SHIVAMOGGA LIVE NEWS | 7 FEBRUARY 2024
SHIMOGA : ವಿದ್ಯಾನಗರದ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಬೆನ್ನಿಗೆ ಎನ್ಸಿಸಿ ಕಚೇರಿ ಮುಂಭಾಗ ಬಿ.ಹೆಚ್.ರಸ್ತೆಯಲ್ಲಿ ಡಿವೈಡರ್ ವಿಸ್ತರಿಸಲಾಗಿದೆ. ಇದರಿಂದ ರೋಟರಿ ಚಿತಾಗಾರ ಮತ್ತು ಪಕ್ಕದ ಬಡಾವಣೆಗಳಿಗೆ ತೆರಳುವವರಿಗೆ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯರ ನಿಯೋಗ ಇವತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ ಪಾಲಿಕೆ ಮಾಜಿ ಸದಸ್ಯರು ಹೆಚ್ಚುವರಿಯಾಗಿ ನಿರ್ಮಿಸಿರುವ ಡಿವೈಡರ್ ತೆರವು ಮಾಡಬೇಕು. ಚಿತಾಗಾರಕ್ಕೆ ಮತ್ತು ಪಕ್ಕದ ಬಡಾವಣೆಗೆ ತೆರಳಲು ಅನುಕೂಲವಾಗುಂತೆ ಮಾಡಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಮಾಜಿ ಸದಸ್ಯರಾದ ರಮೇಶ್ ಹೆಗ್ಡೆ, ಹೆಚ್.ಸಿ.ಯೋಗೇಶ್, ಶಿವಕುಮಾರ್, ವಿಶ್ವನಾಥ ಕಾಶಿ, ನಾಗರಾಜ ಕಂಕಾರಿ, ಯಮುನಾ ರಂಗೇಗೌಡ, ಅಫ್ತಾಬ್ ಪರ್ವೀಜ್, ರಂಗೇಗೌಡ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಪೊಲೀಸ್ ಠಾಣೆ ಮುಂಭಾಗ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಪ್ರತಿಭಟನೆ