SHIVAMOGGA LIVE NEWS | 28 MARCH 2024
ELECTION NEWS : ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನೆಲೆ ಕೆ.ಎಸ್.ಈಶ್ವರಪ್ಪ ಅವರ ಬೈಕ್ ರ್ಯಾಲಿ ಆಯೋಜಕರ ವಿರುದ್ಧ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಮಾ.24ರಂದು ಶಿಕಾರಿಪುರ ಪಟ್ಟಣದಲ್ಲಿ ಬೈಕ್ ಜಾಥಾ ಹಮ್ಮಿಕೊಂಡಿದ್ದರು. ಈ ರ್ಯಾಲಿಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ.
ಎರಡು ಪ್ರಮುಖ ಉಲ್ಲಂಘನೆ
ಎಫ್ಐಆರ್ನಲ್ಲಿ ಎರಡು ಪ್ರಮುಖ ಉಲ್ಲಂಘನೆಗಳ ಕುರಿತು ಉಲ್ಲೇಖಿಸಲಾಗಿದೆ. ಈಶ್ವರಪ್ಪ ಅವರ ಬೆಂಬಲಿಗ ರಾಜು ಎಂಬುವವರು ರ್ಯಾಲಿಗೆ ಅನುಮತಿ ಪಡೆದಿದ್ದರು. 10 ಬೈಕ್, ಒಂದು ಜೀಪ್ಗೆ ಮಾತ್ರ ಅನುಮತಿ ಪಡೆಯಲಾಗಿತ್ತು. ಆದರೆ 50ಕ್ಕಿಂತಲೂ ಹೆಚ್ಚಿನ ಬೈಕ್, 4 ಕಾರುಗಳು ಇದ್ದವು. ಇನ್ನು, ಬೈಕ್ಗಳ ಮೇಲೆ ಓಂ ಸಂಕೇತ ಇರುವ ಧ್ವಜಗಳನ್ನು ಕಟ್ಟಿಕೊಳ್ಳಲಾಗಿತ್ತು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ, ರಾಜು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಪ್ರಚಾರ ಬಿರುಸುಗೊಳಿಸಿದ ರಾಘವೇಂದ್ರ, ಇಡೀ ದಿನ ಎಲ್ಲೆಲ್ಲಿ ಸಭೆಗಳಾದವು? ಇಲ್ಲಿದೆ ಫಟಾಫಟ್ ಅಪ್ಡೇಟ್