ಲಾರಿಗೆ ಅಡಿಕೆ ತುಂಬುವಾಗ ಇದ್ದ ತೂಕ ಒಂದು, ಇಳಿಸುವಾಗ ಇದ್ದ ತೂಕ ಮತ್ತೊಂದು, ಮಧ್ಯದಲ್ಲಿ ಆಗಿದ್ದೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 16 MAY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ದೆಹಲಿ ಮತ್ತು ಅಹಮದಾಬಾದ್‌ಗೆ ಲಾರಿಯಲ್ಲಿ ಕಳುಹಿಸಿದ್ದ ಅಡಿಕೆ ಪೈಕಿ 10 ಕ್ವಿಂಟಾಲ್‌ ಅಡಿಕೆ ಕಳುವಾಗಿದೆ (THEFT). ಈ ಸಂಬಂಧ ಲಾರಿ ಚಾಲಕರ ವಿರುದ್ಧವೆ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏ.9ರಂದು ಅಹಮದಾಬಾದ್‌ಗೆ 24,500 ಕೆ.ಜಿ ಅಡಿಕೆ ಕಳುಹಿಸಲಾಗಿತ್ತು. ಏ.18ರಂದು ದೆಹಲಿಗೆ 24,500 ಕೆ.ಜಿ ಅಡಿಕೆ ರವಾನಿಸಲಾಗಿತ್ತು. ಆದರೆ ದೆಹಲಿ ಮತ್ತು ಅಹಮದಾಬಾದ್‌ನ ಅಡಿಕೆ ವ್ಯಾಪಾರಿಗಳು ತೂಕ ಕಡಿಮೆಯಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಟ್ರಾನ್ಸ್‌ಪೋರ್ಟ್‌ ಮ್ಯಾನೇಜರ್‌ ಎರಡು ಲಾರಿಗಳ ಚಾಲಕರ ವಿಚಾರಣೆ ಮಾಡಿದಾಗ ಅಡಿಕೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ – ಅಡಿಕೆ ಧಾರಣೆ | 16 ಮೇ 2024 | ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?

ಲಾರಿ ಚಾಲಕರು ಪ್ರತಿ ಚೀಲದಿಂದ ಒಂದೆರಡು ಕೆ.ಜಿಯಷ್ಟು ಅಡಿಕೆ ಕಳ್ಳತನ ಮಾಡಿ, ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಟ್ರಾನ್ಸ್‌ಪೋರ್ಟ್‌ ಮ್ಯಾನೇಜರ್‌ ಶೇಕ್‌ ಉಮರ್‌ ಫಾರೂಕ್‌ ದೂರಿನಲ್ಲಿ ಆರೋಪಿಸಿದ್ದಾರೆ. ಅಂದಾಜು 2.50 ಲಕ್ಷ ರೂ. ಮೌಲ್ಯದ 10 ಕ್ವಿಂಟಾಲ್‌ ಅಡಿಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment