ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 27 ಸೆಪ್ಟೆಂಬರ್ 2019
![ಡಾಕ್ಟರ್ ನಿರ್ಲಕ್ಷ್ಯಕ್ಕೆ ವಿದ್ಯಾನಗರದ ಯುವಕ ಬಲಿ, ಆಸ್ಪತ್ರೆ, ಡಾಕ್ಟರ್ ವಿರುದ್ಧ ಕಂಪ್ಲೇಂಟ್ 1 70321174 2398544340390323 247630144791904256 n.jpg? nc cat=108& nc oc=AQmrWgA53QaN35WxlrI doZ7ox4c7 lpMmpNGbHc70lGw6ZWKtrjlVfivxDXNk4vru9tyeAraAEiH7WzaigQtOJQ& nc ht=scontent.fixe1 1](https://scontent.fixe1-1.fna.fbcdn.net/v/t1.0-9/70321174_2398544340390323_247630144791904256_n.jpg?_nc_cat=108&_nc_oc=AQmrWgA53QaN35WxlrI-doZ7ox4c7-lpMmpNGbHc70lGw6ZWKtrjlVfivxDXNk4vru9tyeAraAEiH7WzaigQtOJQ&_nc_ht=scontent.fixe1-1.fna&oh=49f113020bca33696f232886464ac1d4&oe=5E3BE650)
ವೈದ್ಯರ ನಿರ್ಲಕ್ಷ್ಯಕ್ಕೆ ಶಿವಮೊಗ್ಗ ವಿದ್ಯಾನಗರದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಪ್ರತಾಪ್ ಸಿಂಗ್ (23) ಮೃತ ಯುವಕ. ಮೂರು ವರ್ಷದ ಹಿಂದೆ ಅಪಘಾತಕ್ಕೀಡಾಗಿ ಪ್ರತಾಪ್ ಸಿಂಗ್ ಗಾಯಗೊಂಡಿದ್ದರು. ಅದರ ಮುಂದುವರೆದ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೆ.24ರಂದು ಆಪರೇಷನ್ ಮಾಡಲಾಗಿತ್ತು. ಮರುದಿನ ಪ್ರತಾಪ್ ಸಿಂಗ್’ನನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಮನೆಗೆ ಹಿಂತಿರುಗುವಾಗ ಪ್ರತಾಪ್ ಸಿಂಗ್ ಹಲವು ಬಾರಿ ವಾಂತಿ ಮಾಡಿಕೊಂಡಿದ್ದಾನೆ. ಪ್ರತಾಪ್ ಸಿಂಗ್ ಅಸ್ವಸ್ಥಗೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಚಿಕಿತ್ಸೆ ನೀಡಿದ ವೈದ್ಯರು ಮಾತ್ರೆ ತೆಗೆದುಕೊಳ್ಳುವಂತೆ ವಾಟ್ಸಪ್ ಮಾಡಿದ್ದರು. ಆ ಮಾತ್ರೆ ಸೇವಿಸಿ ಮಲಗಿದ್ದ ಪ್ರತಾಪ್ ಸಿಂಗ್’ಗೆ ಉಸಿರಾಟದ ಸಮಸ್ಯೆ ಎದುರಾಗಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಕರೆದೊಯ್ದಾಗ ಪ್ರತಾಪ್ ಸಿಂಗ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಮತ್ತು ಸಂಬಂಧಿಕರು ಮಣಿಪಾಲ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ದೂರು ನೀಡಿದ್ದಾರೆ.
![ಡಾಕ್ಟರ್ ನಿರ್ಲಕ್ಷ್ಯಕ್ಕೆ ವಿದ್ಯಾನಗರದ ಯುವಕ ಬಲಿ, ಆಸ್ಪತ್ರೆ, ಡಾಕ್ಟರ್ ವಿರುದ್ಧ ಕಂಪ್ಲೇಂಟ್ 2 Prashanth GPS copy](https://shivamoggalive.com/wp-content/uploads/2019/09/Prashanth-GPS-copy.jpg)
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಶಿವಮೊಗ್ಗ ಲೈವ್.ಕಾಂ