SHIVAMOGGA LIVE NEWS | 26 ಮಾರ್ಚ್ 2022
ಕ್ಷುಲಕ ವಿಚಾರಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಒಬ್ಬಾತನಿಗೆ ಚಾಕುವಿನಿಂದ ತಿವಿಯಲಾಗಿದೆ. ಗಾಯಗೊಂಡಿದ್ದ ಯುಕವನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
ಶಿವಮೊಗ್ಗ ಲೈವ್.ಕಾಂ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಟ್ಯಾಂಕ್ ಮೊಹಲ್ಲಾ ರಂಗನಾಥ (21) ಚಾಕು ಇರಿತಕ್ಕೆ ಒಳಗಾದವನು. ಸುದೀಪ್ (21) ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ.
ಗಲಾಟೆಗೆ ಕಾರಣವೇನು?
ಶುಕ್ರವಾರ ರಾತ್ರಿ ಟ್ಯಾಂಕ್ ಮೊಹಲ್ಲಾದ ಸರ್ಕಾರಿ ಆಸ್ಪತ್ರೆ ಸಮೀಪ ಶಿವದರ್ಶನ್ ನಡೆದು ಹೋಗುತ್ತಿದ್ದಾಗ ನಾಲ್ವರು ಯುವಕರು ಅಡ್ಡಗಟ್ಟಿದ್ದಾರೆ. ಸುದೀಪ್ ಎಂಬಾತನ ಅಕ್ಕನ ಮಗಳು ಇದ್ದ ಫ್ಲೆಕ್ಸ್ ಹರಿದಿದ್ದೇಕೆ ಎಂದು ಶಿವದರ್ಶನ್’ಗೆ ಪ್ರಶ್ನೆ ಮಾಡಿ, ಹಲ್ಲೆ ಮಾಡಲು ಆರಂಭಿಸಿದ್ದಾರೆ.
ಜಗಳ ಬಿಡಿಸಲು ಹೋದ ರಂಗನಾಥ್ ಅವರಿಗೆ ಸುದೀಪ್ ಚಾಕುವಿನಿಂದ ತಿವಿದಿದ್ದಾನೆ. ಭುಜದ ಕೆಳ ಭಾಗದಲ್ಲಿ ಚಾಕು ತಿವಿತದಿಂದ ಗಾಯವಾಗಿದ್ದು, ರಂಗನಾಥ ಜೋರಾಗಿ ಕೂಗಿಕೊಂಡಿದ್ದಾನೆ. ಕೂಡಲೆ ಜನ ಸೇರಿದ್ದು, ರಂಗನಾಥ ಮತ್ತು ಶಿವದರ್ಶನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಗಲಾಟೆ ಸಂದರ್ಭ ರಂಗನಾಥನ ಕೊರಳಲ್ಲಿ ಇದ್ದ ಬೆಳ್ಳಿ ಸರ, ಮೊಬೈಲ್ ನಾಪತ್ತೆಯಾಗಿದೆ. ಘಟನೆ ಸಂಬಂಧ ಟ್ಯಾಂಕ್ ಮೊಹಲ್ಲಾದ ಸುದೀಪ್, ಶರತ್, ಆಕಾಶ್, ರಾಹೀಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200