ರವೀಂದ್ರನಗರ, ವೆಂಕಟೇಶನಗರದಲ್ಲಿ ಮಾಂಗಲ್ಯ ಸರ ಅಪಹರಣ, ಹೇಗಾಯ್ತು ಘಟನೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರ ಸರಗಳ್ಳತನ (Chain snatching) ಮಾಡಿದ್ದಾರೆ. ಒಂದು ಪ್ರಕರಣದಲ್ಲಿ ಮಾಂಗಲ್ಯ ಸರದ ಸ್ವಲ್ಪ ಭಾಗ ಮಾತ್ರ ಕಳ್ಳನ ಪಾಲಾಗಿದೆ.

ಎಲ್ಲೆಲ್ಲಿ ಹೇಗಾಯ್ತು ಘಟನೆ?

ಪ್ರಕರಣ 1 : ರವೀಂದ್ರ ನಗರ

ಸೆ.11ರಂದು ಬೆಳಗ್ಗೆ 6.50ರ ಹೊತ್ತಿಗೆ ಶಿವಮೊಗ್ಗದ ರವೀಂದ್ರನಗರದ ರೈಲ್ವೆ ಹಳಿ ಪಕ್ಕದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸುಶೀಲಮ್ಮ ಎಂಬುವವರ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಸರಗಳ್ಳ ಸುಶೀಲಮ್ಮ ಅವರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ ಅಪಹರಿಸಿದ್ದಾನೆ. ₹1.50 ಲಕ್ಷ ಮೌಲ್ಯದ 25 ಗ್ರಾಂ ತೂಕದ ಮಾಂಗಲ್ಯ ಸರ ಕಳುವಾಗಿದೆ ಎಂದು ಆರೋಪಿಸಿದ್ದಾರೆ. ಮಾಂಗಲ್ಯ ಸರ ಎಳೆದಾಗ ಸುಶೀಲಮ್ಮ ಅವರ ಕುತ್ತಿಗೆ ಭಾಗದಲ್ಲಿ ತರಚಿದ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

140823-Jayanagara-Police-Station

ಪ್ರಕರಣ 2 : ವೆಂಕಟೇಶನಗರ

ಸೆ.5ರ ರಾತ್ರಿ 8.50ರ ಹೊತ್ತಿಗೆ ವೆಂಕಟೇಶನ ನಗರ 3ನೇ ಅಡ್ಡರಸ್ತೆಯಲ್ಲಿ ಬಸವ ಕೇಂದ್ರದ ಸಮೀಪ ಜಯಂತಿ ಮಾಂಗಲ್ಯ ಸರ ಅಪಹರಣಕ್ಕೆ ಯತ್ನವಾಗಿದೆ. ತಮ್ಮ ಮನೆಯ ಹೊರಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಸರಗಳ್ಳ ಜಯಂತಿ ಅವರ ಕೊರಳಿಗೆ ಕೈ ಹಾಕಿದ್ದಾನೆ. ಈ ವೇಳ ಜಯಂತಿ ಅವರು ಸರವನ್ನು ಬಿಗಿಯಾಗಿ ಹಿಡಿದಿದ್ದರಿಂದ ಸ್ವಲ್ಪ ಭಾಗ ಮಾತ್ರ ಸರಗಳ್ಳನ ಪಾಲಾಗಿದೆ. ಸುಮಾರು ₹25 ಸಾವಿರ ಮೌಲ್ಯದ 5 ಗ್ರಾಂ ತೂಕದ ಒಂದು ಎಳೆಯನ್ನು ಮಾತ್ರ ಕಳ್ಳ ಕಸಿದುಕೊಳ್ಳಲು ಸಾಧ್ಯವಾಗಿದೆ ಎಂದು ಆರೋಪಿಸಲಾಗಿದೆ.

ಎರಡು ಪ್ರಕರಣದಲ್ಲಿಯು ಕಳ್ಳ ಕಪ್ಪು ಬಣ್ಣದ ಜಾಕೆಟ್‌ ಮತ್ತು ಹೆಲ್ಮೆಟ್‌ ಧರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JNNCE-Admission-Advt-scaled

ಇದನ್ನೂ ಓದಿ » ಪ್ರಧಾನಿ ಮೋದಿ 75ನೇ ಜನ್ಮದಿನ, ಶಿವಮೊಗ್ಗ ಜಿಲ್ಲೆಯ ಏಳು ಕಡೆ ಆರೋಗ್ಯ ಶಿಬಿರ, ಎಲ್ಲೆಲ್ಲಿ ಯಾವಾಗ ನಡೆಯಲಿದೆ?

Chain snatching

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment