SHIVAMOGGA LIVE NEWS | 16 MAY 2024
SHIMOGA : ದೆಹಲಿ ಮತ್ತು ಅಹಮದಾಬಾದ್ಗೆ ಲಾರಿಯಲ್ಲಿ ಕಳುಹಿಸಿದ್ದ ಅಡಿಕೆ ಪೈಕಿ 10 ಕ್ವಿಂಟಾಲ್ ಅಡಿಕೆ ಕಳುವಾಗಿದೆ (THEFT). ಈ ಸಂಬಂಧ ಲಾರಿ ಚಾಲಕರ ವಿರುದ್ಧವೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.9ರಂದು ಅಹಮದಾಬಾದ್ಗೆ 24,500 ಕೆ.ಜಿ ಅಡಿಕೆ ಕಳುಹಿಸಲಾಗಿತ್ತು. ಏ.18ರಂದು ದೆಹಲಿಗೆ 24,500 ಕೆ.ಜಿ ಅಡಿಕೆ ರವಾನಿಸಲಾಗಿತ್ತು. ಆದರೆ ದೆಹಲಿ ಮತ್ತು ಅಹಮದಾಬಾದ್ನ ಅಡಿಕೆ ವ್ಯಾಪಾರಿಗಳು ತೂಕ ಕಡಿಮೆಯಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಟ್ರಾನ್ಸ್ಪೋರ್ಟ್ ಮ್ಯಾನೇಜರ್ ಎರಡು ಲಾರಿಗಳ ಚಾಲಕರ ವಿಚಾರಣೆ ಮಾಡಿದಾಗ ಅಡಿಕೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ – ಅಡಿಕೆ ಧಾರಣೆ | 16 ಮೇ 2024 | ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?
ಲಾರಿ ಚಾಲಕರು ಪ್ರತಿ ಚೀಲದಿಂದ ಒಂದೆರಡು ಕೆ.ಜಿಯಷ್ಟು ಅಡಿಕೆ ಕಳ್ಳತನ ಮಾಡಿ, ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಟ್ರಾನ್ಸ್ಪೋರ್ಟ್ ಮ್ಯಾನೇಜರ್ ಶೇಕ್ ಉಮರ್ ಫಾರೂಕ್ ದೂರಿನಲ್ಲಿ ಆರೋಪಿಸಿದ್ದಾರೆ. ಅಂದಾಜು 2.50 ಲಕ್ಷ ರೂ. ಮೌಲ್ಯದ 10 ಕ್ವಿಂಟಾಲ್ ಅಡಿಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200