ಶಿವಮೊಗ್ಗ ಲೈವ್.ಕಾಂ | SAGARA NEWS | 2 MAY 2021
ತಾಳಗುಪ್ಪದ ರಂಗನಾಥ ಬೀದಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 13 ಮಂದಿಯಲ್ಲಿ ಕೋರನ ಕಾಣಿಸಿಕೊಂಡ ಹಿನ್ನೆಲೆ, ರಸ್ತೆಗೆ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪೊಲೀಸ್ ಠಾಣೆ ಪಕ್ಕದಿಂದ ಗೌರಿಕೆರೆ ರಸ್ತೆ ಸೇರುವವರಗೆ ಕಂಟೇನ್ಮೆಂಟ್ ಜೋನ್ ಎಂದು ತಹಶೀಲ್ದಾರ್ ಆದೇಶಿಸಿದ್ದಾರೆ. ಈ ರಸ್ತೆಯಲ್ಲಿ ಜನ ಮನೆಯಿಂದ ಹೊರಬರಬಾರದು, ಗುಂಪುಗೂಡಬಾರದು ಎಂದು ಸೂಚಿಸಲಾಗಿದೆ.
ನೂರಕ್ಕೂ ಹೆಚ್ಚು ಮನೆಗಳು, ಐನೂರಕ್ಕೂ ಹೆಚ್ಚು ಮಂದಿ ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿದ್ದಾರೆ. ಮೇ 14ರವರೆಗೆ ಇದು ಕಂಟೈನ್ಮೆಂಟ್ ಜೋನ್ ಆಗಿ ಮುಂದುವರೆಯಲಿದೆ.
ನೀವಿನ್ನೂ ಕರೋನ ಲಸಿಕೆ ಪಡೆದಿಲ್ಲವಾ? ಕೂಡಲೆ ಕೆಳಗಿರುವ ಫೋಟದಲ್ಲಿನ ನಂಬರ್ಗೆ ಕರೆ ಮಾಡಿ, ಸುರಕ್ಷಿತವಾಗಿ ಲಸಿಕೆ ಪಡೆಯಿರಿ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]