ಕಾಲೇಜು ಪ್ರಾಂಶುಪಾಲ, ಉಪನ್ಯಾಸಕರು ಸೇರಿ 8 ಮಂದಿ ವಿರುದ್ಧ ಕೇಸ್‌ ದಾಖಲು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 7 DECEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಖಾಸಗಿ ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಪ್ರಾಂಶುಪಾಲ (Principal), ಉಪನ್ಯಾಸಕರು ಮತ್ತು ಹಾಸ್ಟೆಲ್‌ ವಾರ್ಡನ್‌ ಸೇರಿ 8 ಮಂದಿ ವಿರುದ್ಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾಲೇಜು ಹೆಸರು ಹಾಳಾಗುತ್ತದೆʼ

ಮೃತ ವಿದ್ಯಾರ್ಥಿನಿ ಮೇಘಶ್ರೀ ಅವರ ತಂದೆ ಓಂಕಾರಯ್ಯ ದೂರು ನೀಡಿದ್ದಾರೆ. ಮೇಘಶ್ರೀ ಇತ್ತೀಚೆಗೆ ಕರೆ ಮಾಡಿದಾಗಲೆಲ್ಲ ‘ಓದಿನ ವಿಚಾರದಲ್ಲಿ ಉಪನ್ಯಾಸಕರು ಮತ್ತು ವಾರ್ಡನ್‌ಗಳು ಒತ್ತಡ ಹೇರುತ್ತಿದ್ದಾರೆ. ಉತ್ತಮ ಅಂಕ ಗಳಿಸದೆ ಇದ್ದರೆ ಕಾಲೇಜಿನ ಹೆಸರು ಹಾಳಾಗಲಿದೆ ಎಂದು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಳು. ಹಾಗಾಗಿ ತಾವು ‘ಏನು ಆಗುವುದಿಲ್ಲ ಕೈಲಾದಷ್ಟು ಓದುವಂತೆ’ ಮೇಘಶ್ರೀ ತಿಳಿಸುತ್ತಿದ್ದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು, ಹೇಗಾಯ್ತು ಘಟನೆ? ಮುಂದೇನಾಯ್ತು?

ಎರಡನೇ ಮಹಿಡಿಯಿಂದ ಬಿದ್ದಿದ್ದಾಳೆ ಅಂದರು

ಡಿ.5ರಂದು ತಾವು ತಮ್ಮ ಜಮೀನಿಲ್ಲಿದ್ದಾಗ ಕಾಲೇಜಿನಿಂದ ಕರೆ ಮಾಡಿ ತಮ್ಮ ಮಗಳ ಮೇಘಶ್ರೀ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾಳೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು. ಮೆಗ್ಗಾನ್‌ ಆಸ್ಪತ್ರೆಗೆ ಧಾವಿಸಿದಾಗ ಮೇಘಶ್ರೀ ಮೃತಪಟ್ಟಿದ್ದಳು. ಆ ಬಳಿಕ ಕಾಲೇಜಿಗೆ ತೆರಳಿದಾಗ ಆಕೆ ಐದನೇ ಮಹಡಿಯಿಂದ ಬಿದ್ದಿದ್ದು ಗೊತ್ತಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮ ಪುತ್ರಿ ಮೇಲೆ ಒತ್ತಡ ಹೇರಿದ್ದ ಪ್ರಾಂಶುಪಾಲ(Principal), ಉಪನ್ಯಾಸಕರು ಮತ್ತು ವಾರ್ಡನ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment