ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 NOVEMBER 2023
THIRTHAHALLI : ಟೆಲಿಗ್ರಾಂನಲ್ಲಿ ರಾತ್ರಿ ಬಂದ ಮೆಸೇಜ್ನಿಂದ ಇಂಜಿನಿಯರ್ (engineer) ಒಬ್ಬರು 93 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಜಿನಿಯರ್ ಒಬ್ಬನ (ಹೆಸರು ಗೌಪ್ಯ) ಟೆಲಿಗ್ರಾಂಗೆ ನ.4ರಂದು A DAILY TASKS ಎಂಬ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಟಾಸ್ಕ್ಗಳನ್ನು ಪೂರೈಸುವ ಪಾರ್ಟ್ ಟೈಮ್ ಉದ್ಯೋಗ ಎಂದು ನಂಬಿಸಿ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಗೂಗಲ್ ರಿವ್ಯೂಸ್ ಎಂದು ತಿಳಿಸಿ ಮೊದಲ ದಿನ 300 ರೂ.ಗಳನ್ನು ಇಂಜಿನಿಯರ್ (engineer) ಖಾತೆಗೆ ವರ್ಗಾಯಿಸಿದರು.
ಇದನ್ನೂ ಓದಿ- ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಸರ್ಕಲ್ನಲ್ಲಿ ಬೃಹತ್ ಗುಂಡಿ, ರಸ್ತೆ ತುಂಬೆಲ್ಲ ಹರಡಿದೆ ಜೆಲ್ಲಿ, ಎಲ್ಲಿ ಇದು?
ನಂತರ ಪ್ರೀಪೇಡ್ ಟಾಸ್ಕ್ ಎಂದು 1 ಸಾವಿರ ರೂ. ಹಾಕಿಸಿಕೊಂಡಿದ್ದು 1300 ರೂ. ಹಣವನ್ನು ಇಂಜಿನಿಯರ್ಗೆ ವರ್ಗಾಯಿಸಿದ್ದರು. ಒಮ್ಮೆ 3 ಸಾವಿರ ರೂ. ಹಣ ಹಾಕಿಸಿಕೊಂಡಿದ್ದು ಟಾಸ್ಕ್ ಪೂರೈಸಿದರು ಹಣ ಮರಳಿಸಲಿಲ್ಲ. ಹೆಚ್ಚು ಟಾಸ್ಕ್ಗಳನ್ನು ಪೂರೈಸಿದರೆ ಒಟ್ಟಿಗೆ ಹಣ ಹಿಂತಿರುಗಿಸುವುದಾಗಿ ನಂಬಿಸಿ 93 ಸಾವಿರ ರೂ. ಹಣ ಹಾಕಿಸಿಕೊಂಡು ವಂಚಿಸಲಾಗಿದೆ.
LATEST NEWS
- ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಸಚಿನ್ ಅಂತ್ಯಕ್ರಿಯೆ

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

- ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

- ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

About The Editor
ನಿತಿನ್ ಆರ್.ಕೈದೊಟ್ಲು















