಾಡಿದೆ. 2019ರಲ್ಲಿ ಸಿಗಂದೂರು ಸೇತುವೆ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶಂಕುಸ್ಥಾಪನೆ … Read more

‘ಬೆಂಗಳೂರಿನ ಕಾಯಿಲೆ ಸಾಗರಕ್ಕೆ ಕಾಲಿಟ್ಟಿದೆ’, ಮಾಜಿ ಮಿನಿಸ್ಟರ್‌ ಹಾಲಪ್ಪ ಹೀಗೆ ಹೇಳಿದ್ದೇಕೆ?

Former-Minister-Haratalu-Halappa-BJP

ಸಾಗರ : ನಕಲಿ ದಾಖಲೆ ಸೃಷ್ಟಿ ಸರ್ಕಾರಿ ಜಮೀನು (Land Mafia) ಕಬಳಿಸುವ ಬೆಂಗಳೂರಿನ ಕಾಯಿಲೆ ಸಾಗರಕ್ಕು ಕಾಲಿಟ್ಟಿದೆ. ಆದರೆ ಕಮಿಷನ್‌ ಹಂಚಿಕೆಯಲ್ಲಿ ಉಂಟಾದ ವ್ಯತ್ಯಾಸದಿಂದ ಪ್ರಕರಣಗಳು ಬೆಳಕಿಗೆ ಬರುತ್ತಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರತಾಳು ಹಾಲಪ್ಪ, ಅಧಿಕಾರದಲ್ಲಿರುವ ರಾಜಕಾರಣಿಗಳು, ಅವರ ಹಿಂಬಾಲಕರು, ಅಧಿಕಾರಿಗಳು ಸೇರಿ ನಕಲಿ ದಾಖಲೆ ಸೃಷ್ಟಿ ಜಮೀನು ಮಾರಾಟ ಮಾಡುತ್ತಿದ್ದಾರೆ. ಆದರೆ ಕಮಿಷನ್‌ ಹಂಚಿಕೆ ವೇಳೆ ವ್ಯತ್ಯಾಸವಾಗಿದೆ. ಈ ಸಂಬಂಧ ಬುಧವಾರ ಸಣ್ಣಪುಟ್ಟ ಗಲಾಟೆಯು ಆಗಿದೆ … Read more

ಗಿಳಿ ಹಿಡಿಯಲು ಹೋದ ಯುವಕ ಸಾವು, ಇಬ್ಬರು ಪ್ರಾಣಪಾಯದಿಂದ ಪಾರು, ಹೇಗಾಯ್ತು ಘಟನೆ?

talaguppa-sachin-succumbed

ಸಾಗರ : ತೆಂಗಿನ ಮರದ (Tree) ಮೇಲೆ ಗೂಡು ಕಟ್ಟಿದ್ದ ಗಿಣಿಯನ್ನು ಹಿಡಿಯುವ ಸಾಹಸದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತೆಂಗಿನ ಮರ ತಲೆ ಮೇಲೆ ಬಿದ್ದು ಸಚಿನ್‌ (24) ಕೊನೆಯುಸಿರೆಳೆದಿದ್ದಾನೆ. ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನಿಬ್ಬರು ಯುವಕರು ಪಾರಾಗಿದ್ದಾರೆ. ಒಣಗಿದ ತೆಂಗಿನ ಮರದ ತುದಿಯಲ್ಲಿ ಭೂತಯ್ಯನ ಕಟ್ಟೆ ಸಮೀಪ ಒಣಗಿದ ತೆಂಗಿನ ಮರದ (Tree) ತುದಿಯಲ್ಲಿ ಗಿಣಿಯೊಂದು ಗೂಡು ಕಟ್ಟಿತ್ತು. ಮರ ಉರುಳಿಸಿ ಗೂಡು ಮತ್ತು ಗಿಣಿಯನ್ನು ಸೆರೆ ಹಿಡಿಯಲು ಯುವಕರು ಮುಂದಾಗಿದ್ದರು ಎಂದು … Read more

ಸಾಗರ, ಸೊರಬ, ಶಿಕಾರಿಪುರದಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ NEWS

SHUBHODAYA-SHIVAMOGGA-FATAFAT-SAGARA-SORABA-SHIKARIPURA

ಶುಭೋದಯ ಶಿವಮೊಗ್ಗ NEWS : ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಏನೇನಾಯ್ತು? ಇಡೀ ದಿನದ ಸುದ್ದಿಯನ್ನು ಫಟಾಫಟ್‌ ಓದಲು ಶುಭೋದಯ ಶಿವಮೊಗ್ಗ NEWS. ಇದನ್ನೂ ಓದಿ » ವಿಧಾನಸೌಧದಲ್ಲಿ ಕೆಲಸ ಕೊಡಿಸ್ತೀನಿ ಅಂದ, ಲಕ್ಷ ಲಕ್ಷ ಹಣ ಪಡೆದವನ ಹಿನ್ನೆಲೆ ಪರಿಶೀಲಿಸಿದಾಗ ಕಾದಿತ್ತು ಆಘಾತ Soraba, Sagara, Shikaripura News

ಸಾಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಜಫ್ತಿ, ನ್ಯಾಯಾಲಯದ ಆವರಣಕ್ಕೆ ರವಾನೆ, ಕಾರಣವೇನು?

KSRTC-Bus-seized-at-sagara-court.

ಸಾಗರ : ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆ ಸಾಗರ ನ್ಯಾಯಾಲಯದ ಆದೇಶದ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಜಫ್ತಿ ಮಾಡಲಾಗಿದೆ. ಶಿರಸಿ ಡಿಪೋಗೆ ಸೇರಿದ ಬಸ್‌ ಒಂದನ್ನು ಜಫ್ತಿ (Seized) ಮಾಡಿ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ. ಏನಿದು ಪ್ರಕರಣ? 2022ರ ಜುಲೈ 7ರಂದು ಬೆಳಗ್ಗೆ 5.30ಕ್ಕೆ ಗಣೇಶ್‌ ಎಂಬ ಯುವಕ ಪತ್ರಿಕೆ ಹಂಚಲು ಸೈಕಲ್‌ನಲ್ಲಿ ತೆರಳುವಾಗ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಸಾವನ್ನಪ್ಪಿದ್ದ. ಪರಿಹಾರ ಕೋರಿ ಗಣೇಶನ ಪೋಷಕರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ … Read more

ಸಾಗರ, ಸೊರಬ, ಶಿಕಾರಿಪುರದಲ್ಲಿ ಎಲ್ಲೆಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

SHUBHODAYA-SHIVAMOGGA-FATAFAT-SAGARA-SORABA-SHIKARIPURA

ಶುಭೋದಯ ಶಿವಮೊಗ್ಗ NEWS : ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಏನೇನಾಯ್ತು? ಇಡೀ ದಿನದ ಸುದ್ದಿಯನ್ನು ಫಟಾಫಟ್‌ ಓದಲು ಶುಭೋದಯ ಶಿವಮೊಗ್ಗ NEWS. ಇದನ್ನೂ ಓದಿ » ಶಿವಮೊಗ್ಗದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌, ಮನದ ಕಡಲು ಟೀಮ್‌ ಜೊತೆಗೆ ಪ್ರೆಸ್‌ ಮೀಟ್‌