SHIVAMOGGA LIVE NEWS | 11 SEPTEMBER 2023
SHIMOGA : ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ (Bus Stand) ಕಳ್ಳರ ಹಾವಳಿ ಮುಂದುವರೆದಿದೆ. ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಪರ್ಸ್ ಕಳ್ಳತನವಾಗಿರುವ (Purse theft) ಮತ್ತೊಂದು ಪ್ರಕರಣ ವರದಿಯಾಗಿದೆ.
ಶಿವಮೊಗ್ಗ ವಿದ್ಯಾನಗರದ ನಾಗರತ್ನಮ್ಮ ಎಂಬುವವರ ಪರ್ಸ ಕಳ್ಳತನವಾಗಿದೆ. ಮದುವೆ ಸಮಾರಂಭಕ್ಕೆ ತೆರಳಲು ದಾವಣಗೆರೆ ಬಸ್ ಹತುವ ಸಂದರ್ಭ ಘಟನೆ ಸಂಭವಿಸಿದೆ.
ಹೇಗಾಯ್ತು ಘಟನೆ?
ನಾಗರತ್ನಮ್ಮ ಬಸ್ ಹತ್ತುವಾಗ ರಶ್ ಇದ್ದಿದ್ದರಿಂದ ತಮ್ಮ ಬಳಿ ಇದ್ದ ಶಾಲ್ ತೆಗೆದು ಬಸ್ಸಿನ ಸೀಟಿಗೆ ಹಾಕಿದ್ದಾರೆ. ನಂತರ ಜನರ ಮಧ್ಯದಲ್ಲಿ ಬಸ್ ಹತ್ತಿ ಸೀಟಿನಲ್ಲಿ ಕುಳಿತಿದ್ದಾರೆ. ತಮ್ಮ ಸ್ನೇಹಿತೆಗಾಗಿ ಕಾದರು ಆಕೆ ಬರುವುದು ತಡವಾದ ಹಿನ್ನೆಲೆ ಬಸ್ಸಿನಿಂದ ಕೆಳಗಿಳಿದು ಪ್ಲಾಟ್ಫಾರಂನಲ್ಲಿ ಕುಳಿತಿದ್ದರು. ಈ ವೇಳೆ ಬ್ಯಾಗ್ ಪರಿಶೀಲಿಸಿದಾಗ ಪರ್ಸ್ ನಾಪತ್ತೆಯಾಗಿತ್ತು.
ಇದನ್ನೂ ಓದಿ – ಐರಾವತದಲ್ಲಿ ಶಿವಮೊಗ್ಗಕ್ಕೆ ಬಂದಿಳಿದ ದಂಪತಿಗೆ ಬಸ್ ನಿಲ್ದಾಣದಲ್ಲಿ ಕಾದಿತ್ತು ಶಾಕ್, ತಡವಾಗಿ ದೂರು ದಾಖಲು
ಚಿನ್ನಾಭರಣ ನಗದು ಮಿಸ್ಸಿಂಗ್
ನಾಗರತ್ನಮ್ಮ ಅವರ ಪರ್ಸಿನಲ್ಲಿ 2 ಸಾವಿರ ರೂ. ನಗದು 2.03 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇತ್ತು. ಎಲ್ಲೆಡೆ ಹುಡುಕಾಡಿದ ನಾಗರತ್ನಮ್ಮ ಕೊನೆಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದೇ ಮೊದಲಲ್ಲ
ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಬ್ಯಾಗಿನಿಂದ ಪರ್ಸ್ ಕಳ್ಳತನ ಇದೆ ಮೊದಲಲ್ಲ. ನಿಲ್ದಾಣದಲ್ಲಿ ಬಸ್ ಹತ್ತು ವೇಳೆ ಹೆಚ್ಚು ಜನ ಸಂದಣಿ ಇರುವಾಗ ನೂಕುನುಗ್ಗಲು ಉಂಟಾಗುತ್ತಾದೆ. ಈ ವೇಳೆ ಮಹಿಳೆಯರ ವ್ಯಾನಿಟಿ ಬ್ಯಾಗ್ ಅಥವಾ ಬ್ಯಾಗ್ ಜಿಪ್ ತೆಗೆದು ಪರ್ಸ್ ಕಳ್ಳತನ ಮಾಡಲಾಗುತ್ತಿದೆ.
ಇದನ್ನೂ ಓದಿ – KSRTC ಬಸ್ಸಿನಲ್ಲಿ ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ತೆಗೆದಾಗ ಮಹಿಳೆ, ಪತಿಗೆ ಕಾದಿತ್ತು ಶಾಕ್
ನಿಲ್ದಾಣದಲ್ಲಿ ಕಳ್ಳರ ಹಾವಳಿ ತಡೆಯಲು ಕೆಎಸ್ಆರ್ಟಿಸಿ ವತಿಯಿಂದ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೂ ಪ್ರಯಾಣಿಕರ ಸೋಗಿನಲ್ಲಿ ಕಳ್ಳತನ ಮಾಡಲಾಗುತ್ತಿದೆ. ಇದರಿಂದ ಕಳ್ಳರು ಯಾರು ಪ್ರಯಾಣಿಕರು ಯಾರು ಅನ್ನುವುದ ಗೊತ್ತಾಗುತ್ತಿಲ್ಲ. ಬಸ್ ಹತ್ತುವ ಸಂದರ್ಭ ಜನರು ತಮ್ಮ ಬ್ಯಾಗ್ ಮತ್ತು ಅಮೂಲ್ಯ ವಸ್ತುಳ ಕುರಿತು ಹಚ್ಚು ನಿಗಾ ವಹಿಸಬೇಕು ಎಂದು ಮೈಕ್ ಮೂಲಕ ಸೂಚನೆ ನೀಡಲಾಗುತ್ತಿದೆ. ಜನರ ಸೀಟಿನ ಕಡೆಗೆ ಗಮನ ಕೊಟ್ಟಾಗ ಕಳ್ಳರು ಪ್ರಯಾಣಿಕರ ಬ್ಯಾಗ್ ಮತ್ತು ಅಮೂಲ್ಯ ವಸ್ತುಗಳ ಕಳ್ಳತನ ಮಾಡುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200