ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA | 27 ಸೆಪ್ಟೆಂಬರ್ 2019
![ಸಿಗಂದೂರು ಲಾಂಚ್ ಬಳಿ ಕಳಸವಳ್ಳಿಯಲ್ಲಿನ ನಕಲಿ ರಸೀದಿ ಕೇಸ್, ಪಿಡಿಒ ವಿರುದ್ಧ ಕೇಸ್ ಕೈಬಿಡುವಂತೆ ಅಗ್ರಹ 1 71590847 931935990501155 4041436531863322624 n.jpg? nc cat=103& nc oc=AQknXyscFsn18Sa5sBhXTfQwAX8HP23t4yjBhk5KFBj6c fDq9BtZUWHCghACvPg01Exe4TPSROgBaf2SyNfXEal& nc ht=scontent.fixe1 1](https://scontent.fixe1-1.fna.fbcdn.net/v/t1.0-9/71590847_931935990501155_4041436531863322624_n.jpg?_nc_cat=103&_nc_oc=AQknXyscFsn18Sa5sBhXTfQwAX8HP23t4yjBhk5KFBj6c-fDq9BtZUWHCghACvPg01Exe4TPSROgBaf2SyNfXEal&_nc_ht=scontent.fixe1-1.fna&oh=a53a18a1b19fee9b3a2632f67b9faf7a&oe=5DF27D9F)
ಸಿಗಂದೂರು ಲಾಂಚ್ ಬಳಿ, ಕಳಸವಳ್ಳಿ ಗ್ರಾಮದಲ್ಲಿನ ನಕಲಿ ರಸೀದಿ ಪ್ರಕರಣದಲ್ಲಿ ತುಮರಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಇವತ್ತು ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
![ಸಿಗಂದೂರು ಲಾಂಚ್ ಬಳಿ ಕಳಸವಳ್ಳಿಯಲ್ಲಿನ ನಕಲಿ ರಸೀದಿ ಕೇಸ್, ಪಿಡಿಒ ವಿರುದ್ಧ ಕೇಸ್ ಕೈಬಿಡುವಂತೆ ಅಗ್ರಹ 2 Prashanth GPS copy](https://shivamoggalive.com/wp-content/uploads/2019/09/Prashanth-GPS-copy.jpg)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಅಧಿಕಾರಿಗಳು, ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಶಾಸಕರು, ಉಪವಿಭಾಗಾಧಿಕಾರಿ ಕಚೇರಿ ಮತ್ತು ತಾಲೂಕು ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.
ತುಮರಿ ಪ್ರಭಾರ ಪಿಡಿಒ ಇಮ್ತಿಯಾಜ್ ಪಾಷಾ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅವರ ವಿರುದ್ಧ ಮಾಡಲಾಗಿರುವ ಆರೋಪ ಆಧಾರ ರಹಿತವಾಗಿದೆ. ನಕಲಿ ರಶೀದಿ ಮೇಲೆ ಪಂಚಾಯಿತಿ ಮೊಹರಾಗಲಿ, ಪಿಡಿಒ ಸಹಿಯಾಗಲಿ ಇಲ್ಲ. ದುರುದ್ದೇಶಪೂರ್ವಕವಾಗಿ ನಕಲಿ ರಶೀದಿ ಮುದ್ರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಲಾಖಾ ವಿಚಾರಣೆ ನಡೆಸದೆ ಪಿಡಿಒ ವಿರುದ್ಧ ಪ್ರಕರಣ ದಾಖಲಿಸಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಘದ ಅಧ್ಯಕ್ಷ ಮೊಹಮ್ಮದ್ ಹನೀಫ್, ಕಾರ್ಯದರ್ಶಿ ಆದರ್ಶ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಪ್ರಮುಖರಾದ ಹೆಚ್.ಎಂ.ಪಂಡಿತಾರಾಧ್ಯ, ಕೃಷ್ಣಪ್ಪ, ಸುರೇಶ್, ಅಶ್ಫಾಕ್ ಅಹಮ್ಮದ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
![ಸಿಗಂದೂರು ಲಾಂಚ್ ಬಳಿ ಕಳಸವಳ್ಳಿಯಲ್ಲಿನ ನಕಲಿ ರಸೀದಿ ಕೇಸ್, ಪಿಡಿಒ ವಿರುದ್ಧ ಕೇಸ್ ಕೈಬಿಡುವಂತೆ ಅಗ್ರಹ 3 70578780 2398489037062520 5710410120999993344 n.jpg? nc cat=106& nc oc=AQlzYfLXSaaAWUDeq6fGt7Oqe 7sm1WJYMnexIxkKZvwOgMdx1pjFmWwkDztZYuSwwC4Aqm4Woez4Z2yEG4USs9O& nc ht=scontent.fixe1 1](https://scontent.fixe1-1.fna.fbcdn.net/v/t1.0-9/70578780_2398489037062520_5710410120999993344_n.jpg?_nc_cat=106&_nc_oc=AQlzYfLXSaaAWUDeq6fGt7Oqe-7sm1WJYMnexIxkKZvwOgMdx1pjFmWwkDztZYuSwwC4Aqm4Woez4Z2yEG4USs9O&_nc_ht=scontent.fixe1-1.fna&oh=02f4e965596fe89ac03ff1558974c6dc&oe=5E29356E)
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಶಿವಮೊಗ್ಗ ಲೈವ್.ಕಾಂ