ಎಟಿಎಂನಿಂದ ಹಣ ಬಿಡಿಸಿದ ಮರುದಿನ ಮೊಬೈಲ್‌ಗೆ ಬಂದಿದ್ದ ಮೆಸೇಜ್‌ ನೋಡಿ ಮಹಿಳೆಗೆ ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 14 DECEMBER 2024

ಶಿವಮೊಗ್ಗ : ನಗರದ ಎಟಿಎಂ ಒಂದರಲ್ಲಿ ಹಣ ಬಿಡಿಸಿಕೊಂಡ ಮರುದಿನ ಮೊಬೈಲ್‌ ಪರಿಶೀಲಿಸುವಾಗ ಮೆಸೇಜ್‌ ಗಮನಿಸಿದ ಮಹಿಳೆ ಕಕ್ಕಾಬಿಕ್ಕಿಯಾಗಿದ್ದಾರೆ. ಎಟಿಎಂ ಕಾರ್ಡ್‌ (ATM Card) ಪರಿಶೀಲಿಸಿದಾಗ ಆಘಾತಗೊಂಡಿದ್ದಾರೆ.

ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಮತ್ತೊಮ್ಮೆ ಮಹಿಳೆಯೊಬ್ಬರನ್ನು ವಂಚಿಸಲಾಗಿದೆ.

ಅಷ್ಟಕ್ಕು ಆಗಿದ್ದೇನು?

ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ವಿತ್‌ ಡ್ರಾ ಮಾಡಲು ರೆಹಾನಾ ಬೇಗಂ (68) ಎಂಬುವವರು ಎಟಿಎಂಗೆ ತೆರಳಿದ್ದರು. ಎಟಿಎಂ ಬಳಿ ಇದ್ದ ವ್ಯಕ್ತಿಯೊಬ್ಬ ಹಣ ಬಿಡಿಸಿಕೊಡಬೇಕ? ಎಂದು ವಿಚಾರಿಸಿ ನೆರವಿಗೆ ಧಾವಿಸಿದ್ದ. ರೆಹಾನಾ ಬೇಗಂ ಅವರ ಎದುರಲ್ಲೇ ಎಟಿಎಂಗೆ ಕಾರ್ಡ್‌ ಹಾಕಿ, ಪಾಸ್‌ ವರ್ಡ್‌ ಟೈಪ್‌ ಮಾಡುವಂತೆ ತಿಳಿಸಿದ್ದ. ರೆಹಾನಾ ಬೇಗಂ ತಮ್ಮ ಖಾತೆಯಿಂದ 500 ರೂ. ಹಣ ವಿತ್‌ ಡ್ರಾ ಮಾಡಿಕೊಂಡಿದ್ದು, ನೆರವಿಗೆ ಧಾವಿಸಿದಾತ ಅವರ ಕೈಗೆ ಎಟಿಎಂ ಕಾರ್ಡ್‌ ಹಿಂತಿರುಗಿಸಿದ್ದ.

Crime-News-General-Image

ಮರುದಿನ ಮೆಸೇಜ್‌ ನೋಡಿದಾಗ ಶಾಕ್‌

ಮಾರುಕಟ್ಟೆಯಿಂದ ಮನೆಗೆ ಮರಳಿದ ರೆಹಾನಾ ಬೇಗಂ ಮೊಬೈಲ್‌ ಗಮನಿಸಿರಲಿಲ್ಲ. ಮೆಸೇಜುಗಳನ್ನು ಮರುದಿನ ಗಮನಿಸಿದಾಗ ಎಟಿಎಂನಿಂದ 1.28 ಲಕ್ಷ ರೂ. ವಿತ್‌ ಡ್ರಾ ಆಗಿರುವ ಮೆಸೇಜ್‌ ಗಮನಿಸಿ ಆತಂಕಕ್ಕೀಡಾಗಿ ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಎಟಿಎಂ ಕಾರ್ಡ್‌ ಪರಿಶೀಲಿಸಿದಾಗ ಅದು ಅವರದ್ದಾಗಿರಲಿಲ್ಲ ಎಂದು ಆರೋಪಿಸಲಾಗಿದೆ.

ಎಟಿಎಂ ಕಾರ್ಡ್‌ ಬದಲಿಸಿದ್ದ ವಂಚಕ

ರೆಹಾನಾ ಬೇಗಂ ಅವರಿಗೆ ಹಣ ಬಿಡಿಸಿಕೊಡುವ ನೆಪದಲ್ಲಿ ಅವರ ಪಾಸ್‌ ವರ್ಡ್‌ ತಿಳಿದುಕೊಂಡು, ಎಟಿಎಂ ಕಾರ್ಡ್‌ ಬದಲಿಸಿ ಬೇರೊಂದು ಕಾರ್ಡ್‌ ನೀಡಲಾಗಿದೆ. ಬಳಿಕ ಎರಡು ಹಂತದಲ್ಲಿ 1.28 ಲಕ್ಷ ರೂ. ಹಣ ವಿತ್‌ ಡ್ರಾ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ – ಮೈಸೂರು ಹೊಸ ರೈಲಿಗೆ ಬೇಡಿಕೆ ಇಟ್ಟ ಸಂಸದ

ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂನಲ್ಲಿ ನೆರವು ನೀಡುವ ನೆಪದಲ್ಲಿ ಎಟಿಎಂ ಕಾರ್ಡ್‌ ಅದಲು ಬದಲು ಮಾಡಿ, ಹಣ ವಿತ್‌ ಡ್ರಾ ಮಾಡಿಕೊಂಡಿರುವ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ದಾಖಲಾದ ಪ್ರಕರಣದ ವಿವರ ಇಲ್ಲಿ ಕೆಳಗಿದೆ. ಅದನ್ನೂ ಓದಬಹುದು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 14, 2024

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

Leave a Comment